Home / ಕವನ / ಕವಿತೆ / ಬೃಂದಾವನ

ಬೃಂದಾವನ

ಗೋಪಿಯರೊಡನಾ ಬೃಂದಾವನದಲಿ
ಲೀಲಾ ನಾಟಕವಾಡಿದ ನಲಿದು
ಬೃಂದಾವನವೇ ಕೃಷ್ಣನ ಬಾಲ್ಯದ
ತವರೂರಾಯಿತು ಜಸವನು ಮೆರೆದು.
ಹಿರಿಯರು ಬಂದರು ಹಿರಿತನ ಮರೆದು
ಎಳೆಯರು ಕುಣಿದರು ಕೃಷ್ಣನ ಕರೆದು
ತರುಣಿಯರೆಲ್ಲರು ಮೋಹವ ತೊರೆದು
ಕೊಳಲಿನ ಕೃಷ್ಣನ ರೂಪವ ನೆನೆದು
ಕೃಷ್ಣನ ಕೊಳಲಿನ ಗಾನವ ಕೇಳ್ದು
ಎಲ್ಲರು ಬರುವರು ಆತುರ ತಳೆದು.

ಜನನ-ಮರಣ ಜಂಜಾಟವ ಗೆಲಿದು
ಆತ್ಮದ ದರ್‍ಶನ ಮಾಡಿದ ತಾಣ
ಕೀಳ್ಮೇಲೆಂಬುದು-ಆಳ್-ಪೆಣ್ ಎಂಬುದು
ಮಾಸಿದ ಪಾವನ ಭೂಮಿ ನಿದಾನ.
ಪಶುಪಾಲನೆಯ ಕೃಷಿಕರ ಮಾನ
ಕೃಷ್ಣನ ಕೊಳಲಿನ ಮಧುರಸ ಪಾನ
ಎಲ್ಲರೊಳೊಂದೇ ನೋಟದ ಮೌನ
ಏನಿದು ಎಲ್ಲೂ ಮೆರೆವನು ಜಾಣ
ಮನಕದ್ದೊಯ್ದನು ಜನವನು ಕಾಣ
ಎಲ್ಲರ ಸೆಳೆಯುವ ಮೋಹನ ಬಾಣ.

ಯಮುನಾ ತೀರದ ಮರಗಳ ಮರೆಯಲಿ
ಬೆಟ್ಟದ ಮೇಗಡ ಸರ್‍ವರ ಒಳಗೆ
ಲಾಸ್ಯದಿ ಮೂಡುವ ತಾಪವನಳೆಯುತ
ಬಿಂಬಿಸುತಿರುವನು ಬರುತಲಿ ಹೊರಗೆ
ಗೋಪಿಯರ ಧ್ವನಿ ಕೇಳಿತು ಧರೆಗೆ
ದೂರವ ಕಾಣದೆ ಬಂದರು ಹೇಗೆ?
ಎಲ್ಲಿದೆ ಧಾವತಿ ಮನವೊಂದಾಗೆ
ಒಂದೇ ಕಾಂಬುದು ನೋಡಲು ಹೊರಗೆ
ಆತ್ಮದ ದರ್ಶನ ಮಾಡುತ ಒಳಗೆ
ಭಕ್ತರು ನಿಂದರು ಕೃಷ್ಣನ ಕರೆಗೆ-

ಬೃಂದಾವನದಲಿ ಸರ್‍ವರು ಸ್ತ್ರೀಯರು
ಕೃಷ್ಣನ ಹೂರತಿನ್ನಾವನು ಪುರುಷ
ಮೀರಾದೇವಿಯ ದರ್‍ಶನದಿಂದಲಿ
ಗೋಸ್ವಾಮಿಯ ಮತಿಯಾದುದು ಸರಸ.
ಗೋಪಿಯರಿಟ್ಟರು ಸತ್ಯದ ಕಳಸ
ಭಕ್ತರನೆಯ್ದಿತು ಪ್ರೇಮದ ಪರುಷ
ಆದುದು ಲೋಕದ ಮನ ಸಂತೋಷ
ಇರುವುದು ಇನ್ನೂ ಕೃಷ್ಣನ ಹಾಸ
ಯಮುನಾ ತೀರದ ಮಾನವ ವೇಷ
ನೋಡದೊ ನಿರುತಂ ರೂಪೋದ್ಭಾಸ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...