ಇದು ಎಂಥ ಶಾಪ

ಇದು ಎಂಥ ಶಾಪ
ಈ ಯಕ್ಷನಿಗೆ ಪಾಪ
ತನ್ನ ನಲ್ಲೆಯ ಬಳಿಯಿಂದ ದೂರವಿರಬೇಕಾದ
ವಿರಹ ತಾಪ
ಈ ಇಂಥ ಆಷಾಢ ದಿನಗಳಲ್ಲೇ

ಹಾತೊರೆಯುವನು
ಕಾತರಿಸುವನು
ಒಂದು ಮೋಡವ ಕರೆದು ಕೋರುವನು

ಮೋಡವೇ ಆಕಾಶದ ಪವಾಡವೇ
ನೀನೆಲ್ಲಿಗೆ ಧಾವಿಸುತಲಿರುವೆ ಇಂತು
ಕೇಳು ನನ್ನ ಮಾತುಗಳ ಕ್ಷಣ ಇಲ್ಲಿ ನಿಂತು
ನನ್ನ ಕಾಂತೆಯಿರುವಳು ಬಲು ದೂರ
ನೀಡು ನೀನವಳಿಗೆ ನನ್ನ ಶೋಕದ ವಿಚಾರ

ಹೀಗನ್ನುವನು ಮೋಡವ ಹಿಡಿದು ನಿಲ್ಲುವನು
ಇಡೀ ಕಾವ್ಯವನೆ ಹರಿಯಬಿಡುವನು
ಅಲ್ಲಿ ಹೋಗೆನ್ನುವನು ಇಲ್ಲಿ ಹೋಗೆನ್ನುವನು
ಆ ಚಂದ ನೋಡು ಈ ಚಂದವ ಹಾಡಿ ಹೊಗಳು
ಎನ್ನುವನಲಾ
ಆ ಮೋಡಕು ಯಾವಾತುರವಿಲ್ಲ

ಇದು ವಿರಹಗೀತೆಯೊ ಬದುಕಿನ ವಿಶಾಲತೆಯೊ
ಎಲ್ಲಿ ಯಕ್ಷ ಎಲ್ಲಿ ಮೋಡ
ಎಲ್ಲಿ ಉಜ್ಜಯಿನಿ
ಎಲ್ಲವನ ವಿರಹಿಣಿ

ಕವನದ ಕಾರಣ ಕೇಳುವರೆ
ಮೋಡಕೆ ಕಾರ್‍ಯವ ಹೇಳುವರೆ
ಕಾರ್‍ಯ ಕಾರಣಗಳು ಮಹಾಕವಿಯೊಬ್ಬನ
ಕಲ್ಪನಾವಶವಾಗವೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೈದ್ಯಕೀಯ ಬರಹಗಳ ಅಕ್ಷಯ ಬಂಢಾರ
Next post ದಕ್ಕಿದ ಅವಕಾಶ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys