ಛಿದ್ರ

ಉದ್ಯೋಗರಹಿತ ಸಾಫ್ಟ್‌ವೇರ್
ವೀರ ವೀರಾಗ್ರಣಿಯರಿಗೆ
ಆಯಿತು ಮುಖಭಂಗ

ಲಕ್ಷೋಪಲಕ್ಷ ಅಲಕ್ಷ್ಯದಿಂದಲಿ
ಕೂತು ಕಾಯುತಿಹರು ಬೆಂಚಿನಲಿ
ಜಾತಕ ಪಕ್ಷಿಯಂತೆ ನಗರದಲಿ

ಅತಿಯಾಸೆ ಬಿಸಿಲ ಬೇಗೆಯಲಿ
ಬಾಯಾರಿಕೆಯ ತೃಷೆ ನೀಗಿಸಲು
ಕಾಣಬಹುದೇ ಓಯಸಿಸ್ಸು
ಈ ಮರುಭೂಮಿಯಲಿ

ಹೊಸತನಕೆ ಕೈ ಚಾಚಿ ಇಟ್ಟರು
ತಿಲಾಂಜಲಿ ಕಳ್ಳು-ಬಳ್ಳಿ ಬಂಧು ಬಳಗಕೆ
ಹೊರಟಿತ್ತು ಪಬ್ ಚೈತ್ರಯಾತ್ರೆಗೆ
ಆಕರ್ಷಿಸುವವು ಸೂಜಿಗಲ್ಲಿನಂತೆ
ದೀಪದ ಹುಳು ರೆಕ್ಕೆ ಸುಟ್ಟುಕೊಳ್ಳುವಂತೆ

ಹೊಂದಾಣಿಕೆ ಸಂಬಂಧದಲಿ
ಭ್ರೂಣಗಳು ಬೀದಿ ಬದಿಯ ತೊಟ್ಟಿಯಲಿ
ಜವಾಬ್ದಾರಿಯಿಲ್ಲದ ಅನಿಷ್ಟತೆ-
ಕಂಪ್ಯೂಟರ್‍ಸ್ ಬಾಗಿನ

ಸಂಸ್ಕೃತಿಯ ತೊರೆದರೆ
ಬಣ್ಣ ಬಣ್ಣದ ಕನಸುಗಳೆಲ್ಲಾ ಚೆಲ್ಲಾಪಿಲ್ಲಿ
ಸಂಬಂಧಗಳ ಒಡೆದ ಕನ್ನಡಿಯಲಿ
ಮಾನವನ ಛಿದ್ರ ವಿಚ್ಛಿದ್ರ ಬಿಂಬಗಳು.
*****
೨೩-೩-೨೦೧೦ರ ಶಿವಮೊಗ್ಗದ ಸೃಷ್ಠಿ ರಾಜ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸರಳ ಜೀವಿ
Next post ಸಿಹಿಸುದ್ದಿ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys