ನಾನು ನನ್ನ ಇರುವಿಕೆಗೆ

ನಾನು, ನನ್ನ ಇರುವಿಕೆಗೆ
ನನ್ನ ದಿನದ ಭತ್ಯಕ್ಕೆ
ನ್ಯಾಯ ಒದಗಿಸುತಿರುವೆನೇ?||
ಇಷ್ಟೆಲ್ಲಾ ಗಾಳಿ ನೀರು ಭೂಮಿ
ಬೆಳಕನು ಉಚಿತವಾಗಿ
ಪಡೆಯುತ್ತಿರುವಾಗ||

ಹೆತ್ತತಂದೆ ತಾಯಿಯರ
ಕರ್‍ತವ್ಯ ಮಾಡುತಿರುವೆನೇ? |
ನನ್ನ ಬೆಳೆಸಿದ ಗುರುಹಿರಿಯರು
ಈ ಸಮಾಜದ ಋಣವ ತೀರಿಸಿದೆನೇ?|
ಸೋದರ ಸೋದರೀಯರ
ಬಂಧು ಬಾಂಧವರಿಗೆ ನೆರವಾದೆನೇ?||

ಏಕೆ ಹೀಗೆ ಯೋಚಿಸುವುದಿಲ್ಲಾ?
ಬರಿ ನಾನು, ನನ್ನ ಹೆಂಡತಿ
ಮಕ್ಕಳು ಸಂಸಾರವೆಂಬ
ಸಂಕುಚಿತ ಬುದ್ಧಿ?
ನೀನೊಬ್ಬನೇ ಈ ಸ್ಥಿತಿಗೆ
ಬರಲು ಸಾಧ್ಯವಿತ್ತೇ,
ನಾಯ್ಯತನದಲ್ಲಿ ಯೋಚಿಸು?||

ನೀ ಇಲ್ಲಿಗೆ ಬಂದು, ಇಲ್ಲಿ
ಏನೆಲ್ಲಾ ಪ್ರಯೋಜನ ಪಡೆದು
ನೀನೋಬ್ಬನೇ ಬರೀ ಸ್ವಾರ್‍ಥದಲಿ
ಬದುಕುವುದಾದರೆ ನಿನ್ನಿಂದ
ಈ ಪ್ರಕೃತಿಗೇನು ಪ್ರಯೋಜನ?|
ನಿನ್ನ ತರುವಾಯ ಈ ನಿನ್ನ ಮೋಹ
ಸಂಸಾರವನು ಸಾಕುವರಾರು?|
ಬಿಡು ಬರೀ ಹಣಕೂಡಿಡುವುದನು
ವಂಶದ ಉದ್ದಾರಕೆ ಕೊಂಚ
ಪುಣ್ಯಗಳಿಸುವ ಕಾರ್‍ಯಗಳಮಾಡು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಡೇಲಾ
Next post ನಾವಾಡಿಗ!

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…