ಕನ್ನಡವ ನುಡಿ

ಅಪ್ಪ ಅಮ್ಮ ಅನ್ನು
ಕನ್ನಡ ಉಳಿಯುವುದು
ಕಳ್ಳು ಬಳ್ಳಿ ತಾನೆ
ನಂಟನು ಬೆಸೆಯುವುದು

ಅಕ್ಕಿ ರಾಗಿ ಅನ್ನು
ಕನ್ನಡ ಉಳಿಯುವುದು
ಕಾಳು ಕಾಡ್ಡಿ ತಾನೆ
ಹಸಿವನ್ನು ನೀಗುವುದು

ಹಳ್ಳ ಕೊಳ್ಳ ಅನ್ನು
ಕನ್ನಡ ಉಳಿಯುವುದು
ನೀರೊಂದಿದ್ದರೆ ಸಾಕು
ಊರೂ ಬೆಳೆಯುವುದು

ಗಿಡ ಮರ ಅನ್ನು
ಕನ್ನಡ ಉಳಿಯುವುದು
ಹೂವು ಹಣ್ಣು ಬೀಜ
ಬಸಿರು ಬೆಳೆಯುವುದು

ಗಾಳಿ ಬೆಂಕಿ ಅನ್ನು
ಕನ್ನಡ ಉಳಿಯುವುದು
ಬೆಳಕೊಂದಿದ್ದರೆ ಸಾಕು
ಕತ್ತಲು ಹರಿಯುವುದು

ತಾಳು ಬಾಳು ಅನ್ನು
ಕನ್ನಡ ಉಳಿಯುವುದು
ಹಮ್ಮನು ಬಿಟ್ಟರೆ ತಾನೆ
ಒಮ್ಮತ ಮೂಡುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಚ್ಚರಿ
Next post ಪೆದ್ದ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…