ಈ ಹೊತ್ತು

ಹಳದಿ ಎಲೆ ಉದುರಿ ಹಸಿರು ಎಲೆ ಚಿಗುರು,
ಹೊದ್ದ ಹೂವ ಗಿಡಗಳಿಗೆ ಅವನ ಸ್ಪರ್ಶ ಇನ್ನೂ,
ರೆಕ್ಕೆ ಬಿಚ್ಚಿದ ಮುದ್ದು ಮರಿಗಳ ಕೆಂಪು ಕೊಕ್ಕು,
ಮೋಡಗಳ ಬೀಜ ಹರಡಿದ ನೀಲ ಬಾನು,
ನಾಳೆಯ ಚಿಂತೆಯಿರದ ವಸಂತನ ಹಸಿರು ಓಕುಳಿ.

ಮೊಳೆತ ಮೌನ ಮಾತುಗಳಿಗೆ ಸೂರ್ಯನ
ಕಿರಣಗಳ ಪ್ರಕಾಶ ತಬ್ಬಿದ ಮುಂಜಾನೆ,
ಮನದ ಹೆಣಿಕೆಯ ನೇಯ್ಗೆಯಲಿ, ಜೀವ
ಸೋಸುವ ಜಾಲ ಹರಡಿ ತಣ್ಣಗೆ ಹರಿದ ನದಿ,
ಝಳದ ಖಾವೆಲ್ಲಾ ಹಾಳೆಗಿಳಿಸಿದ ಕವಿ.

ಜೀವ ತೊಟ್ಟಿಕ್ಕುವ ಬೆಳಗಿಗೆ, ಹಾಲು ಹಿಂಡಿದ
ಅವ್ವ, ಚಿಲಿಪಿಲಿ ಗುಟ್ಟಿದ ಹಕ್ಕಿಹಾಡಿಗೆ ಪಾಟೀ
ಹಿಡಿದ ಮಕ್ಕಳು, ಸೂರ್ಯನ ಅಗ್ನಿ ಸ್ಪರ್ಶದ ಅಡುಗೆ
ಮನೆಯಲ್ಲಿ ಅರಳಿದ ಘಮ ಬಿಳಿಬಿಳಿ ಅನ್ನ,
ಪೇಟೆಯಲ್ಲಿ ತಾಜಾ ಮೀನುಗಳ ಮಾರಾಟಗಿತ್ತ ಮೊಗೆರ್ತಿ.

ದುಡಿವ ಕೈಗಳ ಶಕ್ತಿ ಕೊಂಚವೂ ಕಡಿಮೆ ಆಗದ ಹೊತ್ತ
ಮಿಡಿವ ಹೃದಯಕೆ ಒಂದು ನೇವರಿಗೆ ಮತ್ತು
ಹರಿದ ಕಣ್ಣೀರಿಗೆ ಒಂದು ಜೀವ ಸ್ಪರ್ಶ ನೀಡಿ, ಹೂವ
ಹೂವ ಮೇಲೆ ದುಂಬಿಗಳು ಹಾರಾಡಿ ಒಂದು ರಾಗ,
ಎದೆಯ ಆಳಕೆ ಇಳಿದ ದರ್ಶನದ ಹರಿಕಾರ ಪ್ರೇಮಿ ನೀನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧೀ ತಾತ
Next post ಪಾಂಡವ-ಕೌರವರ ಜನನ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…