ಮಾಡಿದ್ದ ನೆನೆದು ಮರುಗುವುದ ನೀನಿನ್ನು ಬಿಡು

ಮಾಡಿದ್ದ ನೆನೆದು ಮರುಗುವುದ ನೀನಿನ್ನು ಬಿಡು :
ಬೆಳ್ಳಿ ಚಿಲುಮೆಗೆ ಕೂಡ ಕೆಸರಿದೆ, ಗುಲಾಬಿಗೂ
ಮುಳ್ಳಿದೆ, ಗ್ರಹಣ ಮುಗಿಲು ಅಡ್ಡ ಹಾಯುವ ಕೇಡು
ಸೂರ್‍ಯ ಚಂದ್ರರಿಗು ಇದೆ, ರಸಗರೆವ ಮೊಗ್ಗಿಗೂ
ಒಡಲಿನೊಳಗೇ ಕೆಟ್ಟ ಕೀಟವಿದೆ. ಕೇಡನ್ನು
ಮಾಡದ ಮನುಷ್ಯರೇ ? ಬಿಡು ನಾನೆ ಎಡವಿರುವೆ,
ಹೋಲಿಕೆಯ ನೀಡಿ ನಿನ್ನೆಲ್ಲ ತಪ್ಪುಗಳನ್ನು
ಒಪ್ಪೆಂದು ವಾದಿಸಿದ ಅಪರಾಧಿಯಾಗಿರುವೆ.
ಆದ ತಪ್ಪಿಗು ಹೆಚ್ಚು ಪಾಲು ಕ್ಷಮಿಸಿದೆ, ನಿನ್ನ
ವಿಷಯಾಪರಾಧಕ್ಕೆ ಹೊಸ ಅರ್ಥ ನೀಡಿದೆ ;
ಪ್ರತಿಕಕ್ಷಿಯೇ ಹಿತಾಕಾಂಕ್ಷಿಯೂ ಆಗಿ ನ-
ನ್ನೆದುರು ನಾನೇ ನಿಯಮಬದ್ಧ ವಾದವ ಹಿಡಿದೆ.
ಪ್ರೀತಿ ಹಗೆಗಳ ನಡುವೆ ನಡೆವ ನನ್ನೀ ಯುದ್ಧ
ಎಂಥದೆನೆ ನನ್ನ ಪ್ರಿಯಗಳ್ಳಗೇ ನಾ ಬದ್ಧ !
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 35
No more be grieved at that which thou hast done :

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಂಸ್ತ್ರೀ – ೧೩
Next post ಮದುವೆ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys