ಶೂನ್ಯ

ಒಂದೇ ಸಮನೆ
ಸುರಿಯುತ್ತಿದೆ
ಮಸಲಧಾರೆ.
ಅಬ್ಬರವೇನು? ಆರ್ಭಟವೇನು?
ಎಲ್ಲಿ ಅಡಗಿತ್ತೋ
ಬೆಟ್ಟ ಗುಡ್ಡಗಳ ನಡುವೆ
ಎಷ್ಟು ದಿನಗಳಾದವೋ
ಕಾದು ಕುಳಿತ ಕಣ್ಣುಗಳು
ಮಂಜಾಗಿ ಮರೆಯಾದವು
ಯಾರು ದಬ್ಬಿದರೋ ಕಾಣೆ
ದಿಢೀರನೆ ಬಿತ್ತು
ಸುಮ್ಮನೆ ಬಂದರೆ ಕೇಳಿ
ಬರುವಾಗಲೆ ದೊಡ್ಡ ಪ್ರಚಾರ
ಗಾಳಿ ಗುಡುಗು ಸಿಡಿಲು ಮಿಂಚು
ಎದೆಯೊಡೆದು ಸಾಯಬೇಕು.
ಒಡಲೊಳಗೆ ಕುದ್ದು ಕುದ್ದು
ಮೋಡದೊಳಗೆ ಮಡುಗಟ್ಟಿ
ತಣ್ಣಗೆ ತಂಪಾಗಿ ಆಲಿಕಲ್ಲು
ಸರಿದ ರಭಸಕ್ಕೆ
ಬೆಚ್ಚಿ ಕಣ್ಣು ಬಿಟ್ಟವು ಲೋಕ
ಎಷ್ಟು ಸುರಿದರೇನು?
ಕಡಲು ತು೦ಬಿದರೇನು?
ಒಡಲು ತಂಪಾದರೇನು?
ಭೂಮಿ ತಣಿಯಲಿಲ್ಲ
ಹಸಿರು ಉಸಿರಾಗಲಿಲ್ಲ
ಭ್ರಮಾಧೀನ ಬದುಕಲ್ಲಿ
ಎಲ್ಲವೂ ಶೂನ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ದೇವರ ಹಂಗೇಕೆ
Next post ನಿಜ ಹೇಳಿ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys