ದೀಪ

ನಮ್ಮ ಊರಿನ
ಅಕ್ಕರೆಯ ಸಕ್ಕರೆ ಗೊಂಬೆ
ಕಾಂಕ್ರೀಟ್ ಕಾಡು
ಬೆಂಗಳೂರು ಸೇರುತಿಹಳು

ಮಲೆನಾಡು ಮೈಸಿರಿ
ಉದ್ಯಮಿಯೊಬ್ಬನ ಕೈಹಿಡಿಯುತಿಹಳು
ಇಲ್ಲಿನ ನಯ ವಿನಯಗಳ
ಬಿತ್ತಲಲ್ಲಿಗೆ ನಡೆಯುತಿಹಳು

ಪ್ರೀತಿಯ ಸಿಂಚನ ನೀಡುವಳು
ಅಲ್ಲಿನ ಮರ ಗಿಡ ಬಳ್ಳಿಗಳಿಗೆ
ನಮ್ಮೂರಿನ ಐಸಿರಿ
ಬೊಗಸೆ ತುಂಬ ಮಲ್ಲಿಗೆಯಾ ಚೆಲ್ಲಿ

ಹೆಸರಾಗುವಳಲ್ಲಿ
ಈ ಕನ್ನಡತಿ
ಹಚ್ಚುವಳಲ್ಲಿ ಕನ್ನಡದ ದೀಪ
ಆಕೆಯ ಪ್ರತಿ ಹೆಜ್ಜೆ ಹೆಜ್ಜೆಯಲಿ
ಗೆಜ್ಜೆಯ ನಿನಾದದಲಿ
ಈ ನಾಡಿನ ಕಂಪ ಸೂಸುತಿರಲಿ

ಈ ಅಚ್ಚು ಬೆಲ್ಲದಚ್ಚು
ಅಲ್ಲಿನವರಿಗೆ ಸಿಹಿಯಾಗಲಿ
ಶಾಲಿನಿ-ವಿಲಿಯಂ ರ ವಿವಾಹದ
ಬೆಳ್ಳಿ ಹಬ್ಬದ ಪ್ರತೀಕ

ಈ ಬಾಗಿನ ಕನ್ನಡದ ದೀಪ
ಅರಳಿ ಬೆಳಗಲಲ್ಲಿ ಈ ದೀಪ
ದೂರದ ನಾಡೊಂದರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಂತನೆ
Next post ಸುಡುಗಾಡು ಸಿದ್ದನ ಪ್ರಸಂಗ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…