Home / ಕವನ / ಕವಿತೆ / ಕಾಮನಬಿಲ್ಲು

ಕಾಮನಬಿಲ್ಲು

ಮಳೆ ಬಿಡುವು ಕೊಟ್ಟಿದೆ
ಬಿಸಿಲು ಬಿದ್ದಿದೆ ನೆಲ ಆರಿದೆ
ಹಿರಿ ಹಿರಿ ಹಿಗ್ಗಿ ಓಡಿದರು ಬಯಲಿಗೆ
ಕುಣಿ ಕುಣಿದು ಕುಪ್ಪಳಿಸಿದರು ಜತೆ ಜತೆಗೆ

ಮೋಡದ ತೆರೆ ಸರಿಯಿತು ಗಾಳಿಗೆ
ಕಂಡಿತು ಬಣ್ಣ ಬಣ್ಣದ ಮಳೆಬಿಲ್ಲು
ಏಳು ವರ್ಣಗಳ ಕಸೂತಿ ಬಾಗಿದ
ಬಿಂಕದ ನೋಟ ಬಲು ಸುಂದರ

ಆಯಿತು ಆಗಸಕ ತೋರಣ
ಎಷ್ಟೊಂದು ಆಕರ್ಷಣೆ ಈ ಕಂಕಣ
ಎಳೆಯರೆಲ್ಲ ಕಂಡರು ಹಿಗ್ಗಿನಲಿ
ವಿಸ್ಮಯಕೆ ನಿಂದರು ಬೆರಗಾಗುತಲಿ

ಮನದಲಿ ಕಾಡಿದವು ತಲ್ಲಣಗಳು ನೂರೆಂಟು
ಗೆಳೆಯರೆಲ್ಲ ಕೂಡಿ ನಲಿದರೇನುಂಟು
ಗುರುಗಳ ಬಳಿ ಓಡಿದರು ಅರ್‍ತಿಯಲಿ
ಪ್ರಶ್ನೆಗಳ ಕೇಳಿದರು ಕೌತುಕದಲಿ

ತುಂತುರು ಹನಿಗಳ ಸೀಳಿದ ಚಿತ್ತಾರ
ಬೆಳಕಿನ ವಿಕಿರಣಗಳ ಚಮತ್ಕಾರ
ಎಂಥ ಅದ್ಭುತ ಸೃಷ್ಟಿ ಎನಲು
ಬಿಟ್ಟರು ಕಣ್ಘಳ ಅಚ್ಚರಿಯಲಿ

ಮೂಡುವುದು ಬಿನ್ನಾಣ ಕಲ್ಯಾಣ
ಸೂರ್‍ಯನ ಎದುರು ದಿಕ್ಕಿನಲಿ
ಆಗಸದ ಕುಸುರಿಗೆ ಕಾರಣವು
ಬೆಳಕಿನ ವರ್‍ಣ ವಿಭಜನೆಯು

ಪ್ರಕೃತಿ ನಿಘಂಟಿನಲಿ
ಏನೆಲ್ಲ ವೈಚಿತ್ರ್ಯಗಳುಂಟು ಎನಲು
ಹೊಳೆಯಿತು ಮಿಂಚು ಎಲ್ಲರ ಕಣ್ಣಿನಲು
ತೇಲಿತು ನಗೆಯೊಂದು ಮಂದಹಾಸದಲಿ
*****
೧೧ ಮಾರ್ಚ್ ೨೦೧೦ ರ ಸುಧಾ ವಾರಪತ್ರಿಕೆಯ ಎಳೆಯರ ಅಂಗಳದಲ್ಲಿ ಪ್ರಕಟ.
೨-೫-೨೦೧೦ ರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...