ಒಬ್ಬನಿಗೆ ಲಾಟರಿ ಹುಚ್ಚು ಇತ್ತು. ಆತ ಹೃದ್ರೋಗಿ ಕೂಡ. ಒಮ್ಮ ಲಾಟರಿಯಲ್ಲಿ ಅತನಿಗೆ ೫೦ ಲಕ್ಷ ಬಹುಮಾನ ಬಂತು. ಈ ವಿಚಾರವನ್ನೂ ಧಿಡೀರನೆ
ಹೇಳಿಬಿಟ್ಟರೆ ಅಪಾಯದ ಸಂದರ್ಭವೆಂದು ತಿಳಿದು ವೈದ್ಯರ ಮೂಲಕ ಈ ಸಂದೇಶವನ್ನು ತಿಳಿಸಲು ಮನೆಯವರು ಏರ್ಪಾಡು ಮಾಡಿದ್ದರು. ವೈದ್ಯರು
ಕೇಳಿದರು: `ನಿನಗೆ ೫೦ ಲಕ್ಷರೂ ಲಾಟರಿಯಲ್ಲಿ ಬಂದು ಬಿಟ್ಟರೆ ಏನು ಮಾಡುತ್ತೀ?’ `ಅದರಲ್ಲಿ ಅರ್ಧಭಾಗ ಅಂದರ ೨೫ ಲಕ್ಷ ರೂ ನಿಮಗೆ ಕೊಟ್ಟುಬಿಡುತ್ತೇನೆ ಸಾರ್’ ಎಂದ. ಅದನ್ನು ವೈದ್ಯರು ಕೇಳಿಸಿಕೊಂಡುದೇ ತಡ ಅಲ್ಲಿಯೇ ಕುಸಿದು ಬಿದ್ದರು. ವೈದ್ಯರೂ ಹೃದ್ರೋಗಿಯಾಗಿದ್ದರು!
***
Related Post
ಸಣ್ಣ ಕತೆ
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…