ನಾನು ನನ್ನ ಇರುವಿಕೆಗೆ

ನಾನು, ನನ್ನ ಇರುವಿಕೆಗೆ
ನನ್ನ ದಿನದ ಭತ್ಯಕ್ಕೆ
ನ್ಯಾಯ ಒದಗಿಸುತಿರುವೆನೇ?||
ಇಷ್ಟೆಲ್ಲಾ ಗಾಳಿ ನೀರು ಭೂಮಿ
ಬೆಳಕನು ಉಚಿತವಾಗಿ
ಪಡೆಯುತ್ತಿರುವಾಗ||

ಹೆತ್ತತಂದೆ ತಾಯಿಯರ
ಕರ್‍ತವ್ಯ ಮಾಡುತಿರುವೆನೇ? |
ನನ್ನ ಬೆಳೆಸಿದ ಗುರುಹಿರಿಯರು
ಈ ಸಮಾಜದ ಋಣವ ತೀರಿಸಿದೆನೇ?|
ಸೋದರ ಸೋದರೀಯರ
ಬಂಧು ಬಾಂಧವರಿಗೆ ನೆರವಾದೆನೇ?||

ಏಕೆ ಹೀಗೆ ಯೋಚಿಸುವುದಿಲ್ಲಾ?
ಬರಿ ನಾನು, ನನ್ನ ಹೆಂಡತಿ
ಮಕ್ಕಳು ಸಂಸಾರವೆಂಬ
ಸಂಕುಚಿತ ಬುದ್ಧಿ?
ನೀನೊಬ್ಬನೇ ಈ ಸ್ಥಿತಿಗೆ
ಬರಲು ಸಾಧ್ಯವಿತ್ತೇ,
ನಾಯ್ಯತನದಲ್ಲಿ ಯೋಚಿಸು?||

ನೀ ಇಲ್ಲಿಗೆ ಬಂದು, ಇಲ್ಲಿ
ಏನೆಲ್ಲಾ ಪ್ರಯೋಜನ ಪಡೆದು
ನೀನೋಬ್ಬನೇ ಬರೀ ಸ್ವಾರ್‍ಥದಲಿ
ಬದುಕುವುದಾದರೆ ನಿನ್ನಿಂದ
ಈ ಪ್ರಕೃತಿಗೇನು ಪ್ರಯೋಜನ?|
ನಿನ್ನ ತರುವಾಯ ಈ ನಿನ್ನ ಮೋಹ
ಸಂಸಾರವನು ಸಾಕುವರಾರು?|
ಬಿಡು ಬರೀ ಹಣಕೂಡಿಡುವುದನು
ವಂಶದ ಉದ್ದಾರಕೆ ಕೊಂಚ
ಪುಣ್ಯಗಳಿಸುವ ಕಾರ್‍ಯಗಳಮಾಡು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಡೇಲಾ
Next post ನಾವಾಡಿಗ!

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…