ತಂಗಾಳಿ

ಆಗಸದಷ್ಟು ವಿಶಾಲ ಹೆಣ್ಣುಗಳ
ಹೃದಯಾಂತರದ ನೋವಿನ ಹರವು
ಹೆಜ್ಜೆ ಹೆಜ್ಜೆಗೂ ಕಟ್ಟಳೆಗಳ
ಬಂಧಿನಿ – ಕಣ್ಣಿದ್ದು ಮೈತುಂಬಾ
ಎಚ್ಚರವಹಿಸಿ – ಶೋಧಿಸಿ – ಪರೀಕ್ಷಿಸಿ
ಒಂದೊಂದೇ ಹೆಜ್ಜೆ ಮುಂದಿಟ್ಟಾಗ
ಚಿಗುರನು ಚಿವುಟುವ ಕೈಗಳು
ಮೈ ಮೇಲೆ ಸಾವಿರಾರು ಗಾಯಗಳು.

ಶ್ರಾವಣದ ಮಳೆಯಲಿ ತೋಯ್ದು
ಹರಿದು ಹೊಳೆಯಾಗಿ ಸಾಗುವ
ಅವಳ ಬಿಸಿ‌ಉಸಿರು, ಕಂಬನಿಗಳು,
ರಂಗಮಹಲಿನ ಏಕಾ೦ತ ಕೋಣೆಯಲಿ
ಸದ್ದಿಲ್ಲದೇ ಬಿದ್ದಿರುವ ಕೈದಿಗಳು.

ನೋವಿನ ಕುಲುಮೆಯಲಿ
ಕುದಿ ಕುದಿದು ಹೊರಬರುವ
ಕೆಂಡದುಂಡೆಗಳಂತಹ ಕವನಗಳು
ಸಿಡಿದರೆ ಕಿಡಿಗಳಾದಾವು – ಪ್ರೀತಿಯ
ಸಿಂಚನದಲಿ – ತಂಗಾಳಿಯಾದಾವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಷಿ ಕಷ್ಟವೆನಲೆಷ್ಟು ನಷ್ಟವೋ ಮನುಜರಿಗೆ?
Next post ಇಷ್ಟ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…