ಮಾತುಮಾತಿಗೆ

ಮಾತುಮಾತಿಗೆ ಸಿಟ್ಟುಮಾಡಿದಿರಿ
ಪಾತ್ರೆ ಪಗಡೆಗಳ ಒಡೆದುಹಾಕಿದಿರಿ
ಕಂಡಕಂಡವರಿಗೆ ಕೆಂಡವಾದಿರಿ
ಸಿಟ್ಟು ನಾಶಕೆ ಮೂಲವೆಂದ ನಮ್ಮ
ಬುದ್ಧನ ಕೇಳಿದಿರ

ಅದು ಬೇಕು ಇದು ಬೇಕು ಎಲ್ಲ ಬೇಕೆಂದಿರಿ
ಎಷ್ಟು ದೊರಕಿದರು ಇನ್ನಷ್ಟು ಬೇಕೆಂದಿರಿ
ಸಾಕೆಂಬ ಪದವನ್ನೆ ಮರೆತುಬಿಟ್ಟಿರಿ
ಆಸೆಯೇ ದುಃಖಕ್ಕೆ ಮೂಲವೆಂದ ನಮ್ಮ
ಬುದ್ಧನ ಕೇಳಿದಿರ

ಅನ್ಯರೆಂದು ಹಿಂಸೆ ನೀಡಿದಿರಿ
ಆಟವೆಂದು ಬೇಟೆಯಾಡಿದಿರಿ
ಹಾರುವ ಪಾರಿವಕೆ ಗುರಿಯಿಟ್ಟು ಹೊಡೆದಿರಿ
ಹಿಂಸೆಯೇ ಬಹು ದೊಡ್ಡ ಪಾಪವೆಂದ ನಮ್ಮ
ಬುದ್ಧನ ಕೇಳಿದಿರ

ಕರುಣೆ ತೋರಿದರೆ ತಮಗೇನು ಎಂದಿರಿ
ದಾನಧರ್ಮಗಳೆಲ್ಲ ಸುಳ್ಳು ಎಂದಿರಿ
ಪಡೆಯದಲ್ಲದೆ ಕೊಡಲಾರೆವೆಂದಿರಿ
ಕಾರಣ ವಿನಾ ಪ್ರೀತಿ ನಿಜವಾದ ಪ್ರೀತಿಯೆಂದ ನಮ್ಮ
ಬುದ್ಧನ ಕೇಳಿದಿರ

ಗಹಗಹ ನಗೆಗಿಂತ ಮುಗುಳುನಗೆ ಮಿಗಿಲೆಂದ
ಬಡಬಡ ನುಡಿಗಿಂತ ಮೌನವ ಲೇಸೆಂದ
ಆಧ್ಯಾತ್ಮಕಿಂತ ಮಹಾಮೌನವೇ ಒಳಿತೆಂದ
ನಮ್ಮ ಬುದ್ಧನ ಕೇಳಿದಿರ
ನೀವು ನಮ್ಮ ಬುದ್ಧನ ಕೇಳಿದಿರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಹಿಸಿಹಿ ಕತೆ
Next post ಸೂರುಕೊಡಿ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys