ಕೈಗಾರೀಕರಣ ಮತ್ತು ಸೈತಾನ

ನೀವು ಕೇಳುತ್ತೀರಿ
ವಿಂಡ್ಸರ್ ಮ್ಯಾನರ್
ರಸ್ತೆ ಬದಿಯಲ್ಲಿರುವ
ಡೇರಿ ಹೂಗಳ ಮೇಲೆ
ಕಪ್ಪು ಎಣ್ಣೆ ಸವರಿದವರ್‍ಯಾರೆಂದು?
ಗುಲಾಬಿ, ಹೂಗಳ ಬಣ್ಣ
ಕಪ್ಪಾಗಿರುವುದು ಯಾಕೆಂದು
ವಿಸ್ತರಣೆಯ ನೆಪದಲ್ಲಿ
ಕೈಗಾರಿಕೀಕರಣ ಶಾಸ್ತ್ರದಲ್ಲಿ
ಹುದುಗಿರುವ ಸಂಸ್ಕೃತಿ
ಇದುವೆಯೇ? ಎಂದು.

ನಾನು ವಾಸವಾಗಿದ್ದ
ಆರ್.ಟಿ. ನಗರದಲಿ
ಮಶೀನುಗಳ ಗಡಿಯಾರದ
ಮುಳ್ಳುಗಳ ಮಧ್ಯ
ದಿನಗಳು ನೂಕಿದ್ದು
ನನ್ನ ಅರಿವಿಗೆ
ಬಾರದೆ ಹೋಯಿತು.

ನನ್ನ ಮನೆ ಮೇಲಿಂದ
ನೋಡಿದರೆ ತಿಳಿನೀರಿನ
ಕೆರೆ, ಬನ ಕಾಣುತ್ತಿದ್ದವು.
ಈಗ ಸಿಮೆಂಟು ಕಾಂಕ್ರೀಟುಗಳು
ಆ ಕೆರೆಯನ್ನೂ ಹೂಬನವನ್ನೂ
ಸದ್ದಿಲ್ಲದೇ ನುಂಗಿ ಹಾಕಿದ್ದವು.

ಅಂದು ರಾಗಿ ರೊಟ್ಟಿಗೆ
ಚಟ್ನಿ ಗತಿಯಿಲ್ಲದ ದಿನಗಳಲ್ಲಿ
ಉಪ್ಪಿನ ಹರಳುಗಳೇ
ನಮಗೆ ಗತಿಯಾಗಿದ್ದವು.
ಇಂದು ಹರಳುಪ್ಪು
ಮಾರುಕಟ್ಟೆಯಿಂದ ಮಾಯವಾಗಿ
ಅಯೋಡಿನ್ ರಹಿತ
ಪುಡಿಯುಪ್ಪಿಗೆ ನಗರಗಳು
ಶರಣಾದೆವು ಗೆಳತಿ.

ದೊಡ್ಡ ದೊಡ್ಡ ನಗರಗಳು
ಕಾರ್ಖಾನೆ ಕಂಪನಿಗಳು
ಬೃಹತ್ ಉದ್ದಿಮೆಗಳ ಉಗಮ
ಕಾರ್ಖಾನೆಗಳ ಕೊಳವೆಯಲ್ಲಿ
ನನ್ನವರ ಕೆಂಪುರಕ್ತ
ಕಪ್ಪು ಬಣ್ಣ ಕಾರಿದಾಗ
ಬಂಡವಾಳಶಾಹಿ ಸೈತಾನ
ಮೀಸೆಯ ಮರೆಯಲ್ಲಿ
ನಗುತ್ತಿದ್ದ ಗೆಳತಿ ನಗುತ್ತಿದ್ದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿದ್ಧನು ರಾಜನಾಗಬೇಕಲ್ಲದೆ, ಸಮಾನರೆಲ್ಲರೆಂದರೆಂತು?
Next post ನಿಖರ ಸಂಖ್ಯೆ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…