Home / ಕವನ / ಕವಿತೆ / ಈ ಹೊತ್ತು

ಈ ಹೊತ್ತು

ಹಳದಿ ಎಲೆ ಉದುರಿ ಹಸಿರು ಎಲೆ ಚಿಗುರು,
ಹೊದ್ದ ಹೂವ ಗಿಡಗಳಿಗೆ ಅವನ ಸ್ಪರ್ಶ ಇನ್ನೂ,
ರೆಕ್ಕೆ ಬಿಚ್ಚಿದ ಮುದ್ದು ಮರಿಗಳ ಕೆಂಪು ಕೊಕ್ಕು,
ಮೋಡಗಳ ಬೀಜ ಹರಡಿದ ನೀಲ ಬಾನು,
ನಾಳೆಯ ಚಿಂತೆಯಿರದ ವಸಂತನ ಹಸಿರು ಓಕುಳಿ.

ಮೊಳೆತ ಮೌನ ಮಾತುಗಳಿಗೆ ಸೂರ್ಯನ
ಕಿರಣಗಳ ಪ್ರಕಾಶ ತಬ್ಬಿದ ಮುಂಜಾನೆ,
ಮನದ ಹೆಣಿಕೆಯ ನೇಯ್ಗೆಯಲಿ, ಜೀವ
ಸೋಸುವ ಜಾಲ ಹರಡಿ ತಣ್ಣಗೆ ಹರಿದ ನದಿ,
ಝಳದ ಖಾವೆಲ್ಲಾ ಹಾಳೆಗಿಳಿಸಿದ ಕವಿ.

ಜೀವ ತೊಟ್ಟಿಕ್ಕುವ ಬೆಳಗಿಗೆ, ಹಾಲು ಹಿಂಡಿದ
ಅವ್ವ, ಚಿಲಿಪಿಲಿ ಗುಟ್ಟಿದ ಹಕ್ಕಿಹಾಡಿಗೆ ಪಾಟೀ
ಹಿಡಿದ ಮಕ್ಕಳು, ಸೂರ್ಯನ ಅಗ್ನಿ ಸ್ಪರ್ಶದ ಅಡುಗೆ
ಮನೆಯಲ್ಲಿ ಅರಳಿದ ಘಮ ಬಿಳಿಬಿಳಿ ಅನ್ನ,
ಪೇಟೆಯಲ್ಲಿ ತಾಜಾ ಮೀನುಗಳ ಮಾರಾಟಗಿತ್ತ ಮೊಗೆರ್ತಿ.

ದುಡಿವ ಕೈಗಳ ಶಕ್ತಿ ಕೊಂಚವೂ ಕಡಿಮೆ ಆಗದ ಹೊತ್ತ
ಮಿಡಿವ ಹೃದಯಕೆ ಒಂದು ನೇವರಿಗೆ ಮತ್ತು
ಹರಿದ ಕಣ್ಣೀರಿಗೆ ಒಂದು ಜೀವ ಸ್ಪರ್ಶ ನೀಡಿ, ಹೂವ
ಹೂವ ಮೇಲೆ ದುಂಬಿಗಳು ಹಾರಾಡಿ ಒಂದು ರಾಗ,
ಎದೆಯ ಆಳಕೆ ಇಳಿದ ದರ್ಶನದ ಹರಿಕಾರ ಪ್ರೇಮಿ ನೀನು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...