ದೀಪ

ನಮ್ಮ ಊರಿನ
ಅಕ್ಕರೆಯ ಸಕ್ಕರೆ ಗೊಂಬೆ
ಕಾಂಕ್ರೀಟ್ ಕಾಡು
ಬೆಂಗಳೂರು ಸೇರುತಿಹಳು

ಮಲೆನಾಡು ಮೈಸಿರಿ
ಉದ್ಯಮಿಯೊಬ್ಬನ ಕೈಹಿಡಿಯುತಿಹಳು
ಇಲ್ಲಿನ ನಯ ವಿನಯಗಳ
ಬಿತ್ತಲಲ್ಲಿಗೆ ನಡೆಯುತಿಹಳು

ಪ್ರೀತಿಯ ಸಿಂಚನ ನೀಡುವಳು
ಅಲ್ಲಿನ ಮರ ಗಿಡ ಬಳ್ಳಿಗಳಿಗೆ
ನಮ್ಮೂರಿನ ಐಸಿರಿ
ಬೊಗಸೆ ತುಂಬ ಮಲ್ಲಿಗೆಯಾ ಚೆಲ್ಲಿ

ಹೆಸರಾಗುವಳಲ್ಲಿ
ಈ ಕನ್ನಡತಿ
ಹಚ್ಚುವಳಲ್ಲಿ ಕನ್ನಡದ ದೀಪ
ಆಕೆಯ ಪ್ರತಿ ಹೆಜ್ಜೆ ಹೆಜ್ಜೆಯಲಿ
ಗೆಜ್ಜೆಯ ನಿನಾದದಲಿ
ಈ ನಾಡಿನ ಕಂಪ ಸೂಸುತಿರಲಿ

ಈ ಅಚ್ಚು ಬೆಲ್ಲದಚ್ಚು
ಅಲ್ಲಿನವರಿಗೆ ಸಿಹಿಯಾಗಲಿ
ಶಾಲಿನಿ-ವಿಲಿಯಂ ರ ವಿವಾಹದ
ಬೆಳ್ಳಿ ಹಬ್ಬದ ಪ್ರತೀಕ

ಈ ಬಾಗಿನ ಕನ್ನಡದ ದೀಪ
ಅರಳಿ ಬೆಳಗಲಲ್ಲಿ ಈ ದೀಪ
ದೂರದ ನಾಡೊಂದರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಂತನೆ
Next post ಸುಡುಗಾಡು ಸಿದ್ದನ ಪ್ರಸಂಗ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys