ಶ್ರಾವಣ ಬಂತೆಂದರೆ

ಶ್ರಾವಣ ಮಾಸ ಬಂತೆಂದರೆ
ಸಿಗದು ಉಪಾಹಾರ ಜಳಕವಿಲ್ಲದೆ
ಎರಡು ದಿನಕ್ಕೊಮ್ಮೆ ಮಾಡುತ್ತಿದ್ದ ಜಳಕ
ನೀರಿಲ್ಲದಿದ್ದರೂ ಈಗ ದಿನವೂ ಜಳಕ

ದೇವರ ಪೂಜೆ ಮಾಡದಿದ್ದ ನಾನು
ಅವರ ಮೈ ತೊಳೆಯುವುದೀಗ ನನ್ನ ಸರದಿ

ಶ್ರಾವಣ ನೆಪದಲ್ಲಾದರೂ ಎಚ್ಚರಿಸುವಳು
ಮಾಡದ ತಪ್ಪಿಗೆ ಮನ್ನಿಸೆಂದು
ದೇವರಲ್ಲಿ ಬೇಡಿಕೊಳ್ಳಿ ಎಂದು

ಇಷ್ಟವಿಲ್ಲದಿದ್ದರೂ ಸಂಜೆ
ಬಿಡದೇ ಕರೆದೊಯ್ಯುವಳು ನನ್ನ
ದೇವಸ್ಥಾನಕೆ ಜೊತೆಯಲಿ

ಮುಗಿದರೂ ಶ್ರಾವಣ ಮಾಸ
ದೇವರಿಗೆ ಮಾಡಿಸುವಳು ಅಭಿಷೇಕ
ನನಗೆ ಮಾತ್ರ ನಿತ್ಯ ಅಭಿಷೇಕ
ಮಾಡಿ ದೇವರಿಗೆ ಪೂಜೆ ಎಂದು

ಶ್ರಾವಣ ಕಳೆಯುವ ತನಕ
ನಾನು ಪಕ್ಕಾ ಬ್ರಹ್ಮಚಾರಿ ಗೊತ್ತಾ!

ಆದರೂ
ಬಂತೆಂದರೆ ಶ್ರಾವಣ
ನನಗದೇನೋ ಸಂಭ್ರಮ ಮಹದಾನಂದ

ಮಾಡುವಳು ರುಚಿ ರುಚಿ ಅಡುಗೆ
ಬಗೆ ಬಗೆ ತಿಂಡಿ ತಿನಿಸು
ಕಡುಬು ಪಾಯಸ ಖೀರು ಕೋಸುಂಬರಿ
ನಾ ತಿನ್ನುವೆ ಚಪ್ಪರಿಸಿ

ಕೈ ಬಳೆ ಸದ್ದಿನಲಿ ಮಾಡಿದಡುಗೆ
ಘಮ-ಘಮಿಸುತಲಿ
ಅದೇನೋ ಪರಿಮಳದಾಕರ್ಷಣೆ ಅದರಲಿ

ಓರೆಗಣ್ಣಿನಲಿ ನೋಡುತ ಪ್ರೀತಿಯಲಿ
ಬಡಿಸಿದರೆ ಪಾಯಸದ ರುಚಿ ಸಿಗದು ಬೇರೆಲ್ಲೂ

ಅವಳ ನಡಿಗೆಯ ಗೆಜ್ಜೆಯ ಸಪ್ಪಳದಲಿ
ಸಿರಿಲಕ್ಷ್ಮಿ ಇಲ್ಲೆಂದೆನಿಸದಿರದು ಮನೆಯಲಿ

ನನಗದು ಕೋಟಿ ರುಪಾಯಿಗೂ ಮಿಗಿಲು
*****
೫-೯-೨೦೧೦ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸರಕಾರಿ ಕಛೇರಿ
Next post ಮನೆಮನೆಯ ಸಮಾಚಾರ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…