ಇದು ಎಂಥ ಶಾಪ

ಇದು ಎಂಥ ಶಾಪ
ಈ ಯಕ್ಷನಿಗೆ ಪಾಪ
ತನ್ನ ನಲ್ಲೆಯ ಬಳಿಯಿಂದ ದೂರವಿರಬೇಕಾದ
ವಿರಹ ತಾಪ
ಈ ಇಂಥ ಆಷಾಢ ದಿನಗಳಲ್ಲೇ

ಹಾತೊರೆಯುವನು
ಕಾತರಿಸುವನು
ಒಂದು ಮೋಡವ ಕರೆದು ಕೋರುವನು

ಮೋಡವೇ ಆಕಾಶದ ಪವಾಡವೇ
ನೀನೆಲ್ಲಿಗೆ ಧಾವಿಸುತಲಿರುವೆ ಇಂತು
ಕೇಳು ನನ್ನ ಮಾತುಗಳ ಕ್ಷಣ ಇಲ್ಲಿ ನಿಂತು
ನನ್ನ ಕಾಂತೆಯಿರುವಳು ಬಲು ದೂರ
ನೀಡು ನೀನವಳಿಗೆ ನನ್ನ ಶೋಕದ ವಿಚಾರ

ಹೀಗನ್ನುವನು ಮೋಡವ ಹಿಡಿದು ನಿಲ್ಲುವನು
ಇಡೀ ಕಾವ್ಯವನೆ ಹರಿಯಬಿಡುವನು
ಅಲ್ಲಿ ಹೋಗೆನ್ನುವನು ಇಲ್ಲಿ ಹೋಗೆನ್ನುವನು
ಆ ಚಂದ ನೋಡು ಈ ಚಂದವ ಹಾಡಿ ಹೊಗಳು
ಎನ್ನುವನಲಾ
ಆ ಮೋಡಕು ಯಾವಾತುರವಿಲ್ಲ

ಇದು ವಿರಹಗೀತೆಯೊ ಬದುಕಿನ ವಿಶಾಲತೆಯೊ
ಎಲ್ಲಿ ಯಕ್ಷ ಎಲ್ಲಿ ಮೋಡ
ಎಲ್ಲಿ ಉಜ್ಜಯಿನಿ
ಎಲ್ಲವನ ವಿರಹಿಣಿ

ಕವನದ ಕಾರಣ ಕೇಳುವರೆ
ಮೋಡಕೆ ಕಾರ್‍ಯವ ಹೇಳುವರೆ
ಕಾರ್‍ಯ ಕಾರಣಗಳು ಮಹಾಕವಿಯೊಬ್ಬನ
ಕಲ್ಪನಾವಶವಾಗವೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೈದ್ಯಕೀಯ ಬರಹಗಳ ಅಕ್ಷಯ ಬಂಢಾರ
Next post ದಕ್ಕಿದ ಅವಕಾಶ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…