ಗುಡಿಸಲ ಗೋರಿಯಿಂದ

ಒಪ್ಪೊತ್ತಿನ ಊಟದಲ್ಲಿ
ಹರಕು ಬಟ್ಟೆ ಬೆಳಕಿನಲ್ಲಿ
ಅಳುವಿನಲ್ಲಿ ನಗುತ ನಾನು
ಸೆಳವಿನಲ್ಲಿ ತೇಲುತ-
ನೆಲವ ನೆಚ್ಚಿ ಇದ್ದೆನು
ಬೆವರಿನಲ್ಲಿ ಬಾಳುತ
ಒಡಲ ಸುಖ, ಪ್ರೀತಿ ಮಾತು
ಬರುವುದೆಂದು ಕಾಯುತ.

ಮಹಲಿನಿಂದ ಕುರ್ಚಿಯಿಂದ
ಭೂಮಿಯೊಡಲ ಬಿರುಕಿನಿಂದ
ಎದ್ದವಲ್ಲೊ ಎದ್ದವು
ಉರಿಗಣ್ಣಿನ ಕೈಗಳು!
ಹರಿಹಾಯುವ ಮೈಗಳು!

ಮುಚ್ಚಿದಂಥ ಸೆರಗ ಸೆಳೆದು
ಬಡ್ಡಿ ಲೆಕ್ಕ ಹಾಕಿ ಹರಿದು
ಅಸಲಿಗೆಂದು ಆಮರಿದರು
ಎದೆಯ ಮೇಲೆ ಹುಲಿಯ ಉಗುರು.

ನೆಲಕೆ ಬಿದ್ದರಲ್ಲೆ ಒದ್ದು
ಹೊರಳು ಮೈಯ ಮೇಲೆ ಬಿದ್ದು
ಪರಪರನೆ ಹರಿದರೊ
ಮೈಯ ಮಾನದಂಗುಲ!
ಬರೆದರಯ್ಯೊ! ಬರೆದರೊ
ಮಾನಭಂಗದಕ್ಷರ.

ಹಕ್ಕಿ ರೆಕ್ಕೆ ಬಡಿಯುವಾಗ
ಹದ್ದು ಮೀರಿ ಹಲ್ಲೆಯಾಯ್ತು
ಹಸಿವು ಹಗಲು ಒಂದೇ ಆಯ್ತು
ಸೂರ್‍ಯನೆದುರು ಬೆತ್ತಲೆ
ಆದರೂನು ಕತ್ತಲೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಕ್ಕಳನ್ನು ಆಡಲು ಬಿಡಿ
Next post ನನಗೂ ಸ್ವಲ್ಪ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…