ಕನಸು ಕಾಣುತ್ತಿದ್ದೇವೆ
ಮುಂಬರುವ ದಿನಗಳಿಗಾಗಿ
ಆಸೆ ಭರವಸೆಯ ಹೊರೆ ಹೊತ್ತು
ತುಡಿಯುತಿದೆ ಜೀವ
ಮಿಡಿಯುತಿದೆ ಜೀವ
ಕಾತರಿಸುತಲಿವೆ ಕಂಗಳು
ಬರುವ ನಾಳೆಗಳಿಗಾಗಿ
ಎಂದು ಬರುವುದೋ ರಾಮರಾಜ್ಯ
ಅಳಿಸಿ ರಾವಣರ ಸಾಮ್ರಾಜ್ಯ
ಹಿಂದೆ ಇತ್ತಂತೆ ಸುಂದರ ಸುಭಿಕ್ಷಕಾಲ
ಈಗೆಲ್ಲಾ ಕರಾಳ ಮೋಸ ವಂಚನೆಯ ಕಾಲ
ಮುತ್ತುರತ್ನವ ಬಳ್ಳದಲಿ ಮಾರುತ್ತಿದ್ದರಂತೆ
ಇದೇನು ನಿಜವೋ ಅಡುಗೂಲಜ್ಜಿ ಕಥೆಯೋ
ನಂಬುವುದಾದರೂ ಹೇಗೆ
ಮಾನವನ್ನ ಮಾನವನೇ
ಕಿತ್ತು ತಿನ್ನುತ್ತಿರುವಾಗ
ಪಾರಿವಾಳಕೆ ದೇಹವ ಒಪ್ಪಿಸಿದ
ಶಿಬಿ ಚಕ್ರವರ್ತಿಯ ತ್ಯಾಗ
*****
Related Post
ಸಣ್ಣ ಕತೆ
-
ಶಾಕಿಂಗ್ ಪ್ರೇಮ ಪ್ರಕರಣ
ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…
-
ರಣಹದ್ದುಗಳು
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
-
ಕೇರೀಜಂ…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…