ಹೆಣದ ಕತೆ

ಬೀದಿ ಬದಿಯಲ್ಲಿ ಬಿದ್ದ ಹೆಣ ನಾನು
ಶತಶತಮಾನದ ಕತೆಗಾರ
ಕತ್ತಲು ಬೆಳಕಿನ ಕಾಳಗ ನಡೆದು
ಸಾವಿರ ಸಾವಿನ ಸರದಾರ.

ರಾಜರ ನಡುವೆ ನಡೆಯಿತು ಯುದ್ಧ
ಸಿಂಹಾಸನದ ಸಲುವಾಗಿ
ಕುದುರೆಯ ಗೊರಸು ಕತ್ತಿಯ ಬಿರುಸು
ಬಿದ್ದೆನು ಕೆಳಗೆ ನೆಲವಾಗಿ.

ನೆಣ ನೆತ್ತರಿನ ಓಕುಳಿ ನಡುವೆ
ನಕ್ಕರು ರಾಜರು ಠೀವಿಯಲಿ
ನರಳಿದ ಕಾಲವು ಉರುಳುತ ಮುಂದೆ
ಬರೆಯಿತು ಕತೆಯನು ಕೋವಿಯಲಿ

ಓಟಿನ ಪೆಟ್ಟಿಗೆ ಪೀಠದ ಇಟ್ಟಿಗೆ
ನಡುವಿನ ನೆತ್ತರ ದನಿ ನಾನು
ಹಿಂದೂ ಮುಸ್ಲಿಂ ಸಿಖ್ಖರು ಕ್ರೈಸ್ತರು
ಎಲ್ಲರಿಗೊಂದೇ ಕತೆ ನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೂರಿಪಿಡಿಸ್‌ನ Medea – ಪ್ರತಿಕಾರದ ದಳ್ಳುರಿ
Next post ಅಕ್ಷರದೊಳ್ ಅನ್ನವನಿತ್ತ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…