Home / ಲೇಖನ / ವಿಜ್ಞಾನ / ವೈದ್ಯಕೀಯ ಬರಹಗಳ ಅಕ್ಷಯ ಬಂಢಾರ

ವೈದ್ಯಕೀಯ ಬರಹಗಳ ಅಕ್ಷಯ ಬಂಢಾರ

ಇಂದು ಜಗತ್ತಿನಾದ್ಯಂತ ಪ್ರತಿವರ್ಷ ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದ ಸು. ೨೦ ಲಕ್ಷ ಬರಹಗಳು ನಾನಾ ವೈದ್ಯಕೀಯ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ವೈದ್ಯರು ಮತ್ತು ಆಸ್ಪತ್ರೆಗಳು ವೈದ್ಯಕೀಯಕ್ಕೆ ಸಂಬಂಧಪಟ್ಟ ಬರಹಗಳ ಬಗ್ಗೆ ವಿವರವಾದ ಮಾಹಿತಿ ಯಾವುದೇ ಸಮಯದಲ್ಲಿ ದೊರೆಯುವಂತಾಗಲು ಕಂಪ್ಯೂಟರ್‌ನ ಮೊರೆ ಹೋಗಬೇಕಿತ್ತು. ೧೯೬೪ರಲ್ಲಿ ಕಂಪ್ಯೂಟರ್‌ವೊಂದನ್ನು ವೈದ್ಯಕೀಯಕ್ಕೆ ಸಹಾಯಕರ ರೂಪದಲ್ಲಿ ಬಳೆಸಲಾಯಿತು. ಇದಕ್ಕಾಗಿಯೇ ‘ಇಂಡೆಕ್ಸ್ ಮೆಡಿಕಸ್’, ಎಂಬ ಸಾಪ್ಟವೇರ್‌ಅನ್ನು ಸಿದ್ದಪಡಿಸಲಾಯಿತು. ಈ ಸಾಫ್ಟ್‌ವೇರ್ ಅನ್ನು ವೈದ್ಯಕೀಯ ಬರಹಗಳ ವಿಷಯಗಳ ಆಧಾರದ ಮೇಲೆ ಪಟ್ಟಿ ಮಾಡಲಾಯಿತು. ನಂತರದ ದಿನಗಳಲ್ಲಿ ಸುಧಾರಣೆಯನ್ನು ಪಡೆದ ಈ ಸಾಫ್ಟ್‌ವೇರ್ ಬರಹಗಳ ಪಟ್ಟಿಯ ಜೊತೆಗೆ ಪ್ರತಿಬರಹದ ವಿವರಗಳ ಸಂಪೂರ್ಣ ಮಾಹಿತಿ ನೀಡು ವಂತಾಯಿತು. ಸಾಫ್ಟ್‌ವೇರ್ ನಲ್ಲಾದ ಸುಧಾರಣೆಯೊಂದಿಗೆ ಅದರ ಹೆಸರೂ ಬದಲಾವಣೆ ಕಂಡು ಇಂಡೆಕ್ಸ್ ಮೆಡಿಕಸ್ನಿಂದ “ಮೆಡಾಲಾರ್ಸ್” ಎಂದಾಯಿತು. Medalars ಎಂಬುವುದು Medical Literature and Analysis and Retrieval System ಎಂಬುದರ ಸಂಕ್ಷಿಪ್ತರೂಪ.

೧೯೭೦ರ ನಂತರ ಮೆಡಾಲಾರ್ಸ್‌ನ ಉಪಯೋಗ ಜಗತ್ತಿನ ಯಾವುದೇ ಭಾಗದಲ್ಲಿ ಕುಳಿತು ಕಂಪ್ಯೂಟರನ ಮೇಲೆ ಕೇಬಲ್‌ಗಳ ಮೂಲಕ ಸಂಪರ್ಕಿಸಿ ಪಡೆಯುವಂತಾಗಲು ‘ಮೆಡೆಲೈನ್’ ಎಂಬ ಅಂತರರಾಷ್ಟ್ರೀಯ ಸೇವಾ ಜಾಲ ಪ್ರಾರಂಭವಾಯಿತು. ಇಂದು ಪ್ರಂಪಚದಾದ್ಯಂತ ವೈದ್ಯರು ತಮ್ಮ‌ಇಚ್ಚಾನುಸಾರ ಬೇಕಾದ ಬರಹಗಳನ್ನು ಈ ಕಂಪ್ಯೂಟರ್ ಯುಕ್ತ ವೈದ್ಯಕೀಯ ಬರಹಗಳ ಬಂಡಾರದಿಂದ ಹೆಕ್ಕಿ ತೆಗೆದು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವಂತಾಗಿದೆ. ಸು. ೩೪೦೦ ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟವಾದ ವಿವಿಧ ವೈದ್ಯಕೀಯ ವಿಷಯಗಳು ಮತ್ತು ಸಂಶೋಧನೆಗಳಿಗೆ ಸಂಬಂಧಿಸಿದ ಸು. ೫೦ ಲಕ್ಷ ಕ್ಕೂ ಹೆಚ್ಚು ಬರಹಗಳು (ಎಲ್ಲ ವಿವರಗಳೊಂದಿಗೆ) ಈ ಬರಹಗಳ ಬಂಡಾರದಲ್ಲಿ ಲಭ್ಯವಾಗುತ್ತವೆ, ಇದೊಂದು ವೈದ್ಯಕೀಯ ‘ವಿಶ್ವಕೋಶ’ವೆಂದೇ ಹೇಳಬಹುದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...