Home / ಕವನ / ಕವಿತೆ / ಶ್ರೀ’ಯವರನ್ನು ನೆನೆದು

ಶ್ರೀ’ಯವರನ್ನು ನೆನೆದು

ಬೆಳ್ಳೂರು ಮೈಲಾರ ಶ್ರೀಕಂಠನಡಿದೆಗೆದು
ಸಾಲ್ಗುಮೀ ತಿರೆಯಲ್ಲಿ ಪಾಡಿದುದು ನೋಡಿದುದು
ಇಂದ್ರಸಭೆಯೋಳು ನಮ್ಮ ತಾಯ ಕೀರ್ತಿಯ ಹಾಡಿ
ಕನ್ನಡ ಧ್ವಜಕೀರ್ತಿಯಲ್ಲಿ ನರ್ತನ ಮಾಡಿ
ಸಾಹಿತ್ಯ ಸೊಬಗುಗಳನೆಲ್ಲರ್ಗೆ ತೋರುವೊಡೆ
ಎಲ್ಲರೊಳು ತಾ ಹೊಕ್ಕ ಹೃದಯದಲಿ ನಲಿದಾಡೆ.

ಪಂಪ ರನ್ನರ ಬಸವ ಲಕ್ಷ್ಮೀಶ ಹರಿಹರರ
ವರಕುಮಾರವ್ಯಾಸ ರಾಘವ ಪುರಂದರರ
ಕವಿಗಳಾಡುಂಬೊಲದಿ ಸರಸ ಗೋಷ್ಠಿಯೊಳೊಲಿದು
ಕನ್ನಡದ ಕರ್ಚಾಳುಗಳ ನಡೆಸಿ ತಾ ನಲಿದು
ಕನ್ನಡಾಂಬೆಯ ಪೆರ್ಮೆ ಕೂರಮೆಗಳ ನೆನೆನೆನೆದು
ನುಡಿವನದಕೋ ನಮ್ಮ ಶ್ರೀ ಕವೀಂದ್ರಂ ನಿಂದು.

ನಲಿನಲಿದು ಸಾಹಿತ್ಯದಧಿದೇವಿ ದರ್ಶನದಿ
ಒಲಿಸಿ ನಲ್ನುಡಿಯಿಂದ ತಾಯ ತೊಡೆಯಲಿ ಮುದದಿ
ಮಂಡಿಸುತಲೊರೆಸಿರ್ದ ತಾಯ್ಕೊರಗ ಮರೆಸಿರ್ದ
ವೆತೆಗಳಂ ತೊರೆಯಿಸುತ ಮತ್ತೊಮ್ಮೆ ನಗಿಸಿರ್ದ
ಕನ್ನಡದ ತಾಯ್ನೋಟಮನ್ನೊರೆದು ಸೊಗಸಿರ್ದ
ಬಿಜಗೆಯ್ಸಿ ದೇವಿಯಂ ಕೀರ್ತಿಯನ್ ಪಾಡಿದನ್.

ತನ್ನಂತೆ ತರುಣರಂ ಕಿರಿಯರಂ ಹಿರಿಯರಂ
ಕನ್ನಡದ ನುಡಿಸೇವೆಯಲಿ ನಡೆಸಿ ಅಣಿಯರಂ
ಧರ್ಮದಲಿ ಕರ್ಮದಲಿ ತ್ಯಾಗದಲಿ ಭೋಗದಲಿ
ತೋರಿಸಿದ ಕರ್ಣಾಟ ಕವಿತಿಲಕ ನಡೆಗಳಲಿ
ಅಗಲಿದ ಕಣ್ಣೀರ ಹೊಳೆಹರಿಸಿ ಮತಿ ಮರೆಸಿ
ನಮ್ಮೆಲ್ಲರೊಲವೊಯ್ದು ಮರೆಯಾದನತಿ ಸರಸಿ.

ಎಲ್ಲಿರಲಿ ಎಂತಿರಲಿ ಅವರ ನಡೆನುಡಿ ಮನವು
ಗಾಂಭೀರ್ಯ ರಸಜೀವ ನಗು ಹಾಸ್ಯ ಚೆಲುವೊಲವು
ಭೀಷ್ಮರಾ ಹಿರಿತನವ ತಳೆದು ತಾ ಹೂಳೆದಿಹರು.
ಸರ್ವರನು ನಡಯಿಸುತ ಮಾರ್ಗದಲಿ-ಮೆರೆದಿಹರು.
ಕರ್ಣಾಟ ಕಣ್ನೋಟ ತಣ್ನೋಟಮಂ ಕಂಡು
ಶ್ರೀಯೋಲಿಯೆ ಎಚ್ಚರಾದುದು ನಮಗೆ ಸವಿಯುಂಡು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...