ನಮ್ಮ ಚಲುವ ಕನ್ನಡ ನಾಡು

ಕನ್ನಡ ನಾಡು ನಮ್ಮ ನಾಡು
ಭುವನೇಶ್ವರಿ ಮಡಿಲಲಿ ಪವಡಿಸಿದ ನಾಡು
ಕನ್ನಡ ಚೆಲ್ವ ಕುವರ ಕುವರಿಯರ ನಾಡು
ನಮ್ಮ ಚಲುವ ಕನ್ನಡ ನಾಡು

ಸುಂದರ ಬನ ಸಿರಿಗಳ ಸಾಲೇ
ಸಹ್ಯಾದ್ರಿ ಮಡಿಲಲಿ ಬೆಳೆದಿಹ ನಾಡೆ
ಸುವಾಸನೆಯ ಶ್ರೀಗಂಧದ ಬೀಡೇ
ನಮ್ಮ ಚಲುವ ಕನ್ನಡ ನಾಡೇ

ತುಂಗೆ, ಭದ್ರೆ, ಕಾವೇರಿ
ಕೃಷ್ಣೆ, ಶರಾವತಿ ಹರಿದಿಹ ನಾಡೇ
ಜೋಗದ ಸೌಂದರ್‍ಯದ ಖಣಿಯೇ
ನಮ್ಮ ಚೆಲುವ ಕನ್ನಡ ನಾಡೇ

ಸಕಲ ಕಲೆ ಸಂಸ್ಕೃತಿಗಳ ಮೆರೆದಿಹ ನಾಡು
ಸಾಹಿತ್ಯ ನವರಸಗಳ ಆಗರವೆನಿಸಿದ ನಾಡು
ವಿದ್ಯಾರಣ್ಯರು ಕಟ್ಟಿದ ನಾಡು
ನಮ್ಮ ಚೆಲುವ ಕನ್ನಡ ನಾಡು

ಪಂಪ ರನ್ನ ಪೊನ್ನ ಕವಿ ರತ್ನತ್ರಯರು
ಕುವೆಂಪು ದ.ರಾ. ಬೇಂದ್ರೆ ಮಾಸ್ತಿ ಕಾರಂತ
ಗೋಕಾಕ್ ಕಾರ್‍ನಾಡ ಮೂರ್‍ತಿ ಜನಿಸಿದ ನಾಡು
ನಮ್ಮ ಚೆಲುವ ಕನ್ನಡ ನಾಡು

ಕಂಪಲಿ ರಾಮನಾಥರ ಬಲಿದಾನದಿಂದಲಿ
ಆಲೂರು ವೆಂಕಟರಾಯರ ಪುರೋಹಿತ್ಯದಲ್ಲಿ
ಹೆಸರಾಯಿತು ‘ಕರ್‍ಣಾಟಕ’
ನಮ್ಮ ಚೆಲುವ ಕನ್ನಡ ನಾಡು

ನೆಲ ಜಲದೊಂದಿಗೆ ಮೊಳಗಿತು ಕನ್ನಡ ಕಹಳೆ
ಮುಕ್ಕೋಟಿ ಕನ್ನಡಿಗರ ಕುಸುಮ ಈ ಕನ್ನಡ
ನೀರನ್ನುಣಿಸಿ ಉಳಿಸಿ ಬೆಳೆಸಬನ್ನಿ
ನಮ್ಮ ಚೆಲುವ ಕನ್ನಡ ನಾಡು
*****
ನವೆಂಬರ್ ೧೯೮೯ರ ಸಾಗರ ವಾರ ಪತ್ರಿಕೆಯಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡಿ ಕಥೆ
Next post ಒಡೆದು ಹೋಗದ ಗೊಂಬೆ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…