Home / ಕವನ / ಕವಿತೆ / ಏಕಾಂತ

ಏಕಾಂತ

ದಂಡೆಗೆ ಅಪ್ಪಳಿಸುವ ಅಲೆಗಳಲಿ
ನಿನ್ನ ನೆರಳು ಹರಡಿ ಗಾಳಿಯಲಿ,
ರಹಸ್ಯದ ಅಮಲೇರಿಸುವ ಘಮ.
ಬದುಕಿನ ಕನಸುಗಳೆಲ್ಲಾ ಖಾಸಗೀ
ಮೂಲೆಯಲ್ಲಿ ಅರಳಿ, ತುಯ್ಯುತ್ತಿರುವ
ಹಡಗುಗಳ ಪುಟಗಳು.

ನನ್ನ ಕೋಣೆಯಲಿ ಸುಮ್ಮನೇ ಒಬ್ಬಳೆ
ಕುಳಿತು ನಿನ್ನ ಬಗ್ಗೆ ಧ್ಯಾನಿಸುವುದು ದೊಡ್ಡ ದೈವ.
ಹಾದಿ ತಪ್ಪಿದ ದಾರಿಗಳೆಲ್ಲಾ ಅಲೆದು ಸುಸ್ತಾಗಿ
ಒಂದು ಒಳಿತಿಗಾಗಿ ಬೆಳಕಿನ ಕಿರಣಗಳ
ಗುಂಗಿನಲಿ, ಸಮಾಧಿಯಲ್ಲಿ ಹುಡುಕುವ ಗಾಳಿಪಟಗಳು.

ಎಲ್ಲಾ ಸಂತೆ ಜಾತ್ರೆಯ ಗದ್ದಲಗಳು ತರಂಗಗಳು,
ಆತ್ಮ ನಿವೇದನೆಯ ಏಕಾಂತದಲಿ, ಆಲಾಪಗಳಾಗಿ
ಅವನ ಬಿಟ್ಟು ಇವನ್ಯಾರು ಎನ್ನುವ ಭ್ರಮೆಯಲಿ,
ತೇಲುವ ಮೋಡಗಳು, ಕಂಪನಗಳು ಅಂಚಿನಲಿ
ಇಂದ್ರೀಯ ಸುಖದ ತರ್ಕವಿಲ್ಲದ ದೃಶ್ಯಗಳ ಸಂಪುಟಗಳು.

ವೇದನೆಗಳಲಿ ಖುಷಿಯಲಿ ಮುಪ್ಪುರಿಗೊಂಡ
ನರಗಳು ಆಕಾಶದ ನೀಲಿಯಲಿ ತೀಷ್ಟವಾಗಿ
ಮಿಳಿತಗೊಂಡು ಬೆಳಕಿನ ಶ್ವೇತ ಕಿರಣಗಳು,
ಪೀಡಿಸಿ ರೇಗಿಸಿ, ದುಃಖಿಸಿ ಕರುಣೆಯಿಲ್ಲದ
ಮಾಟಗಾತಿಯ ಒಳಸುಳಿಯಲಿ ಸಾವಿರ ಬಂಡಿಯ
ಸಾಲುಗಳು.
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...