Home / ಕವನ / ಕವಿತೆ / ಮಾತನಾಡಬೇಕು ನಾವು

ಮಾತನಾಡಬೇಕು ನಾವು

(ವಿಸ್ತೃತ ಕವನ)

ಮಾತನಾಡಬೇಕು ನಾವು
ಒಂದು ಘಳಿಗೆ ಕುಳಿತು
ಬಿಟ್ಟು ಎಲ್ಲ ಹಮ್ಮು ಬಿಮ್ಮು
ಹೃದಯ ಬೆಸೆಯಬೇಕು ||

ಆಕಾಶವು ಅತ್ತಿದೆ
ಧರೆ ಧಗಧಗ ಉರಿದಿದೆ
ಪಂಚಭೂತ ನಮ್ಮ ನೋಡಿ
ನೇಣುಗಂಬ ಹುಡುಕಿದೆ
ಉಳಿಯಲಿಲ್ಲಿ ಎಲ್ಲ
ಎಲ್ಲ ಬದುಕಲಿ
ನಮ್ಮ ಸಾವು ನೋಡಿ ಅವು
ಮರೆಯಾಗದಿರಲಿ || ಅ.ಪ. ||

ದಾರ ಏಕೆ ದೂರ ಬೇಕೆ
ಮಾತನಾಡುವಾಗ
ಬೇಲಿ ಬೇಡ ನೋಟ ಇರಲಿ
ಮನಸು ಕೂಡುವಾಗ
ಸೇತುವೆಗಳು ಮುರಿದಿವೆ
ಮತ್ತೆ ಕಟ್ಟುವ
ಎಲ್ಲ ಕೂಡಿ ಕಟ್ಟುವಾಗ
ಹೃದಯ ಹುಡುಕುವ

ಹಂಚಿಕೊಂಡ ರಕ್ತವೊಂದೆ
ರಕ್ತ ಹರಿವುದೇಕೆ?
ಹಾಲೂಡಿದ ನೆಲವದೊಂದೆ
ಇಲ್ಲಿ ಕದನವೇಕೆ?
ಕುರುಕ್ಷೇತ್ರವ ತಿಳಿದ ಮನಕೆ
ಕುರುಪಾಠವೇಕೆ
ಹಿಟ್ಲರನ ತಿಳಿದ ಮೇಲೆ
ಅವನ ದಾರಿಯೇಕೆ
ರಾಮಾಯಣ ತಿಳಿದಿರುವಾಗ
ಮತ್ಯಾಕೆ ರಾಮಾಯಣ
ಹುಟ್ಟದಿರಲಿ ಬಾಂಬುಗಳು
ಅವಕೆ ತಿಥಿ ಮಾಡೋಣ |

ನನಗೆ ನೀನು ನಿನಗೆ ನಾನು
ಇದು ಅಲ್ಲವೆ ಸತ್ಯ
ಇಂತಿರಲು ಕಲಹವೇಕೆ?
ಕಾಣದವನೆ ಮಿಥ್ಯ |

ನಡೆದ ದಾರಿ ಹಾಗಿರಲಿ
ಹೆಜ್ಜೆ ಮುಂದೆ ಇರಲಿ
ಆಕಾಶವು ಅಳದಿರಲಿ
ನೆಲವು ಕುಸಿಯದಿರಲಿ |
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...