Home / ಕವನ / ಕವಿತೆ / ಬೃಂದಾವನ

ಬೃಂದಾವನ

ಗೋಪಿಯರೊಡನಾ ಬೃಂದಾವನದಲಿ
ಲೀಲಾ ನಾಟಕವಾಡಿದ ನಲಿದು
ಬೃಂದಾವನವೇ ಕೃಷ್ಣನ ಬಾಲ್ಯದ
ತವರೂರಾಯಿತು ಜಸವನು ಮೆರೆದು.
ಹಿರಿಯರು ಬಂದರು ಹಿರಿತನ ಮರೆದು
ಎಳೆಯರು ಕುಣಿದರು ಕೃಷ್ಣನ ಕರೆದು
ತರುಣಿಯರೆಲ್ಲರು ಮೋಹವ ತೊರೆದು
ಕೊಳಲಿನ ಕೃಷ್ಣನ ರೂಪವ ನೆನೆದು
ಕೃಷ್ಣನ ಕೊಳಲಿನ ಗಾನವ ಕೇಳ್ದು
ಎಲ್ಲರು ಬರುವರು ಆತುರ ತಳೆದು.

ಜನನ-ಮರಣ ಜಂಜಾಟವ ಗೆಲಿದು
ಆತ್ಮದ ದರ್‍ಶನ ಮಾಡಿದ ತಾಣ
ಕೀಳ್ಮೇಲೆಂಬುದು-ಆಳ್-ಪೆಣ್ ಎಂಬುದು
ಮಾಸಿದ ಪಾವನ ಭೂಮಿ ನಿದಾನ.
ಪಶುಪಾಲನೆಯ ಕೃಷಿಕರ ಮಾನ
ಕೃಷ್ಣನ ಕೊಳಲಿನ ಮಧುರಸ ಪಾನ
ಎಲ್ಲರೊಳೊಂದೇ ನೋಟದ ಮೌನ
ಏನಿದು ಎಲ್ಲೂ ಮೆರೆವನು ಜಾಣ
ಮನಕದ್ದೊಯ್ದನು ಜನವನು ಕಾಣ
ಎಲ್ಲರ ಸೆಳೆಯುವ ಮೋಹನ ಬಾಣ.

ಯಮುನಾ ತೀರದ ಮರಗಳ ಮರೆಯಲಿ
ಬೆಟ್ಟದ ಮೇಗಡ ಸರ್‍ವರ ಒಳಗೆ
ಲಾಸ್ಯದಿ ಮೂಡುವ ತಾಪವನಳೆಯುತ
ಬಿಂಬಿಸುತಿರುವನು ಬರುತಲಿ ಹೊರಗೆ
ಗೋಪಿಯರ ಧ್ವನಿ ಕೇಳಿತು ಧರೆಗೆ
ದೂರವ ಕಾಣದೆ ಬಂದರು ಹೇಗೆ?
ಎಲ್ಲಿದೆ ಧಾವತಿ ಮನವೊಂದಾಗೆ
ಒಂದೇ ಕಾಂಬುದು ನೋಡಲು ಹೊರಗೆ
ಆತ್ಮದ ದರ್ಶನ ಮಾಡುತ ಒಳಗೆ
ಭಕ್ತರು ನಿಂದರು ಕೃಷ್ಣನ ಕರೆಗೆ-

ಬೃಂದಾವನದಲಿ ಸರ್‍ವರು ಸ್ತ್ರೀಯರು
ಕೃಷ್ಣನ ಹೂರತಿನ್ನಾವನು ಪುರುಷ
ಮೀರಾದೇವಿಯ ದರ್‍ಶನದಿಂದಲಿ
ಗೋಸ್ವಾಮಿಯ ಮತಿಯಾದುದು ಸರಸ.
ಗೋಪಿಯರಿಟ್ಟರು ಸತ್ಯದ ಕಳಸ
ಭಕ್ತರನೆಯ್ದಿತು ಪ್ರೇಮದ ಪರುಷ
ಆದುದು ಲೋಕದ ಮನ ಸಂತೋಷ
ಇರುವುದು ಇನ್ನೂ ಕೃಷ್ಣನ ಹಾಸ
ಯಮುನಾ ತೀರದ ಮಾನವ ವೇಷ
ನೋಡದೊ ನಿರುತಂ ರೂಪೋದ್ಭಾಸ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...