ತಿದ್ದಬೇಕಾದ ಕೊರತೆಯೆ ಇಲ್ಲ, ಈ ಮಾತೆ
ಶತ್ರುಗಳು ಕೂಡ ಮೆಚ್ಚುವ ಸತ್ಯವಾಗಿರುತ
ಜನದ ಮನದಿಂದೆದ್ದ ನುಡಿಯೊಳೂ ಮೂಡಿದೆ.
ನಿನ್ನ ಹೊರ ಚೆಲುವು ಮೆಚ್ಚಿಗೆ ಮಕುಟ ಗಳಿಸಿದೆ,
ಮೆಚ್ಚಿ ನುಡಿಯುವ ನಾಲಿಗೆಗಳೆ ಕಣ್ಣಿಗೆ ಸಿಗುವ
ನೋಟದಾಚೆಗು ಸಾಗಿ ಮತ್ತೇನೊ ಗ್ರಹಿಸಿವೆ
ಸ್ತುತಿಗೆ ಬೆರೆಸಿವೆ ಬೇರೆಯೇನೋ ಅಪಸ್ವರವ.
ನಿನ್ನ ಚಿತ್ತದ ಚೆಲುವನ್ನವರು ಕಾಣುವರು,
ನಿನ್ನ ಕೃತಿ ನೋಡಿ ಆ ಚೆಲುವ ತರ್ಕಿಸುವರು;
ಕಣ್ಣೊಳಗೆ ಪ್ರೀತಿಯಿದ್ದರು ಕೂಡ ಗಾಂಪರು
ಹೂವ ಚೆಲುವಿಗೆ ಕಸದ ನಾತವನು ಬೆರಸುವರು.
ನಿನ್ನ ರೂಪಕ್ಕೆ ಜೊತೆಗೊಡುವ ಕಂಪೇಕಿಲ್ಲ ?
ಇಷ್ಟೆ ಕಾರಣ, ನೀ ಅಸಾಮಾನ್ಯನಾಗಿಲ್ಲ.
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 69
Those parts of thee that the world’s eye doth view
Related Post
ಸಣ್ಣ ಕತೆ
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
-
ಮತ್ತೆ ಬಂದ ವಸಂತ
ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…