Home / ಕವನ / ಕವಿತೆ / ನಮ್ಮ ಜೀವ ನಮಗೆ ಬಿಡಿ

ನಮ್ಮ ಜೀವ ನಮಗೆ ಬಿಡಿ

ಹೊಟ್ಟೆಗಂತೂ ಕೂಳು ಇಲ್ಲ
ಬಟ್ಟೆಯಂತೂ ಸಿಕ್ಕಲಿಲ್ಲ
ಬಾಳಿಗಂತೂ ಬಾಯಿಯಿಲ್ಲ
ನಮ್ಮ ನೋವು ಮೀಟಲಿಲ್ಲ.

ನಮ್ಮ ಜೀವ ನಮಗೆ ಬಿಡಿ
ಬದುಕಲಿಷ್ಟು ಕಾಲ ಕೊಡಿ.

ಮುಖದ ತುಂಬ ಜೇಡ ಬಲೆ
ನಡೆವ ಬೀದಿ ನಮ್ಮ ನೆಲೆ
ಬಯಲ ಜೈಲಿನಲ್ಲಿ ಬಾಳು
ಗೋಳೆ ನಮ್ಮ ದಿನದ ಕೂಳು.

ನಮ್ಮ ಜೀವ ನಮಗೆ ಬಿಡಿ
ಬದುಕಲಿಷ್ಟು ಕಾಲ ಕೊಡಿ.

ಕೂತ ಕುರ್ಚಿ ಕಾಲು ನಾವು
ಕೀರ್ತಿ ಸೌಧ ಕಂಬ ನಾವು
ನಿಮಗೆ ಮೆಟ್ಟಲಾದೆವು
ಬೊಜ್ಜು ಬಿಟ್ಟ ಪೀಠಮದ
ಹೆಜ್ಜೆ ಹೆಜ್ಜೆ ಗೆಜ್ಜೆ ನಾದ
ನಿಮಗೆ ರಂಗವಾದೆವು.

ಬೆನ್ನ ಮೇಲೆ ನಿಮ್ಮ ಬೂಟು
ಎದೆಗೆ ಗುರಿ ನಿಮ್ಮ ಗುಂಡು
ನಮ್ಮ ನೆತ್ತರಿಂದ ನಿಮಗೆ
ಹೊಟ್ಟೆ ತುಂಬಿತು
ನಮ್ಮ ಕಣ್ಣ ನೀರು ನಿಮಗೆ
ಸ್ನಾನವಾಯಿತು.

ಬೇಡ ನಿಮ್ಮ ಮೊಸಳೆ ಮಾತು
ಕೋಟಿ ಕೋಟಿ ಲೆಕ್ಕವು
ಕಾಲ ಕೆಳಗೆ ನಮ್ಮ ಬಾಳು
ನಿಮಗೆ ಕೀರ್ತಿ ಕಳಶವು.

ನಮಗೆ ನೀವು ನೋಯಬೇಡಿ
ನಮಗೆ ಜೀವ ಸವೆಸಬೇಡಿ
ನಮ್ಮ ನೋವು ನಮಗೆ ಕೊಡಿ
ನಮ್ಮ ಜೀವ ನಮಗೆ ಬಿಡಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...