ಅನಂತ ಸಾಹಸ

ಆನಂತ್ಯದೊಂದು ನವ ಜಲಧಿಯಲ್ಲಿ ಹೊರಟಿಹುದು ನನ್ನ ನಾವೆ.
ಎಲ್ಲಿ ಹೊರಟಿತೋ; ತನ್ನ ಮಾನವ್ಯ ಬಿಟ್ಟು ಬೇರೆ ಠಾವೆ?
ಮಸಕು ಮಸಕು ಹಿಂದೆಲ್ಲ, ಮುಂದೆ ಪಾತಾಳಖಾತ ಸಿಂಧು
ಗೊತ್ತುಗುರಿಯಿಲ್ಲ, ದೂರ ಧ್ರುವದಾಚೆ ಬೆಳಕು ಸ್ಫಟಿಕ ಬಿಂದು!

ಕಾಣದೊಂದು ಕೈ ಹುಟ್ಟ ಹಾಕುತಿದೆ, ಕಾಂಬೆ ಕತ್ತಲೊಂದೆ
ಇರುಳು ರಾತ್ರಿ ಅಮವಾಸಿ ಗುಹೆಯು ಬಾಯ್ತೆರೆದ ಹಾಗೆ ಮುಂದೆ.
ಒಳಗೆ ಕೆಳಗೆ ಹಸಿನಾತವೆಂದು ಪಂಚಾಸ್ಯ ಗುಡುಗುತಿಹುದು.
ಸತ್ತ ಒಲವು ಬೇಸತ್ತ ಒಲವು ಘನ ನಿದ್ರೆ ತೊಡಗುತಿಹುದು.

ಅರಸಿ ಹೊರಟ ಆ ಮಹಾಶಕ್ತಿ ನನ್ನನ್ನೆ ಸುತ್ತಿ ಮುತ್ತಿ
ತೋಡಿಹುದಗಳ್ತೆ ಮುಟ್ಟಿಹುದು ಅಬ್ಬ ನಾಗೇಂದ್ರನನಂತ ನೆತ್ತಿ
ಮೇಲೆ ನೋಡಿದರೆ ಯಾವ ಜೀವವೂ ತುಳಿಯದಿದ್ದ ಶಿಖರ
ಮುಳುಗಿ ಹೋದೆ ಅದ್ವೈತ ಐಕ್ಯದಲಿ ಅದರ ಆಚೆ ಪ್ರಖರ.

ಎಂಥ ಜಾಗೃ ಉರಿದೆದ್ದ ಹಾಗೆ ಭಗವಂತ! ಏನು ಕಿಚ್ಚು!
ಅವತರಿಸಲಿರುವ ಆ ಮೆಚ್ಚು ಮಾಟ ಆನಂದವೆಂಬ ಅಚ್ಚು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವನ ಕತೆ
Next post ವಾಗ್ದೇವಿ – ೩೩

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…