ಕಾಮನಬಿಲ್ಲು

ಮಳೆ ಬಿಡುವು ಕೊಟ್ಟಿದೆ
ಬಿಸಿಲು ಬಿದ್ದಿದೆ ನೆಲ ಆರಿದೆ
ಹಿರಿ ಹಿರಿ ಹಿಗ್ಗಿ ಓಡಿದರು ಬಯಲಿಗೆ
ಕುಣಿ ಕುಣಿದು ಕುಪ್ಪಳಿಸಿದರು ಜತೆ ಜತೆಗೆ

ಮೋಡದ ತೆರೆ ಸರಿಯಿತು ಗಾಳಿಗೆ
ಕಂಡಿತು ಬಣ್ಣ ಬಣ್ಣದ ಮಳೆಬಿಲ್ಲು
ಏಳು ವರ್ಣಗಳ ಕಸೂತಿ ಬಾಗಿದ
ಬಿಂಕದ ನೋಟ ಬಲು ಸುಂದರ

ಆಯಿತು ಆಗಸಕ ತೋರಣ
ಎಷ್ಟೊಂದು ಆಕರ್ಷಣೆ ಈ ಕಂಕಣ
ಎಳೆಯರೆಲ್ಲ ಕಂಡರು ಹಿಗ್ಗಿನಲಿ
ವಿಸ್ಮಯಕೆ ನಿಂದರು ಬೆರಗಾಗುತಲಿ

ಮನದಲಿ ಕಾಡಿದವು ತಲ್ಲಣಗಳು ನೂರೆಂಟು
ಗೆಳೆಯರೆಲ್ಲ ಕೂಡಿ ನಲಿದರೇನುಂಟು
ಗುರುಗಳ ಬಳಿ ಓಡಿದರು ಅರ್‍ತಿಯಲಿ
ಪ್ರಶ್ನೆಗಳ ಕೇಳಿದರು ಕೌತುಕದಲಿ

ತುಂತುರು ಹನಿಗಳ ಸೀಳಿದ ಚಿತ್ತಾರ
ಬೆಳಕಿನ ವಿಕಿರಣಗಳ ಚಮತ್ಕಾರ
ಎಂಥ ಅದ್ಭುತ ಸೃಷ್ಟಿ ಎನಲು
ಬಿಟ್ಟರು ಕಣ್ಘಳ ಅಚ್ಚರಿಯಲಿ

ಮೂಡುವುದು ಬಿನ್ನಾಣ ಕಲ್ಯಾಣ
ಸೂರ್‍ಯನ ಎದುರು ದಿಕ್ಕಿನಲಿ
ಆಗಸದ ಕುಸುರಿಗೆ ಕಾರಣವು
ಬೆಳಕಿನ ವರ್‍ಣ ವಿಭಜನೆಯು

ಪ್ರಕೃತಿ ನಿಘಂಟಿನಲಿ
ಏನೆಲ್ಲ ವೈಚಿತ್ರ್ಯಗಳುಂಟು ಎನಲು
ಹೊಳೆಯಿತು ಮಿಂಚು ಎಲ್ಲರ ಕಣ್ಣಿನಲು
ತೇಲಿತು ನಗೆಯೊಂದು ಮಂದಹಾಸದಲಿ
*****
೧೧ ಮಾರ್ಚ್ ೨೦೧೦ ರ ಸುಧಾ ವಾರಪತ್ರಿಕೆಯ ಎಳೆಯರ ಅಂಗಳದಲ್ಲಿ ಪ್ರಕಟ.
೨-೫-೨೦೧೦ ರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುಗಾದಿ
Next post ಉತ್ತರದ ದೇಶಕ್ಕೆ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…