Home / ಕವನ / ಕವಿತೆ / ಹಂಬಲ

ಹಂಬಲ

ನನಗೋ ತಂತಿ ಮೀಟುವಾಸೆ
ಆಕೆಗೋ ತಂಬೂರಿ ಆಗುವಾಸೆ

ಆಕೆಗೊ ಕಾಮನ ಬಿಲ್ಲಾಗುವಾಸೆ
ನನಗೋ ಕಾಮನಬಿಲ್ಲು ಕಾಣುವಾಸೆ

ಪಕ್ಕದ ಮನೆ ಬೆಳಕಿಗೆ
ನಮ್ಮಿಬ್ಬರ ಕಾಡುವಾಸೆ

ಸದ್ದಿಗೇಕೋ ಮುನಿಸು
ದಿಗ್ಗನೆದ್ದು ನೋಡಿದಳಾಕೆ
ಜಾರಿದ ಸೆರಗನ್ನು ಸರಿಪಡಿಸುತ
ಬೆಕ್ಕೊಂದು ಚಂಗನೆ ಜಿಗಿದು
ಮಾಯವಾಯಿತು ಮಿಂಚಿನಂತೆ

ನಮ್ಮೀರ್‍ವರ ಕನಸಿನಲಿ
ನೂರೆಂಟು ತವಕಗಳು ಹುಟ್ಟುವಾಸೆ
ಆ ತವಕಗಳಲಿ ನೂರೆಂಟು ಭಾವನೆಗಳಿಗೆ ಅರಳುವಾಸೆ

ಮಡುಗಟ್ಟಿದ ಮನ ಕಂಗೆಟ್ಟು
ರಂಗಾದ ತುಟಿ ಅದುರುತಿತ್ತು
ಮನ ಹಾವಿನಂತೆ ಹರಿದಾಡುತಿತ್ತು

ಎಷ್ಟೊ ವರ್ಷಗಳ ಅದುಮಿಟ್ಟ ಮನಸಿಗೆ
ಸ್ಫೋಟವಾಗುವಾಸೆ
ಕ್ಷಣ ಕ್ಷಣಕ್ಕೂ ಬೋಫೋರ್‍ಸ್ ಗುಂಡಿನಂತೆ
ಹೊರ ಚಿಮ್ಮುವಾಸೆ

ಅಂತೂ ಕೊನೆಗೆ ಎಲ್ಲದಕ್ಕೂ
ತ್ಯಾಪೆ ಹಾಕಿದೆವು
ಹೊರಗಡೆ ಮಳೆ ತೊಟ್ಟಿಕ್ಕುತಿತ್ತು
ರಾತ್ರಿ ಜಾರಿತು ಮೆಲ್ಲನೆ
ಹಕ್ಕಿಗಳು ಹಾಡ ತೊಡಗಿದವು
*****
೮-೧೦-೧೯೯೯ರ ಸಾಗರದ ಮಣ್ಣಿನವಾಸನೆ ವಾರಪತ್ರಿಕೆಯಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...