Home / ಕವನ / ಕವಿತೆ / ವೃಷಭಾವತಿ

ವೃಷಭಾವತಿ

ವೃಷಭಾವತಿ ಒಮ್ಮೆ ಹರಿದು ಉಕ್ಕೇರಿ ನೆಲ ಜಲ ಹೊಲ
ಭೇದ ಭಾವವಿಲ್ಲದೇ ಉಣಿಸಿದ್ದಳು ಎಲ್ಲರನೂ ತಣಿಸಿದ್ದಳು
ಈಗೇಕೆ ವಿಷವಾದೆ ನಾನು ಎಂದು ಪರಿತಪಿಸುತ್ತಾಳೆ. ತನಗೆ ವಿಷ
ವೂಡಿದವರ ಕಾಣಲಾಗದೇ ಹಿಡಿಯಲಾಗದೇ ತಡೆಯಲಾಗದೇ ಹೀಗೆ

ತುಂಬಿ ಹರಿಯುತ್ತಿದ್ದ ನದಿಗೆ ವಿಷವಿಕ್ಕಿದವರ್‍ಯಾರು ಕಾಲವೆ?
ಕಾಳಜಿಯೆ? ಸ್ವಾರ್‍ಥವೇ? ಮತ್ಸರವೇ? ಅಥವಾ ಒಳಗಿನದೇ
ಏನೋ ತಾಪವೆ? ತೋಚುವುದಿಲ್ಲ ನನಗಂತೂ ಏನೂ
ಈಗಿಲ್ಲಿ ಮಿಂದವರೇ ಪಾಪಿಗಳು ಅವರ ತಲೆ ತುಂಬ ಹೇನು.

ಉರಿವ ಸೂರ್‍ಯನಿಗೂ ಇಲ್ಲ ಕರುಣೆ
ಆವಿಯಾಗಿಸಿ ಬಿಡುತ್ತಾನೆ ನನ್ನೆಲ್ಲ ಬವಣೆ
ಸುರಿಸುವುದೂ ಇಲ್ಲ ನನ್ನೆದೆಯ ಜಲವ ನನಗೆ
ಮಳೆಯಾಗಿಸಿ ಕೊಂಡೊಯ್ಯುತ್ತಾನೆ ಇನ್ನೊಬ್ಬರ ಮನೆಗೆ

ಕಚ್ಚುವಂತಾದುದೇಕೆ ನಾನು ವಿಷ ಸರ್ಪದಂತೆ
ಕೇಳಿ ಭಾರತದ ಎಲ್ಲ ಕಾರ್‍ಖಾನೆಗಳ ತೆಗೆಸಿ ಅವರ
ಲೆಕ್ಕ ಪತ್ರದ ಕಂತೆ. ಅವರಿಗೆ ಬೇಕಿತ್ತೆ ಹೇಳಿ
ಹರಿವ ಜೀವದಾಯಿನಿಯಲ್ಲಿ ಅವರ ಕೊಳಕು ಜಲಕೇಳಿ

ಅಂದಿನೊಬ್ಬ ಪ್ರಿಯಕರ ಬಂದು ಕೇಳುತ್ತಾನೆ ಮತ್ತೆ ಮತ್ತೆ
ವೃಷಭಾವತಿ ಹರಿಯಲಾರೆಯ ನೀನು ಹಿಂದಿನಂತೆ
ಹರಿವ ಬಯಕೆ ನನಗಿದೆ ಗೆಳೆಯ ಹರಿದೇನು ನಾನು
ತುಂಬಿ ಸುರಿದೇನು ನಾನು ಸೋಸಿಬಿಡು ಈ ಕೊಳೆಯ
ಪಿಸು ಮಾತಿನಲಿ ಉಸುರುತ್ತೇನೆ ನಾನು

ದಿನ ದಿನದ ಧಾರೆಯಲಿ ಕಾಯುತ್ತೇನೆ ಅವನಿಗಾಗಿ
ಮತ್ತೊಮ್ಮೆ ಅಮೃತವಾಗಿ ಹರಿವ ಬಯಕೆ ಅದ್ಯಮವಾಗಿ
ಎತ್ತಿಕೋ ಗೆಳೆಯಾ ಹಿಡಿದಪ್ಪಿಕೋ ಹೀಗೆ, ಒಳಗಿನ ಕಲ್ಮಶ
ಒಳಗೇ ಉಳಿದು ತಿಳಿನೀರು ಬರುವ ಹಾಗೆ ಮತ್ತೊಮ್ಮೆ
ನನ್ನೆದೆಯ ಅಲೆಗಳಲಿ ಈ ಜೋಣ ಹೀಗೆ ಮತ್ತೆಂದೂ
ಒಳಸರಿಯದ ಹಾಗೆ ನೆಲಮುಗಿಲ ನಡುವಣ ಪ್ರಕೃತಿಯ ಹಾಗೆ

ತಡೆದು ನಿಲ್ಲಿಸು ಆ ಕಾರ್‍ಖಾನೆಗಳ ಕೊಳಕು ಧಾರೆ
ಹರಿಯ ಬಿಡು ಅವುಗಳನ್ನು ಆ ಸಮುದ್ರದ ಮೇರೆ
ಆ ದೈತ್ಯನಾದರೋ ಎಲ್ಲವನು ನುಂಗಿ ನೀರು ಕುಡಿದಾನು
ಹಬ್ಬಿಕೊಳ್ಳಲಿ ನಮಗೆ ನಮ್ಮ ನೆಲದಡಿಯ ಬಾನು
*****
-ಕರ್ಮವೀರ ದೀಪಾವಳಿ ವಿಶೇಷಾಂಕ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...