Home / ಕವನ / ಕವಿತೆ / ಕೈಗಾರೀಕರಣ ಮತ್ತು ಸೈತಾನ

ಕೈಗಾರೀಕರಣ ಮತ್ತು ಸೈತಾನ

ನೀವು ಕೇಳುತ್ತೀರಿ
ವಿಂಡ್ಸರ್ ಮ್ಯಾನರ್
ರಸ್ತೆ ಬದಿಯಲ್ಲಿರುವ
ಡೇರಿ ಹೂಗಳ ಮೇಲೆ
ಕಪ್ಪು ಎಣ್ಣೆ ಸವರಿದವರ್‍ಯಾರೆಂದು?
ಗುಲಾಬಿ, ಹೂಗಳ ಬಣ್ಣ
ಕಪ್ಪಾಗಿರುವುದು ಯಾಕೆಂದು
ವಿಸ್ತರಣೆಯ ನೆಪದಲ್ಲಿ
ಕೈಗಾರಿಕೀಕರಣ ಶಾಸ್ತ್ರದಲ್ಲಿ
ಹುದುಗಿರುವ ಸಂಸ್ಕೃತಿ
ಇದುವೆಯೇ? ಎಂದು.

ನಾನು ವಾಸವಾಗಿದ್ದ
ಆರ್.ಟಿ. ನಗರದಲಿ
ಮಶೀನುಗಳ ಗಡಿಯಾರದ
ಮುಳ್ಳುಗಳ ಮಧ್ಯ
ದಿನಗಳು ನೂಕಿದ್ದು
ನನ್ನ ಅರಿವಿಗೆ
ಬಾರದೆ ಹೋಯಿತು.

ನನ್ನ ಮನೆ ಮೇಲಿಂದ
ನೋಡಿದರೆ ತಿಳಿನೀರಿನ
ಕೆರೆ, ಬನ ಕಾಣುತ್ತಿದ್ದವು.
ಈಗ ಸಿಮೆಂಟು ಕಾಂಕ್ರೀಟುಗಳು
ಆ ಕೆರೆಯನ್ನೂ ಹೂಬನವನ್ನೂ
ಸದ್ದಿಲ್ಲದೇ ನುಂಗಿ ಹಾಕಿದ್ದವು.

ಅಂದು ರಾಗಿ ರೊಟ್ಟಿಗೆ
ಚಟ್ನಿ ಗತಿಯಿಲ್ಲದ ದಿನಗಳಲ್ಲಿ
ಉಪ್ಪಿನ ಹರಳುಗಳೇ
ನಮಗೆ ಗತಿಯಾಗಿದ್ದವು.
ಇಂದು ಹರಳುಪ್ಪು
ಮಾರುಕಟ್ಟೆಯಿಂದ ಮಾಯವಾಗಿ
ಅಯೋಡಿನ್ ರಹಿತ
ಪುಡಿಯುಪ್ಪಿಗೆ ನಗರಗಳು
ಶರಣಾದೆವು ಗೆಳತಿ.

ದೊಡ್ಡ ದೊಡ್ಡ ನಗರಗಳು
ಕಾರ್ಖಾನೆ ಕಂಪನಿಗಳು
ಬೃಹತ್ ಉದ್ದಿಮೆಗಳ ಉಗಮ
ಕಾರ್ಖಾನೆಗಳ ಕೊಳವೆಯಲ್ಲಿ
ನನ್ನವರ ಕೆಂಪುರಕ್ತ
ಕಪ್ಪು ಬಣ್ಣ ಕಾರಿದಾಗ
ಬಂಡವಾಳಶಾಹಿ ಸೈತಾನ
ಮೀಸೆಯ ಮರೆಯಲ್ಲಿ
ನಗುತ್ತಿದ್ದ ಗೆಳತಿ ನಗುತ್ತಿದ್ದ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...