ಹೆಚ್ಚು ಬುದ್ಧಿವಂತರು ಯಾರು?

ಬೆಂಗಳೂರೆಂಬ ಪಟ್ಟಣದಲ್ಲಿದ್ದ ರಾಜಕುಮಾರ ಬಡಿಗೇರ, ಜಯಪ್ಪ, ಶಂಕರ್‌ ಗುಡಿಮನಿ- ಮೂವರು ಸೇರಿ ತಮ್ಮಳ್ಳಿಗೆ ಮಕರ ಸಂಕ್ರಾಂತಿ ಹಬ್ಬಕ್ಕೆ ಕಾರಿನಲ್ಲಿ ತೆರಳಿದರು.

ಹಳ್ಳಿಯಲ್ಲಿ ಬಾಲ್ಯದ ಗೆಳೆಯ ಲಕ್ಷ್ಮಣ ಪಾತ್ರೋಟನೊಂದಿಗೆ ಹೊಲ, ಗದ್ದೆ, ತೋಟ, ಹಳ್ಳ, ಕೊಳ್ಳ, ಬಾವಿ ಸುತ್ತಲು ಹೋದರು.

ಅಲ್ಲೊಂದು ಹಳ್ಳದ ಪೊದೆಯಲ್ಲಿ ಅಸ್ಥಿಪಂಜರವೊಂದು ಬಿದ್ದಿತ್ತು. ಎಲ್ಲರೂ ಅದನ್ನು ನೋಡಿ ದಂಗುಬಡಿದು ಹೋದರು.

ಅದಕ್ಕೆ ಲಕ್ಷ್ಮಣ ಪಾತ್ರೋಟ್ ಹೇಳಿದ ‘ಗೆಳೆಯರೆ… ಆ ಆಸ್ಥಿಪಂಜರದ ಗೊಡವೆ ನಮಗೇಕೆ? ನಾಳೆ ಸಂಕ್ರಾಂತಿ ಹಬ್ಬವಿದೆ. ಸ್ನಾನ, ಪೂಜೆ, ಕಬ್ಬು, ಸಿಹಿಗೆಣಸು, ಅವರೆಕಾಯಿ, ನೆಲಗಡಲೆ, ಹೂವುಹಣ್ಣು, ಬೂದುಗುಂಬಳಕಾಯಿ ಇತ್ಯಾದಿ ಹೊತ್ತು ಹೋಗುವ, ಅದನ್ನು ಅಲ್ಲೇ ಬಿಸಾಕಿ ಅದರ ಸುದ್ದಿಗದ್ದಲ ನಮಗೇಕೆ?’ ಎಂದು ಕೈಮುಗಿದು ನಿಂತ.

ರಾಜಕುಮಾರ್‌ ಬಡಿಗೇರ ಆ ಆಸ್ಥಿಪಂಜರವನ್ನೆಲ್ಲ ಫೂನರ್‌ ನಿರ್ಮಾಣ ಮಾಡಿ ಸಂಭ್ರಮಿಸಿದ.

‘ನಾನೇನು ಕಡಿಮೆನೇ…’ ಎಂದು ಶಂಕರ್ ಗುಡಿಮನಿ ಅದಕ್ಕೆ ರಕ್ತ, ಮಾಂಸ, ಆಕಾರ ನೀಡಿಯೇ ಬಿಟ್ಟ!

ಆಹಾ ಅದಕ್ಕೆ ಉಸಿರು ಜೀವ ತುಂಬಿದ ಜಯಪ್ಪ!

ಅಬ್ಬಾ! ಪಿಶಾಚಿಯೊಂದು ಭೂಮಿ ಆಕಾಶದೆತ್ತರ ಎದ್ದು ನಿಂತು- ‘ನನ್ನ ಬದುಕಿಸಿದವರ್‍ಯಾರು? ಮೊದಲು ಅವರನ್ನು ನುಂಗಿ ಬಿಡುವೆ’ ಎಂದು ಮೂವರನ್ನು ನುಂಗಿ ನೀರು ಕುಡಿಯಿತು.

ಇತ್ತ ಪರಿಣಾಮದ ಅರಿವು ಊಹಿಸಿ ಆಗಲೆ ಊರ ಕಡೆ ಓಟ ಕಿತ್ತಿದ್ದ… ಲಕ್ಷ್ಮಣ ಪಾತ್ರೋಟ ಮಹಾ ಬುದ್ಧಿವಂತನೆನಿಸಿದ್ದ!

ಹಳ್ಳಿ ಮನುಷ್ಯ… ಓಡೋಡಿ ಮನೆ ಸೇರಿದ್ದ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮೂಹ
Next post ಹಾಲಿಂದ ಮಾಡಿದರೊ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…