ಹೆಚ್ಚು ಬುದ್ಧಿವಂತರು ಯಾರು?

ಬೆಂಗಳೂರೆಂಬ ಪಟ್ಟಣದಲ್ಲಿದ್ದ ರಾಜಕುಮಾರ ಬಡಿಗೇರ, ಜಯಪ್ಪ, ಶಂಕರ್‌ ಗುಡಿಮನಿ- ಮೂವರು ಸೇರಿ ತಮ್ಮಳ್ಳಿಗೆ ಮಕರ ಸಂಕ್ರಾಂತಿ ಹಬ್ಬಕ್ಕೆ ಕಾರಿನಲ್ಲಿ ತೆರಳಿದರು.

ಹಳ್ಳಿಯಲ್ಲಿ ಬಾಲ್ಯದ ಗೆಳೆಯ ಲಕ್ಷ್ಮಣ ಪಾತ್ರೋಟನೊಂದಿಗೆ ಹೊಲ, ಗದ್ದೆ, ತೋಟ, ಹಳ್ಳ, ಕೊಳ್ಳ, ಬಾವಿ ಸುತ್ತಲು ಹೋದರು.

ಅಲ್ಲೊಂದು ಹಳ್ಳದ ಪೊದೆಯಲ್ಲಿ ಅಸ್ಥಿಪಂಜರವೊಂದು ಬಿದ್ದಿತ್ತು. ಎಲ್ಲರೂ ಅದನ್ನು ನೋಡಿ ದಂಗುಬಡಿದು ಹೋದರು.

ಅದಕ್ಕೆ ಲಕ್ಷ್ಮಣ ಪಾತ್ರೋಟ್ ಹೇಳಿದ ‘ಗೆಳೆಯರೆ… ಆ ಆಸ್ಥಿಪಂಜರದ ಗೊಡವೆ ನಮಗೇಕೆ? ನಾಳೆ ಸಂಕ್ರಾಂತಿ ಹಬ್ಬವಿದೆ. ಸ್ನಾನ, ಪೂಜೆ, ಕಬ್ಬು, ಸಿಹಿಗೆಣಸು, ಅವರೆಕಾಯಿ, ನೆಲಗಡಲೆ, ಹೂವುಹಣ್ಣು, ಬೂದುಗುಂಬಳಕಾಯಿ ಇತ್ಯಾದಿ ಹೊತ್ತು ಹೋಗುವ, ಅದನ್ನು ಅಲ್ಲೇ ಬಿಸಾಕಿ ಅದರ ಸುದ್ದಿಗದ್ದಲ ನಮಗೇಕೆ?’ ಎಂದು ಕೈಮುಗಿದು ನಿಂತ.

ರಾಜಕುಮಾರ್‌ ಬಡಿಗೇರ ಆ ಆಸ್ಥಿಪಂಜರವನ್ನೆಲ್ಲ ಫೂನರ್‌ ನಿರ್ಮಾಣ ಮಾಡಿ ಸಂಭ್ರಮಿಸಿದ.

‘ನಾನೇನು ಕಡಿಮೆನೇ…’ ಎಂದು ಶಂಕರ್ ಗುಡಿಮನಿ ಅದಕ್ಕೆ ರಕ್ತ, ಮಾಂಸ, ಆಕಾರ ನೀಡಿಯೇ ಬಿಟ್ಟ!

ಆಹಾ ಅದಕ್ಕೆ ಉಸಿರು ಜೀವ ತುಂಬಿದ ಜಯಪ್ಪ!

ಅಬ್ಬಾ! ಪಿಶಾಚಿಯೊಂದು ಭೂಮಿ ಆಕಾಶದೆತ್ತರ ಎದ್ದು ನಿಂತು- ‘ನನ್ನ ಬದುಕಿಸಿದವರ್‍ಯಾರು? ಮೊದಲು ಅವರನ್ನು ನುಂಗಿ ಬಿಡುವೆ’ ಎಂದು ಮೂವರನ್ನು ನುಂಗಿ ನೀರು ಕುಡಿಯಿತು.

ಇತ್ತ ಪರಿಣಾಮದ ಅರಿವು ಊಹಿಸಿ ಆಗಲೆ ಊರ ಕಡೆ ಓಟ ಕಿತ್ತಿದ್ದ… ಲಕ್ಷ್ಮಣ ಪಾತ್ರೋಟ ಮಹಾ ಬುದ್ಧಿವಂತನೆನಿಸಿದ್ದ!

ಹಳ್ಳಿ ಮನುಷ್ಯ… ಓಡೋಡಿ ಮನೆ ಸೇರಿದ್ದ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮೂಹ
Next post ಹಾಲಿಂದ ಮಾಡಿದರೊ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys