Home / ಕವನ / ಕವಿತೆ / ಕೈಗಾರೀಕರಣ ಮತ್ತು ಸೈತಾನ

ಕೈಗಾರೀಕರಣ ಮತ್ತು ಸೈತಾನ

ನೀವು ಕೇಳುತ್ತೀರಿ
ವಿಂಡ್ಸರ್ ಮ್ಯಾನರ್
ರಸ್ತೆ ಬದಿಯಲ್ಲಿರುವ
ಡೇರಿ ಹೂಗಳ ಮೇಲೆ
ಕಪ್ಪು ಎಣ್ಣೆ ಸವರಿದವರ್‍ಯಾರೆಂದು?
ಗುಲಾಬಿ, ಹೂಗಳ ಬಣ್ಣ
ಕಪ್ಪಾಗಿರುವುದು ಯಾಕೆಂದು
ವಿಸ್ತರಣೆಯ ನೆಪದಲ್ಲಿ
ಕೈಗಾರಿಕೀಕರಣ ಶಾಸ್ತ್ರದಲ್ಲಿ
ಹುದುಗಿರುವ ಸಂಸ್ಕೃತಿ
ಇದುವೆಯೇ? ಎಂದು.

ನಾನು ವಾಸವಾಗಿದ್ದ
ಆರ್.ಟಿ. ನಗರದಲಿ
ಮಶೀನುಗಳ ಗಡಿಯಾರದ
ಮುಳ್ಳುಗಳ ಮಧ್ಯ
ದಿನಗಳು ನೂಕಿದ್ದು
ನನ್ನ ಅರಿವಿಗೆ
ಬಾರದೆ ಹೋಯಿತು.

ನನ್ನ ಮನೆ ಮೇಲಿಂದ
ನೋಡಿದರೆ ತಿಳಿನೀರಿನ
ಕೆರೆ, ಬನ ಕಾಣುತ್ತಿದ್ದವು.
ಈಗ ಸಿಮೆಂಟು ಕಾಂಕ್ರೀಟುಗಳು
ಆ ಕೆರೆಯನ್ನೂ ಹೂಬನವನ್ನೂ
ಸದ್ದಿಲ್ಲದೇ ನುಂಗಿ ಹಾಕಿದ್ದವು.

ಅಂದು ರಾಗಿ ರೊಟ್ಟಿಗೆ
ಚಟ್ನಿ ಗತಿಯಿಲ್ಲದ ದಿನಗಳಲ್ಲಿ
ಉಪ್ಪಿನ ಹರಳುಗಳೇ
ನಮಗೆ ಗತಿಯಾಗಿದ್ದವು.
ಇಂದು ಹರಳುಪ್ಪು
ಮಾರುಕಟ್ಟೆಯಿಂದ ಮಾಯವಾಗಿ
ಅಯೋಡಿನ್ ರಹಿತ
ಪುಡಿಯುಪ್ಪಿಗೆ ನಗರಗಳು
ಶರಣಾದೆವು ಗೆಳತಿ.

ದೊಡ್ಡ ದೊಡ್ಡ ನಗರಗಳು
ಕಾರ್ಖಾನೆ ಕಂಪನಿಗಳು
ಬೃಹತ್ ಉದ್ದಿಮೆಗಳ ಉಗಮ
ಕಾರ್ಖಾನೆಗಳ ಕೊಳವೆಯಲ್ಲಿ
ನನ್ನವರ ಕೆಂಪುರಕ್ತ
ಕಪ್ಪು ಬಣ್ಣ ಕಾರಿದಾಗ
ಬಂಡವಾಳಶಾಹಿ ಸೈತಾನ
ಮೀಸೆಯ ಮರೆಯಲ್ಲಿ
ನಗುತ್ತಿದ್ದ ಗೆಳತಿ ನಗುತ್ತಿದ್ದ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...