Home / ಕವನ / ಕವಿತೆ / ಕೈಗಾರೀಕರಣ ಮತ್ತು ಸೈತಾನ

ಕೈಗಾರೀಕರಣ ಮತ್ತು ಸೈತಾನ

ನೀವು ಕೇಳುತ್ತೀರಿ
ವಿಂಡ್ಸರ್ ಮ್ಯಾನರ್
ರಸ್ತೆ ಬದಿಯಲ್ಲಿರುವ
ಡೇರಿ ಹೂಗಳ ಮೇಲೆ
ಕಪ್ಪು ಎಣ್ಣೆ ಸವರಿದವರ್‍ಯಾರೆಂದು?
ಗುಲಾಬಿ, ಹೂಗಳ ಬಣ್ಣ
ಕಪ್ಪಾಗಿರುವುದು ಯಾಕೆಂದು
ವಿಸ್ತರಣೆಯ ನೆಪದಲ್ಲಿ
ಕೈಗಾರಿಕೀಕರಣ ಶಾಸ್ತ್ರದಲ್ಲಿ
ಹುದುಗಿರುವ ಸಂಸ್ಕೃತಿ
ಇದುವೆಯೇ? ಎಂದು.

ನಾನು ವಾಸವಾಗಿದ್ದ
ಆರ್.ಟಿ. ನಗರದಲಿ
ಮಶೀನುಗಳ ಗಡಿಯಾರದ
ಮುಳ್ಳುಗಳ ಮಧ್ಯ
ದಿನಗಳು ನೂಕಿದ್ದು
ನನ್ನ ಅರಿವಿಗೆ
ಬಾರದೆ ಹೋಯಿತು.

ನನ್ನ ಮನೆ ಮೇಲಿಂದ
ನೋಡಿದರೆ ತಿಳಿನೀರಿನ
ಕೆರೆ, ಬನ ಕಾಣುತ್ತಿದ್ದವು.
ಈಗ ಸಿಮೆಂಟು ಕಾಂಕ್ರೀಟುಗಳು
ಆ ಕೆರೆಯನ್ನೂ ಹೂಬನವನ್ನೂ
ಸದ್ದಿಲ್ಲದೇ ನುಂಗಿ ಹಾಕಿದ್ದವು.

ಅಂದು ರಾಗಿ ರೊಟ್ಟಿಗೆ
ಚಟ್ನಿ ಗತಿಯಿಲ್ಲದ ದಿನಗಳಲ್ಲಿ
ಉಪ್ಪಿನ ಹರಳುಗಳೇ
ನಮಗೆ ಗತಿಯಾಗಿದ್ದವು.
ಇಂದು ಹರಳುಪ್ಪು
ಮಾರುಕಟ್ಟೆಯಿಂದ ಮಾಯವಾಗಿ
ಅಯೋಡಿನ್ ರಹಿತ
ಪುಡಿಯುಪ್ಪಿಗೆ ನಗರಗಳು
ಶರಣಾದೆವು ಗೆಳತಿ.

ದೊಡ್ಡ ದೊಡ್ಡ ನಗರಗಳು
ಕಾರ್ಖಾನೆ ಕಂಪನಿಗಳು
ಬೃಹತ್ ಉದ್ದಿಮೆಗಳ ಉಗಮ
ಕಾರ್ಖಾನೆಗಳ ಕೊಳವೆಯಲ್ಲಿ
ನನ್ನವರ ಕೆಂಪುರಕ್ತ
ಕಪ್ಪು ಬಣ್ಣ ಕಾರಿದಾಗ
ಬಂಡವಾಳಶಾಹಿ ಸೈತಾನ
ಮೀಸೆಯ ಮರೆಯಲ್ಲಿ
ನಗುತ್ತಿದ್ದ ಗೆಳತಿ ನಗುತ್ತಿದ್ದ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...