ಮಾತುಮಾತಿಗೆ

ಮಾತುಮಾತಿಗೆ ಸಿಟ್ಟುಮಾಡಿದಿರಿ
ಪಾತ್ರೆ ಪಗಡೆಗಳ ಒಡೆದುಹಾಕಿದಿರಿ
ಕಂಡಕಂಡವರಿಗೆ ಕೆಂಡವಾದಿರಿ
ಸಿಟ್ಟು ನಾಶಕೆ ಮೂಲವೆಂದ ನಮ್ಮ
ಬುದ್ಧನ ಕೇಳಿದಿರ

ಅದು ಬೇಕು ಇದು ಬೇಕು ಎಲ್ಲ ಬೇಕೆಂದಿರಿ
ಎಷ್ಟು ದೊರಕಿದರು ಇನ್ನಷ್ಟು ಬೇಕೆಂದಿರಿ
ಸಾಕೆಂಬ ಪದವನ್ನೆ ಮರೆತುಬಿಟ್ಟಿರಿ
ಆಸೆಯೇ ದುಃಖಕ್ಕೆ ಮೂಲವೆಂದ ನಮ್ಮ
ಬುದ್ಧನ ಕೇಳಿದಿರ

ಅನ್ಯರೆಂದು ಹಿಂಸೆ ನೀಡಿದಿರಿ
ಆಟವೆಂದು ಬೇಟೆಯಾಡಿದಿರಿ
ಹಾರುವ ಪಾರಿವಕೆ ಗುರಿಯಿಟ್ಟು ಹೊಡೆದಿರಿ
ಹಿಂಸೆಯೇ ಬಹು ದೊಡ್ಡ ಪಾಪವೆಂದ ನಮ್ಮ
ಬುದ್ಧನ ಕೇಳಿದಿರ

ಕರುಣೆ ತೋರಿದರೆ ತಮಗೇನು ಎಂದಿರಿ
ದಾನಧರ್ಮಗಳೆಲ್ಲ ಸುಳ್ಳು ಎಂದಿರಿ
ಪಡೆಯದಲ್ಲದೆ ಕೊಡಲಾರೆವೆಂದಿರಿ
ಕಾರಣ ವಿನಾ ಪ್ರೀತಿ ನಿಜವಾದ ಪ್ರೀತಿಯೆಂದ ನಮ್ಮ
ಬುದ್ಧನ ಕೇಳಿದಿರ

ಗಹಗಹ ನಗೆಗಿಂತ ಮುಗುಳುನಗೆ ಮಿಗಿಲೆಂದ
ಬಡಬಡ ನುಡಿಗಿಂತ ಮೌನವ ಲೇಸೆಂದ
ಆಧ್ಯಾತ್ಮಕಿಂತ ಮಹಾಮೌನವೇ ಒಳಿತೆಂದ
ನಮ್ಮ ಬುದ್ಧನ ಕೇಳಿದಿರ
ನೀವು ನಮ್ಮ ಬುದ್ಧನ ಕೇಳಿದಿರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಹಿಸಿಹಿ ಕತೆ
Next post ಸೂರುಕೊಡಿ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…