ದೇಶವೆಂದರೆ

ಜೀವವೆಂದರೆ ಬರಿ ಒಡಲು ಅಲ್ಲ
ಒಡಲಿಲ್ಲದೆ ಜೀವವು ಇಲ್ಲ
ಒಡಲು ಜೀವಗಳ ಸಂಬಂಧವೇ
ಜೀವನಾನುಬಂಧ
ಅದು ಎನಿತು ಸುಂದರ

ಫಲವೆಂದರೆ ಬರಿ ವೃಕ್ಷವಲ್ಲ
ವೃಕ್ಷವಿಲ್ಲದೆ ಫಲವು ಇಲ್ಲ
ವೃಕ್ಷ ಫಲಗಳ ಸಂಬಂಧವೇ
ಜೀವನಾನುಬಂಧ
ಅದು ಎನಿತು ಸುಂದರ

ಅರ್ಥವೆಂದರೆ ಬರಿ ವಾಕ್ಯವಲ್ಲ
ವಾಕ್ಯವಿಲ್ಲದೆ ಅರ್ಥವು ಇಲ್ಲ
ವಾಗರ್ಥ ಸಂಬಂಧ
ಅದು ಎನಿತು ಸುಂದರ

ದಯೆಯೆಂದರೆ ಬರಿ ದಾನವಲ್ಲ
ದಾನವಿಲ್ಲದೆ ದಯೆಯು ಇಲ್ಲ
ದಾನ ದಯೆಗಳ ಸಂಬಂಧ
ಅದು ಎನಿತು ಸುಂದರ

ಪ್ರೀತಿಯೆಂದರೆ ಬರಿ ನೀತಿಯಲ್ಲ
ನೀತಿಯಿಲ್ಲದೆ ಪ್ರೀತಿಯು ಇಲ್ಲ
ನೀತಿ ಪ್ರೀತಿಗಳ ಸಂಬಂಧ
ಅದು ಎನಿತು ಸುಂದರ

ಜ್ಞಾನವೆಂದರೆ ಬರಿ ಯೋಗವಲ್ಲ
ಯೋಗವಿಲ್ಲದೆ ಜ್ಞಾನವು ಇಲ್ಲ
ಯೋಗ ಜ್ಞಾನ ಸಂಬಂಧ
ಅದು ಎನಿತು ಸುಂದರ
*****

One thought on “0

  1. ತಿರುಮಲೇಸರು ಮಾಡುವ ಹಲ ಕೆಲವು ಪ್ರಯೋಗಗಳಲ್ಲಿ ಈ ಕವಿತೆಯೂಒಂದು. ಸಾಮಾನ್ಯ ವಸ್ತುವನ್ನು ಕಾವ್ಯಮಯವಾಗಿ ನೋಡುವ,ಅನೇಕ ಒಳಾರ್ಥಗಳನ್ನು ಪ್ತಿಪಾದಿಸುವ ಅವರ ಅನೇಕ ಕವಿತೆಗಳಲ್ಲಿ ಇದೂ ಒಂದು.

Leave a Reply to ಗೋನವಾರ ಕಿಶನ್ ರಾವ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೫
Next post ಲೋಕದ ರೀತಿ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys