ತಂಗಾಳಿ

ಆಗಸದಷ್ಟು ವಿಶಾಲ ಹೆಣ್ಣುಗಳ
ಹೃದಯಾಂತರದ ನೋವಿನ ಹರವು
ಹೆಜ್ಜೆ ಹೆಜ್ಜೆಗೂ ಕಟ್ಟಳೆಗಳ
ಬಂಧಿನಿ – ಕಣ್ಣಿದ್ದು ಮೈತುಂಬಾ
ಎಚ್ಚರವಹಿಸಿ – ಶೋಧಿಸಿ – ಪರೀಕ್ಷಿಸಿ
ಒಂದೊಂದೇ ಹೆಜ್ಜೆ ಮುಂದಿಟ್ಟಾಗ
ಚಿಗುರನು ಚಿವುಟುವ ಕೈಗಳು
ಮೈ ಮೇಲೆ ಸಾವಿರಾರು ಗಾಯಗಳು.

ಶ್ರಾವಣದ ಮಳೆಯಲಿ ತೋಯ್ದು
ಹರಿದು ಹೊಳೆಯಾಗಿ ಸಾಗುವ
ಅವಳ ಬಿಸಿ‌ಉಸಿರು, ಕಂಬನಿಗಳು,
ರಂಗಮಹಲಿನ ಏಕಾ೦ತ ಕೋಣೆಯಲಿ
ಸದ್ದಿಲ್ಲದೇ ಬಿದ್ದಿರುವ ಕೈದಿಗಳು.

ನೋವಿನ ಕುಲುಮೆಯಲಿ
ಕುದಿ ಕುದಿದು ಹೊರಬರುವ
ಕೆಂಡದುಂಡೆಗಳಂತಹ ಕವನಗಳು
ಸಿಡಿದರೆ ಕಿಡಿಗಳಾದಾವು – ಪ್ರೀತಿಯ
ಸಿಂಚನದಲಿ – ತಂಗಾಳಿಯಾದಾವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಷಿ ಕಷ್ಟವೆನಲೆಷ್ಟು ನಷ್ಟವೋ ಮನುಜರಿಗೆ?
Next post ಇಷ್ಟ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…