ಕೆಂಡ ಕಾರುತ ಸೂರ್ಯ
ಹುಟ್ಟಿ ಬರುವುದನ್ನೆ
ತವಕದಿಂದ ನೋಡುತ್ತಿದ್ದೆ.
ಸೂರ್ಯಕಾಂತೆಯರ ದಂಡು
ನಿಗಿನಿಗಿ ಕೆಂಡ ಸೂರ್ಯನ
ಬಿಗಿದಪ್ಪಲು ಕಾದಿರುವ,
ತಪ್ತ ಕಾಂತೆಯರು-
ಆಕಾಶ ನೋಡುತ್ತಿರಲು
ಭೂಮಂಡಲಕೆ ಹನಿಹನಿಯಾಗಿ
ತೊಟ್ಟಿಕ್ಕುವ ಕೆಂಡದ ಮಳೆ
ರಕ್ತದ ಹೊಳೆಯಲಿ-
ತಂಪು ಮಾಡಿ ಕಾವು ಕೊಟ್ಟು
ಹಸಿರು ಬೆಳೆ ಬೆಳೆಯಲು
ಭೂಮಿಯ ತಗ್ಗು ದಿನ್ನೆಗಳ
ಸರಿಪಡಿಸಿ, ಹದಗೊಳಿಸಿ
ನೀರು ಗೊಬ್ಬರ ನೀಡಿ
ಸೊಕ್ಕಿನಿಂದ ಬರುವ
ಬೆಳೆಯ ಸಿರಿ ನೋಡಲು
ಮಳೆಯ ಹನಿ ಕಾದಿರಲು
ಭೂತದಲಿ ಹರಿದ ರಕ್ತದ
ಕಮಟು ವಾಸನೆ
ಮೂಗಿಗೆ ಬಡಿದಾಗ
ಕ್ಷಣಕಾಲ ಖಿನ್ನತೆ ಆವರಿಸಿ
ಮತ್ತೇ ಹಟ ತೊಟ್ಟು
ಹರಗುತ್ತ ಬಿರು ನೆಲವ
ಹದಗೊಳಿಸುತ್ತ
ತಗ್ಗು ದಿನ್ನೆಗಳ ಸರಿಪಡಿಸಿ
ಹುಲುಸಾಗಿ ಬರುವ
ಸಮತೆಯ ಬೆಳೆ
ಬೆಳೆಯಲು ಹೊರಟಿರುವರು
ಸೂರ್ಯಕಾಂತೆಯರು.
*****
Related Post
ಸಣ್ಣ ಕತೆ
-
ಪ್ರೇಮನಗರಿಯಲ್ಲಿ ಮದುವೆ
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…
-
ಗುಲ್ಬಾಯಿ
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…