ಒಬ್ಬನಿಗೆ ಲಾಟರಿ ಹುಚ್ಚು ಇತ್ತು. ಆತ ಹೃದ್ರೋಗಿ ಕೂಡ. ಒಮ್ಮ ಲಾಟರಿಯಲ್ಲಿ ಅತನಿಗೆ ೫೦ ಲಕ್ಷ ಬಹುಮಾನ ಬಂತು. ಈ ವಿಚಾರವನ್ನೂ ಧಿಡೀರನೆ
ಹೇಳಿಬಿಟ್ಟರೆ ಅಪಾಯದ ಸಂದರ್ಭವೆಂದು ತಿಳಿದು ವೈದ್ಯರ ಮೂಲಕ ಈ ಸಂದೇಶವನ್ನು ತಿಳಿಸಲು ಮನೆಯವರು ಏರ್ಪಾಡು ಮಾಡಿದ್ದರು. ವೈದ್ಯರು
ಕೇಳಿದರು: `ನಿನಗೆ ೫೦ ಲಕ್ಷರೂ ಲಾಟರಿಯಲ್ಲಿ ಬಂದು ಬಿಟ್ಟರೆ ಏನು ಮಾಡುತ್ತೀ?’ `ಅದರಲ್ಲಿ ಅರ್ಧಭಾಗ ಅಂದರ ೨೫ ಲಕ್ಷ ರೂ ನಿಮಗೆ ಕೊಟ್ಟುಬಿಡುತ್ತೇನೆ ಸಾರ್’ ಎಂದ. ಅದನ್ನು ವೈದ್ಯರು ಕೇಳಿಸಿಕೊಂಡುದೇ ತಡ ಅಲ್ಲಿಯೇ ಕುಸಿದು ಬಿದ್ದರು. ವೈದ್ಯರೂ ಹೃದ್ರೋಗಿಯಾಗಿದ್ದರು!
***