Home / ಕವನ / ಕವಿತೆ / ಪಥಿಕ

ಪಥಿಕ

ನಡೆದಿಹೆನು ನಡೆದಿಹೆನು ಅಡವಿಯ ಅರಣ್ಯದಲಿ
ಮುಂಜಾನದಲ್ಲಿ ನಿನಗೆ ಕಾಣದೇನು?
ಕಡುಕತ್ತಲೆಯ ಸುತ್ತು ಬಿತ್ತರಿಸಿ ಮುತ್ತುತಿಹ
ಮೊದಲೆ ಬೆಳಕು ಕೊಡಲುಬಾರದೇನು?

ಕಂಟಿಕಲ್ಲಗಳೆಡವುತೆಡವುತ್ತ ಮುಗ್ಗರಿಸು –
ತಿರೆ ಎತ್ತಿ ನೀ ಹಿಡಿಯಬಾರದೇನು?
ಕುಂಠಿಸಿತು ಅಸುಶಕ್ತಿ ಸೋತು ಸಣ್ಣಾಗಿರಲು
ಕೈ ನೀಡಿ ನೀ ಕರೆಯಬಾರದೇನು?

ನಿರ್ವಾಣ ಸವಿಸುಖದ ಗೀರ್ವಾಣವಾಣಿಯನು
ಕೇಳ ಬಯಸುವೆ ಹೇಳಬಾರದೇನು?
ಸರ್ವ ಸಂಜೀವನದ ಸುಧೆಯ ಬಿಂದುವನೊಂದ
ಸುರಿದಮರನನು ಮಾಡಬಾರದೇನು?

ವಿಶ್ವಯಾತ್ರೆಗೆ ಹೊರಟ ದಾರಿಗನು ನಿನ್ನಲ್ಲಿ
ಶ್ರದ್ದೆಯಿಟ್ಟರೆ ತಿಳಿಯಬಾರದೇನು?
ವಿಶ್ವಮೂರ್ತಿಯೆ ಸಕಲ ನಾನೆಂದು ಹೊರಟಿರುವೆ
ಸರ್ವ ನೀನಾಗಿ ಬರಬಾರದೇನು?

ಬೆಳಕುಕತ್ತಲೆಗಳಾ ಗುರುತು ಹತ್ತದು ಇಲ್ಲಿ
ನೆಲೆಗೆಟ್ಟು ನನ್ನನ್ನೆ ಮರೆತೆ ನಾನು
ಸುಳಿವು ದೋರದೆ ನೀನು ನನ್ನಲ್ಲೆ ಅವಿತಿದ್ದು
ನನ್ನ ಮರೆವುದು ನಿನಗೆ ಉಚಿತವೇನು?

ಮರಬಳ್ಳಿ ಬಳಕುವವು ತುಳುಕುವವು ತೂಗುವವು
ನೀ ಕಣ್ಣು ತೆರೆದಿರಲು ಮಕರಂದವು
ಸ್ವರಸಂಪು ಇಂಪು ಇಂಚರ ಹಕ್ಕಿಗಳ ಹಾಡು
ಎಲ್ಲೆಲ್ಲಿ ಹೊಮ್ಮುವದು ಆನಂದವು.

ನಡೆನಡೆದು ದುಡಿದುಡಿದು ನಿನ್ನಿಂದ ಪಡೆಪಡೆದು
ನಿರ್ಮಿಸುವ ಉಪವನವ ನೋಡು ನೀನು
ಸಡಗರದ ನಂದನದ ಬನಸಿರಿಯ ಸೌರಭವ
ಸವಿಸವಿದು ಹರಕೆ ಕೊಡಬಾರದೇನು?

ಅಲೆದಲೆದು ಅರಸಿದರು ಲಭಿಸಲಾರದ ಕುಸುಮ
ನೀನಾಯ್ದು ನನಗೆ ಕೊಡಬಾರದೇನು?
ನಲಿನಲಿದು ಆ ಹೂವ ಹಾರ ಮಾಡುವೆ ನಿನಗೆ
ನಿನ್ನ ಹೂ ನೀ ಮುಡಿಯಬಾರದೇನು?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...