Home / ಕವನ / ಕವಿತೆ / ಶ್ರಾವಣ ಬಂತೆಂದರೆ

ಶ್ರಾವಣ ಬಂತೆಂದರೆ

ಶ್ರಾವಣ ಮಾಸ ಬಂತೆಂದರೆ
ಸಿಗದು ಉಪಾಹಾರ ಜಳಕವಿಲ್ಲದೆ
ಎರಡು ದಿನಕ್ಕೊಮ್ಮೆ ಮಾಡುತ್ತಿದ್ದ ಜಳಕ
ನೀರಿಲ್ಲದಿದ್ದರೂ ಈಗ ದಿನವೂ ಜಳಕ

ದೇವರ ಪೂಜೆ ಮಾಡದಿದ್ದ ನಾನು
ಅವರ ಮೈ ತೊಳೆಯುವುದೀಗ ನನ್ನ ಸರದಿ

ಶ್ರಾವಣ ನೆಪದಲ್ಲಾದರೂ ಎಚ್ಚರಿಸುವಳು
ಮಾಡದ ತಪ್ಪಿಗೆ ಮನ್ನಿಸೆಂದು
ದೇವರಲ್ಲಿ ಬೇಡಿಕೊಳ್ಳಿ ಎಂದು

ಇಷ್ಟವಿಲ್ಲದಿದ್ದರೂ ಸಂಜೆ
ಬಿಡದೇ ಕರೆದೊಯ್ಯುವಳು ನನ್ನ
ದೇವಸ್ಥಾನಕೆ ಜೊತೆಯಲಿ

ಮುಗಿದರೂ ಶ್ರಾವಣ ಮಾಸ
ದೇವರಿಗೆ ಮಾಡಿಸುವಳು ಅಭಿಷೇಕ
ನನಗೆ ಮಾತ್ರ ನಿತ್ಯ ಅಭಿಷೇಕ
ಮಾಡಿ ದೇವರಿಗೆ ಪೂಜೆ ಎಂದು

ಶ್ರಾವಣ ಕಳೆಯುವ ತನಕ
ನಾನು ಪಕ್ಕಾ ಬ್ರಹ್ಮಚಾರಿ ಗೊತ್ತಾ!

ಆದರೂ
ಬಂತೆಂದರೆ ಶ್ರಾವಣ
ನನಗದೇನೋ ಸಂಭ್ರಮ ಮಹದಾನಂದ

ಮಾಡುವಳು ರುಚಿ ರುಚಿ ಅಡುಗೆ
ಬಗೆ ಬಗೆ ತಿಂಡಿ ತಿನಿಸು
ಕಡುಬು ಪಾಯಸ ಖೀರು ಕೋಸುಂಬರಿ
ನಾ ತಿನ್ನುವೆ ಚಪ್ಪರಿಸಿ

ಕೈ ಬಳೆ ಸದ್ದಿನಲಿ ಮಾಡಿದಡುಗೆ
ಘಮ-ಘಮಿಸುತಲಿ
ಅದೇನೋ ಪರಿಮಳದಾಕರ್ಷಣೆ ಅದರಲಿ

ಓರೆಗಣ್ಣಿನಲಿ ನೋಡುತ ಪ್ರೀತಿಯಲಿ
ಬಡಿಸಿದರೆ ಪಾಯಸದ ರುಚಿ ಸಿಗದು ಬೇರೆಲ್ಲೂ

ಅವಳ ನಡಿಗೆಯ ಗೆಜ್ಜೆಯ ಸಪ್ಪಳದಲಿ
ಸಿರಿಲಕ್ಷ್ಮಿ ಇಲ್ಲೆಂದೆನಿಸದಿರದು ಮನೆಯಲಿ

ನನಗದು ಕೋಟಿ ರುಪಾಯಿಗೂ ಮಿಗಿಲು
*****
೫-೯-೨೦೧೦ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...