ವೃಷಭಾವತಿ

ವೃಷಭಾವತಿ ಒಮ್ಮೆ ಹರಿದು ಉಕ್ಕೇರಿ ನೆಲ ಜಲ ಹೊಲ
ಭೇದ ಭಾವವಿಲ್ಲದೇ ಉಣಿಸಿದ್ದಳು ಎಲ್ಲರನೂ ತಣಿಸಿದ್ದಳು
ಈಗೇಕೆ ವಿಷವಾದೆ ನಾನು ಎಂದು ಪರಿತಪಿಸುತ್ತಾಳೆ. ತನಗೆ ವಿಷ
ವೂಡಿದವರ ಕಾಣಲಾಗದೇ ಹಿಡಿಯಲಾಗದೇ ತಡೆಯಲಾಗದೇ ಹೀಗೆ

ತುಂಬಿ ಹರಿಯುತ್ತಿದ್ದ ನದಿಗೆ ವಿಷವಿಕ್ಕಿದವರ್‍ಯಾರು ಕಾಲವೆ?
ಕಾಳಜಿಯೆ? ಸ್ವಾರ್‍ಥವೇ? ಮತ್ಸರವೇ? ಅಥವಾ ಒಳಗಿನದೇ
ಏನೋ ತಾಪವೆ? ತೋಚುವುದಿಲ್ಲ ನನಗಂತೂ ಏನೂ
ಈಗಿಲ್ಲಿ ಮಿಂದವರೇ ಪಾಪಿಗಳು ಅವರ ತಲೆ ತುಂಬ ಹೇನು.

ಉರಿವ ಸೂರ್‍ಯನಿಗೂ ಇಲ್ಲ ಕರುಣೆ
ಆವಿಯಾಗಿಸಿ ಬಿಡುತ್ತಾನೆ ನನ್ನೆಲ್ಲ ಬವಣೆ
ಸುರಿಸುವುದೂ ಇಲ್ಲ ನನ್ನೆದೆಯ ಜಲವ ನನಗೆ
ಮಳೆಯಾಗಿಸಿ ಕೊಂಡೊಯ್ಯುತ್ತಾನೆ ಇನ್ನೊಬ್ಬರ ಮನೆಗೆ

ಕಚ್ಚುವಂತಾದುದೇಕೆ ನಾನು ವಿಷ ಸರ್ಪದಂತೆ
ಕೇಳಿ ಭಾರತದ ಎಲ್ಲ ಕಾರ್‍ಖಾನೆಗಳ ತೆಗೆಸಿ ಅವರ
ಲೆಕ್ಕ ಪತ್ರದ ಕಂತೆ. ಅವರಿಗೆ ಬೇಕಿತ್ತೆ ಹೇಳಿ
ಹರಿವ ಜೀವದಾಯಿನಿಯಲ್ಲಿ ಅವರ ಕೊಳಕು ಜಲಕೇಳಿ

ಅಂದಿನೊಬ್ಬ ಪ್ರಿಯಕರ ಬಂದು ಕೇಳುತ್ತಾನೆ ಮತ್ತೆ ಮತ್ತೆ
ವೃಷಭಾವತಿ ಹರಿಯಲಾರೆಯ ನೀನು ಹಿಂದಿನಂತೆ
ಹರಿವ ಬಯಕೆ ನನಗಿದೆ ಗೆಳೆಯ ಹರಿದೇನು ನಾನು
ತುಂಬಿ ಸುರಿದೇನು ನಾನು ಸೋಸಿಬಿಡು ಈ ಕೊಳೆಯ
ಪಿಸು ಮಾತಿನಲಿ ಉಸುರುತ್ತೇನೆ ನಾನು

ದಿನ ದಿನದ ಧಾರೆಯಲಿ ಕಾಯುತ್ತೇನೆ ಅವನಿಗಾಗಿ
ಮತ್ತೊಮ್ಮೆ ಅಮೃತವಾಗಿ ಹರಿವ ಬಯಕೆ ಅದ್ಯಮವಾಗಿ
ಎತ್ತಿಕೋ ಗೆಳೆಯಾ ಹಿಡಿದಪ್ಪಿಕೋ ಹೀಗೆ, ಒಳಗಿನ ಕಲ್ಮಶ
ಒಳಗೇ ಉಳಿದು ತಿಳಿನೀರು ಬರುವ ಹಾಗೆ ಮತ್ತೊಮ್ಮೆ
ನನ್ನೆದೆಯ ಅಲೆಗಳಲಿ ಈ ಜೋಣ ಹೀಗೆ ಮತ್ತೆಂದೂ
ಒಳಸರಿಯದ ಹಾಗೆ ನೆಲಮುಗಿಲ ನಡುವಣ ಪ್ರಕೃತಿಯ ಹಾಗೆ

ತಡೆದು ನಿಲ್ಲಿಸು ಆ ಕಾರ್‍ಖಾನೆಗಳ ಕೊಳಕು ಧಾರೆ
ಹರಿಯ ಬಿಡು ಅವುಗಳನ್ನು ಆ ಸಮುದ್ರದ ಮೇರೆ
ಆ ದೈತ್ಯನಾದರೋ ಎಲ್ಲವನು ನುಂಗಿ ನೀರು ಕುಡಿದಾನು
ಹಬ್ಬಿಕೊಳ್ಳಲಿ ನಮಗೆ ನಮ್ಮ ನೆಲದಡಿಯ ಬಾನು
*****
-ಕರ್ಮವೀರ ದೀಪಾವಳಿ ವಿಶೇಷಾಂಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ’ಯವರನ್ನು ನೆನೆದು
Next post ಮಾತನಾಡಬೇಕು ನಾವು

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys