ಗುಡಿಸಲ ಗೋರಿಯಿಂದ

ಒಪ್ಪೊತ್ತಿನ ಊಟದಲ್ಲಿ
ಹರಕು ಬಟ್ಟೆ ಬೆಳಕಿನಲ್ಲಿ
ಅಳುವಿನಲ್ಲಿ ನಗುತ ನಾನು
ಸೆಳವಿನಲ್ಲಿ ತೇಲುತ-
ನೆಲವ ನೆಚ್ಚಿ ಇದ್ದೆನು
ಬೆವರಿನಲ್ಲಿ ಬಾಳುತ
ಒಡಲ ಸುಖ, ಪ್ರೀತಿ ಮಾತು
ಬರುವುದೆಂದು ಕಾಯುತ.

ಮಹಲಿನಿಂದ ಕುರ್ಚಿಯಿಂದ
ಭೂಮಿಯೊಡಲ ಬಿರುಕಿನಿಂದ
ಎದ್ದವಲ್ಲೊ ಎದ್ದವು
ಉರಿಗಣ್ಣಿನ ಕೈಗಳು!
ಹರಿಹಾಯುವ ಮೈಗಳು!

ಮುಚ್ಚಿದಂಥ ಸೆರಗ ಸೆಳೆದು
ಬಡ್ಡಿ ಲೆಕ್ಕ ಹಾಕಿ ಹರಿದು
ಅಸಲಿಗೆಂದು ಆಮರಿದರು
ಎದೆಯ ಮೇಲೆ ಹುಲಿಯ ಉಗುರು.

ನೆಲಕೆ ಬಿದ್ದರಲ್ಲೆ ಒದ್ದು
ಹೊರಳು ಮೈಯ ಮೇಲೆ ಬಿದ್ದು
ಪರಪರನೆ ಹರಿದರೊ
ಮೈಯ ಮಾನದಂಗುಲ!
ಬರೆದರಯ್ಯೊ! ಬರೆದರೊ
ಮಾನಭಂಗದಕ್ಷರ.

ಹಕ್ಕಿ ರೆಕ್ಕೆ ಬಡಿಯುವಾಗ
ಹದ್ದು ಮೀರಿ ಹಲ್ಲೆಯಾಯ್ತು
ಹಸಿವು ಹಗಲು ಒಂದೇ ಆಯ್ತು
ಸೂರ್‍ಯನೆದುರು ಬೆತ್ತಲೆ
ಆದರೂನು ಕತ್ತಲೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಕ್ಕಳನ್ನು ಆಡಲು ಬಿಡಿ
Next post ನನಗೂ ಸ್ವಲ್ಪ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…