ಗುಡಿಸಲ ಗೋರಿಯಿಂದ

ಒಪ್ಪೊತ್ತಿನ ಊಟದಲ್ಲಿ
ಹರಕು ಬಟ್ಟೆ ಬೆಳಕಿನಲ್ಲಿ
ಅಳುವಿನಲ್ಲಿ ನಗುತ ನಾನು
ಸೆಳವಿನಲ್ಲಿ ತೇಲುತ-
ನೆಲವ ನೆಚ್ಚಿ ಇದ್ದೆನು
ಬೆವರಿನಲ್ಲಿ ಬಾಳುತ
ಒಡಲ ಸುಖ, ಪ್ರೀತಿ ಮಾತು
ಬರುವುದೆಂದು ಕಾಯುತ.

ಮಹಲಿನಿಂದ ಕುರ್ಚಿಯಿಂದ
ಭೂಮಿಯೊಡಲ ಬಿರುಕಿನಿಂದ
ಎದ್ದವಲ್ಲೊ ಎದ್ದವು
ಉರಿಗಣ್ಣಿನ ಕೈಗಳು!
ಹರಿಹಾಯುವ ಮೈಗಳು!

ಮುಚ್ಚಿದಂಥ ಸೆರಗ ಸೆಳೆದು
ಬಡ್ಡಿ ಲೆಕ್ಕ ಹಾಕಿ ಹರಿದು
ಅಸಲಿಗೆಂದು ಆಮರಿದರು
ಎದೆಯ ಮೇಲೆ ಹುಲಿಯ ಉಗುರು.

ನೆಲಕೆ ಬಿದ್ದರಲ್ಲೆ ಒದ್ದು
ಹೊರಳು ಮೈಯ ಮೇಲೆ ಬಿದ್ದು
ಪರಪರನೆ ಹರಿದರೊ
ಮೈಯ ಮಾನದಂಗುಲ!
ಬರೆದರಯ್ಯೊ! ಬರೆದರೊ
ಮಾನಭಂಗದಕ್ಷರ.

ಹಕ್ಕಿ ರೆಕ್ಕೆ ಬಡಿಯುವಾಗ
ಹದ್ದು ಮೀರಿ ಹಲ್ಲೆಯಾಯ್ತು
ಹಸಿವು ಹಗಲು ಒಂದೇ ಆಯ್ತು
ಸೂರ್‍ಯನೆದುರು ಬೆತ್ತಲೆ
ಆದರೂನು ಕತ್ತಲೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಕ್ಕಳನ್ನು ಆಡಲು ಬಿಡಿ
Next post ನನಗೂ ಸ್ವಲ್ಪ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…