ದೀಪ

ನಮ್ಮ ಊರಿನ
ಅಕ್ಕರೆಯ ಸಕ್ಕರೆ ಗೊಂಬೆ
ಕಾಂಕ್ರೀಟ್ ಕಾಡು
ಬೆಂಗಳೂರು ಸೇರುತಿಹಳು

ಮಲೆನಾಡು ಮೈಸಿರಿ
ಉದ್ಯಮಿಯೊಬ್ಬನ ಕೈಹಿಡಿಯುತಿಹಳು
ಇಲ್ಲಿನ ನಯ ವಿನಯಗಳ
ಬಿತ್ತಲಲ್ಲಿಗೆ ನಡೆಯುತಿಹಳು

ಪ್ರೀತಿಯ ಸಿಂಚನ ನೀಡುವಳು
ಅಲ್ಲಿನ ಮರ ಗಿಡ ಬಳ್ಳಿಗಳಿಗೆ
ನಮ್ಮೂರಿನ ಐಸಿರಿ
ಬೊಗಸೆ ತುಂಬ ಮಲ್ಲಿಗೆಯಾ ಚೆಲ್ಲಿ

ಹೆಸರಾಗುವಳಲ್ಲಿ
ಈ ಕನ್ನಡತಿ
ಹಚ್ಚುವಳಲ್ಲಿ ಕನ್ನಡದ ದೀಪ
ಆಕೆಯ ಪ್ರತಿ ಹೆಜ್ಜೆ ಹೆಜ್ಜೆಯಲಿ
ಗೆಜ್ಜೆಯ ನಿನಾದದಲಿ
ಈ ನಾಡಿನ ಕಂಪ ಸೂಸುತಿರಲಿ

ಈ ಅಚ್ಚು ಬೆಲ್ಲದಚ್ಚು
ಅಲ್ಲಿನವರಿಗೆ ಸಿಹಿಯಾಗಲಿ
ಶಾಲಿನಿ-ವಿಲಿಯಂ ರ ವಿವಾಹದ
ಬೆಳ್ಳಿ ಹಬ್ಬದ ಪ್ರತೀಕ

ಈ ಬಾಗಿನ ಕನ್ನಡದ ದೀಪ
ಅರಳಿ ಬೆಳಗಲಲ್ಲಿ ಈ ದೀಪ
ದೂರದ ನಾಡೊಂದರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಂತನೆ
Next post ಸುಡುಗಾಡು ಸಿದ್ದನ ಪ್ರಸಂಗ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…