ಹೆಚ್ಚು ಬುದ್ಧಿವಂತರು ಯಾರು?

ಬೆಂಗಳೂರೆಂಬ ಪಟ್ಟಣದಲ್ಲಿದ್ದ ರಾಜಕುಮಾರ ಬಡಿಗೇರ, ಜಯಪ್ಪ, ಶಂಕರ್‌ ಗುಡಿಮನಿ- ಮೂವರು ಸೇರಿ ತಮ್ಮಳ್ಳಿಗೆ ಮಕರ ಸಂಕ್ರಾಂತಿ ಹಬ್ಬಕ್ಕೆ ಕಾರಿನಲ್ಲಿ ತೆರಳಿದರು.

ಹಳ್ಳಿಯಲ್ಲಿ ಬಾಲ್ಯದ ಗೆಳೆಯ ಲಕ್ಷ್ಮಣ ಪಾತ್ರೋಟನೊಂದಿಗೆ ಹೊಲ, ಗದ್ದೆ, ತೋಟ, ಹಳ್ಳ, ಕೊಳ್ಳ, ಬಾವಿ ಸುತ್ತಲು ಹೋದರು.

ಅಲ್ಲೊಂದು ಹಳ್ಳದ ಪೊದೆಯಲ್ಲಿ ಅಸ್ಥಿಪಂಜರವೊಂದು ಬಿದ್ದಿತ್ತು. ಎಲ್ಲರೂ ಅದನ್ನು ನೋಡಿ ದಂಗುಬಡಿದು ಹೋದರು.

ಅದಕ್ಕೆ ಲಕ್ಷ್ಮಣ ಪಾತ್ರೋಟ್ ಹೇಳಿದ ‘ಗೆಳೆಯರೆ… ಆ ಆಸ್ಥಿಪಂಜರದ ಗೊಡವೆ ನಮಗೇಕೆ? ನಾಳೆ ಸಂಕ್ರಾಂತಿ ಹಬ್ಬವಿದೆ. ಸ್ನಾನ, ಪೂಜೆ, ಕಬ್ಬು, ಸಿಹಿಗೆಣಸು, ಅವರೆಕಾಯಿ, ನೆಲಗಡಲೆ, ಹೂವುಹಣ್ಣು, ಬೂದುಗುಂಬಳಕಾಯಿ ಇತ್ಯಾದಿ ಹೊತ್ತು ಹೋಗುವ, ಅದನ್ನು ಅಲ್ಲೇ ಬಿಸಾಕಿ ಅದರ ಸುದ್ದಿಗದ್ದಲ ನಮಗೇಕೆ?’ ಎಂದು ಕೈಮುಗಿದು ನಿಂತ.

ರಾಜಕುಮಾರ್‌ ಬಡಿಗೇರ ಆ ಆಸ್ಥಿಪಂಜರವನ್ನೆಲ್ಲ ಫೂನರ್‌ ನಿರ್ಮಾಣ ಮಾಡಿ ಸಂಭ್ರಮಿಸಿದ.

‘ನಾನೇನು ಕಡಿಮೆನೇ…’ ಎಂದು ಶಂಕರ್ ಗುಡಿಮನಿ ಅದಕ್ಕೆ ರಕ್ತ, ಮಾಂಸ, ಆಕಾರ ನೀಡಿಯೇ ಬಿಟ್ಟ!

ಆಹಾ ಅದಕ್ಕೆ ಉಸಿರು ಜೀವ ತುಂಬಿದ ಜಯಪ್ಪ!

ಅಬ್ಬಾ! ಪಿಶಾಚಿಯೊಂದು ಭೂಮಿ ಆಕಾಶದೆತ್ತರ ಎದ್ದು ನಿಂತು- ‘ನನ್ನ ಬದುಕಿಸಿದವರ್‍ಯಾರು? ಮೊದಲು ಅವರನ್ನು ನುಂಗಿ ಬಿಡುವೆ’ ಎಂದು ಮೂವರನ್ನು ನುಂಗಿ ನೀರು ಕುಡಿಯಿತು.

ಇತ್ತ ಪರಿಣಾಮದ ಅರಿವು ಊಹಿಸಿ ಆಗಲೆ ಊರ ಕಡೆ ಓಟ ಕಿತ್ತಿದ್ದ… ಲಕ್ಷ್ಮಣ ಪಾತ್ರೋಟ ಮಹಾ ಬುದ್ಧಿವಂತನೆನಿಸಿದ್ದ!

ಹಳ್ಳಿ ಮನುಷ್ಯ… ಓಡೋಡಿ ಮನೆ ಸೇರಿದ್ದ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮೂಹ
Next post ಹಾಲಿಂದ ಮಾಡಿದರೊ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…