ವಸಂತನ ಮರೆ

ಸಂತಸದ ಸಾಗರದಿ ಶರಶೂರೆ ಸರಸಾಟ
ನೆಲಕಿಷ್ಟು ಸಿರಿಯು ವಾಸಂತದಲ್ಲಿ
ಅಂತವಿಲ್ಲದ ಇಂಥ ಶುಭದ ಸಂತೆಯು ಕೂಡ
ಹರಿಯುವದು ಕೊನೆಗೆ ಮಳೆಗಾಲದಲ್ಲಿ

ದೊರೆಯ ಭಯ ಅಲ್ಲಿಲ್ಲ ಹಿರಿಯರಂಜಿಕೆಯಿಲ್ಲ
ಋತುರಾಜ ವಾಸಂತ ಕಾಲದಲ್ಲಿ
ಕೊರತೆಯಿಲ್ಲದ ಸುಖವ ಬಡವಬಲ್ಲಿದರೆಲ್ಲ
ಸುರಿಯುವರು ಆ ಸೊಗದ ಸುಗ್ಗಿಯಲ್ಲಿ

ಸುರಿದ ಸೊಬಗಿನ ಸೊಂಪು ಮರಬಳ್ಳಿಗಳ ತಂಪು
ಪೂಗಂಪು ಸರಸ ಸುಳಿಗಾಳಿಯಲ್ಲಿ.
ಸ್ವರಬಿಚ್ಚಿ ಹಾಡುತಿಹ ಕೋಗಿಲೆಯ ದನಿ ಇಂಪು
ನಂದನದ ಸೌಂದರ್ಯಸಾರದಲ್ಲಿ

ಕಾರಹುಣ್ಣಿಮೆ ಬರಲು ಕಾರ್ಮೋಡ ಪಡೆ ಕವಿದು
ಬಿರುಗಾಳಿ ಭರಭರನೆ ಬೀಸಿಬೀಸಿ
ಸೂರೆಗೊಂಡವು ಬನದ ಸಿರಿಯಸಿಂಗಾರವನ್ನು
ಗುಡುಗು ಸಿಡಿಲುಗಳಾಗ ರಾಶಿರಾಶಿ

ಹೊಸಹೊಸದು ಹೊಂಬಣ್ಣ ಕೆಂಬಣ್ಣ ಹೂವುಗಳು
ಮರೆಯಾದವೆಂದು ನಾವರಚಲೇಕೆ?
ಕಸುಕಾಗಿ ಹಣ್ಣಾಗಿ ವಾಸಂತ ಕುವರನಿಗೆ
ಮೊಲೆಗೊಡಲು ಬರುತಿರಲು ಚಿಂತೆಯೇಕೆ?

ಮರೆಯಾದನೆನಬೇಡ ಹುರಿಯಾಗಿ ಬರುತಿಹನು
ತಿರುತಿರುಗಿ ವರುವರುಷದಾದಿಯಲ್ಲಿ
ತೆರೆಯಮರೆ ಸೇರಿದರು ಚಿರಜೀವಿ ತಾನಾಗಿ
ಮಗುಮಗುಳಿ ಮೆರೆಯುವನು ಲೋಕದಲ್ಲಿ

ಹುಟ್ಟಿದ್ದು ಸಾಯುವದು ಸತ್ತದ್ದೆ ಹುಟ್ಟುವದು
ಬ್ರಹ್ಮಾಂಡ ಚಕ್ರವಿದು ತಿರುಗಿ ತಿರುಗಿ
ಸೃಷ್ಟಿಯಲಿ ಸಕಲವೂ ಮೂಡುವದು ಮಸುಳುವದು
ನೂರೆಂಟು ಸಲ ಹೀಗೆ ಕರಗಿ ಕರಗಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಗೋಚರ
Next post ಇಮಾಂಬಾರಾ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…