ಭಾರತ ದೇಶದ ತೊಂಡು ದನಗಳಿಗೆ

ಭಾರತ ದೇಶದ ತೊಂಡು ದನಗಳಿಗೆ
ಕರ್ನಾಟಕವೇ ಪ್ರೀತಿಯು
ಇಲ್ಲಿಯ ಹುಲ್ಲು ನೀರು ಕಂಡರೆ
ಎಲ್ಲಿಲ್ಲದ ಸಂಪ್ರೀತಿಯು
ಆದರೆ ಏಕೊ ಕನ್ನಡ ಎಂದರೆ
ಅವುಗಳಿಗಿನ್ನು ಅಪಥ್ಯವು
ಇಂತಹ ರೋಗಕೆ ಮದ್ದು ಯಾವುದು?
ತಿಳಿಯಬೇಕು ಇಂದು ನಾವು

ಕರ್ನಾಟಕಕೆ ಗೋಡೆಗಳಿಲ್ಲ
ಇರುವುದು ಕೂಡ ಬೇಡ
ಇರುವ ಗೋಡೆಗಳೆ ಬಿದ್ದರೆ ಸಾಕು
ಹೊಸ ಗೋಡೆಗಳು ಬೇಡ
ಇಂತಹ ಬಯಲಲಿ ಮೇಯುತ್ತಲಿವೆ
ಮೇಯಲಿ, ಅವಕಿವೆ ಹೊಟ್ಟೆ
ಆದರೆ ತಲೆಗೆ ಮಿದುಳು ಬೇಡವೆ?
ಬೇಡವೆ ಕನ್ನಡ ಅವಕೆ!

ಕರ್ನಾಟಕದಲೆ ಹುಟ್ಟಿ ಬೆಳೆದಿವೆ
ಇಲ್ಲಿಯ ಅನೇಕ ರಾಸುಗಳು
ಗಾಳಿಯಷ್ಟೆ ಕನ್ನಡವನು ಉಂಡಿವೆ
ಇವುಗಳ ಶ್ವಾಸ ಕೋಶಗಳು
ಆದರೂ ಏಕೊ ಕನ್ನಡ ಎಂಬುದು
ಇವುಗಳಿಗೂ ಸಹ ಅಪರಿಚಿತ
ಇವುಗಳ ರೋಗಕ್ಕಿನ್ನೊಂದು ಮದ್ದು
ನೀಡಬೇಕಿದೆ ಉಚಿತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಹರಿ
Next post ಸೊಲ್ಲಾಪುರದ ಸಿದ್ಧರಾಮೇಶ್ವರ ಸ್ತೋತ್ರ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys