ಬನ್ನಿ, ಮಕ್ಕಳೆ

ಬನ್ನಿ ಬನ್ನಿ | ಬನ್ನಿ ಬನ್ನಿ | ಬನ್ನಿ ಮಕ್ಕಳೇ |
ಕೂಡಿ ಆಡಿ ಕೂಡಿ ನಲಿವ | ಬನ್ನಿ ಮಕ್ಕಳೇ||

ವಿದ್ಯೆ ಬುದ್ದಿ | ಎಲ್ಲ ಕಲಿತು | ಮುಂದೆ ನಡೆಯುವಾ |
ರೀತಿ ನೀತಿ | ನಡತೆ ಕಲಿತು | ಬಾಳ ನಡೆಸುವಾ ||

ಕುಂಟ ಕುರುಡ | ಮೂಗ ಕಿವುಡ | ಬನ್ನಿ ಎನ್ನುವಾ |
ನಾವು ನೀವು | ಒಂದೇ ಎಂದು | ಧೈರ್ಯ ತುಂಬುವಾ ||

ದೀನ ದಲಿತ | ಬಡ ಜನರ | ಸೇವೆ ಮಾಡುವಾ |
ಸ್ನೇಹ ಹಸ್ತ | ನೀಡಿ ಅವರ | ನೋವ ಮರೆಸುವಾ ||

ಮರ ಬೆಳೆಸಿ | ಜಲ ಉಳಿಸಿ | ಕಾಡು ಬೆಳೆಸುವಾ |
ನೆಲ ಕೊಟ್ಟ | ಸಿರಿ ಬಳಸಿ | ಸ್ವರ್ಗ ಕಾಣುವಾ ||

ಜಾತಿ ಭೇಧ | ಎಲ್ಲ ಮರೆತು | ಕೂಡಿ ದುಡಿಯುವಾ |
ಅಂಧಕಾರ | ದೂರ ಮಾಡಿ | ನಾಡ ಕಟ್ಟುವಾ ||
*****
೧೩-೦೬-೧೯೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನ ಮಂಥನ ಸಿರಿ – ೨
Next post ಅಹಲ್ಯೆ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys