Home / ಬಾಲ ಚಿಲುಮೆ / ಕಥೆ / ಕಹಿಸಿಹಿ ಕತೆ

ಕಹಿಸಿಹಿ ಕತೆ

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿಜಯನಗರ ಸಾಮ್ರಾಜ್ಯ ಆರಂಭದಲ್ಲೇ ಉತ್ತರ ಭಾರತದ ಕಳಿಂಗ ದೇಶದವರೆಗೂ ಸಿದ್ಧಿ ಪ್ರಸಿದ್ಧಿ ಹೊಂದಿತ್ತು!

ವಿಜಯನಗರ ಸಾಮ್ರಾಜ್ಯವನ್ನು ತೌಳವ ನರಸನಾಯಕ ಅಳುತ್ತಿದ್ದ. “ಅಧಾರ್ಮಿಕರಾದ ಮಹಾರಾಜರು ಎಂದೂ ಶ್ರೇಯಸ್ಸು ಹೊಂದಲಾರರು” ಎಂಬ ಒಂದೇ ಒಂದು ಮೂಲ ಮಂತ್ರದಿಂದ ಇಡೀ ಭರತ ಖಂಡದೆಲ್ಲಲ್ಲ ವಿಜಯನಗರ ಸಾಮ್ರಾಜ್ಯ ಪ್ರಭುದ್ಧ ಮಾನಕ್ಕೆ ಬಂತು.

ಇತ್ತ- ಕಳಿಂಗ ದೇಶದ ಬಸವಭಟ್ಟನೆಂಬ ಉದ್ದಾಮ ಪಂಡಿತರತ್ನ ಆಸ್ಥಾನದ ಪಂಡಿತ ಪಾಮರ ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಬರೀ ವಾದವಿವಾದ ಮಾಡುತ್ತಾ ಪಾಂಡಿತ್ಯತನ ಪ್ರದರ್ಶಿಸುತ್ತಾ ಎಲ್ಲ ರಾಜ್ಯಗಳನ್ನು ಗೆಲ್ಲುತ್ತಾ ಮೀಸೆ ತಿರುವುತ್ತಾ ಹೊಗಳು ಭಟ್ಟರನ್ನು ಹಿಂದಿಟ್ಟುಕೊಂಡು ವಿಜಯನಗರ ಸಾಮ್ರಾಜ್ಯಕ್ಕೆ ಒಂದು ದಿನ ಎಡಗಾಲಿಟ್ಟು ವಾದ್ಯ ಮೇಳ, ಶಂಕು, ಜಾಗಟೆ, ತುತ್ತೂರಿ ಮೇಲು ಪಂಚಾಂಗವನ್ನು ಓದುತ್ತಾ ಮೆರವಣಿಗೆಯಲ್ಲಿ ಜಯಘೋಷ ಮೊಳಗಿಸುತ್ತಾ ಬಸವಭಟ್ಟ ವಿಜಯನಗರ ಸಾಮ್ರಾಜ್ಯವನ್ನು ಪ್ರವೇಶಿಸಿದ.

ಇಡೀ ವಿಜಯನಗರ ಸಾಮ್ರಾಜ್ಯ ಅಲ್ಲಾಡಿ ಸದ್ದಡಗಿತು! ಉತ್ತರದಿಂದ ದಕ್ಷಿಣದವರೆಗೆ ಬಸವ ಭಟ್ಟನನ್ನು ಗೆದ್ದ ರಾಜ ಮಹಾರಾಜರಿಲ್ಲ! ಹೋಗಲಿ ಉದ್ದಾಮ ಪಂಡಿತ ಪಾಮರರಿಲ್ಲ. ಶರಣಾಗತಿಯೊಂದೇ ಈಗಿರುವ ಮಾರ್ಗವೆಂದು ರಾಜಾಧಿರಾಜ ತೌಳವ ನರಸನಾಯಕ ತಲೆಗೆ ಕೈಹೊತ್ತು ಕುಳಿತೇ ಬಿಟ್ಟ!

ಒಂದು ದಿನ- ಬಸವಭಟ್ಟರಿಗೂ ವ್ಯಾಸರಾಜರಿಗೂ ವಾದ ವಿವಾದ ಶುರುವಾಯಿತು. ಎರಡು ಹಗಲು ಮೂರು ರಾತ್ರಿ ತರ್ಕಬದ್ಧ ವಾದ ಸರಣಿಯು ಸಾಗಿತು! ವೇದವೇದಾಂತ ತರಂಗಗಳಲ್ಲಿ ಪರಿಪೂರ್ಣರಾಗಿದ್ದ ವ್ಯಾಸರಾಜರು ತಮ್ಮ ತತ್ವಸಿದ್ಧಾಂತ ಪ್ರಮಾಣ ಬದ್ಧವಾದ ವಾದವಿವಾದಗಳಲ್ಲಿ ಸಂಪೂರ್ಣವಾಗಿ ಗೆದ್ದರು! ಬಸವಭಟ್ಟರು ಸೋತು ಶರಣಾದರು.

ಅದಕ್ಕೆ ಪ್ರತಿಯಾಗಿ ತೌಳವ ನರಸನಾಯಕ ಬಸವಭಟ್ಟರನ್ನು ಅವರಿಂದೆ ಬಂದಿದ್ದ ಹೊಗಳುಭಟ್ಟರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಕಣ್ಣೀರಿಟ್ಟು- ‘ಅಯ್ಯೋ ನಮ್ಮನ್ನು ಮನ್ನಿಸಿ, ನಮ್ಮ ಕಳಿಂಗ ದೇಶದ ರಾಜನಿಂದ ಪ್ರೇರೇಪಿತನಾಗಿ ನಮ್ಮ ಶಿಷ್ಯರೊಡಗೂಡಿ ನಿಮ್ಮನ್ನು ನಿಮ್ಮ ಸಾಮ್ರಾಜ್ಯವನ್ನು ಅವಮಾನಿಸಿ ಹೀಯಾಳಿಸಬೇಕೆಂದು ದುಷ್ಟಾಲೋಚನೆ ಇಟ್ಟುಗೊಂಡು ಬಂದವನನ್ನು ಸನ್ಮಾನಿಸಿದ್ದು ಕಣ್ಣು ತೆರೆಸಿದೆ. ನಮ್ಮನ್ನೆಲ್ಲ ಮನ್ನಿಸಿ’ ಎಂದು ಶ್ರೀಪಂಚಿಯ ಲಿಂಗವನ್ನು ಪ್ರೀತಿಪೂರ್ವಕವಾಗಿ ಬಸವಭಟ್ಟ ನೀಡಿದ.

ಅದಕ್ಕೆ ನರಸನಾಯಕ ‘ವಿಜಯನಗರ ಸಾಮ್ರಾಜ್ಯದಲ್ಲಾದ ಕಹಿಯನ್ನು ಇಲ್ಲೇ ಬಿಟ್ಟು ಸನ್ಮಾನವೆಂಬ ಸಿಹಿಯೊಂದಿಗೆ ಕಳಿಂಗ ದೇಶವನ್ನು ತಲುಪಿ’ ಎಂದು ಎಲ್ಲರೆದುರಿಗೆ ಬೆನ್ನುತಟ್ಟಿ ಕಳಿಸಿಕೊಟ್ಟ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...