Home / ಕವನ / ಕವಿತೆ / ಬಂಜೆಯಾಗಿದ್ದರೆ ಚೆನ್ನ

ಬಂಜೆಯಾಗಿದ್ದರೆ ಚೆನ್ನ

ಮಸೀದಿಗಳ ಉರುಳಿಸಿ
ಮಂದಿರಗಳ ಕಟ್ಟುವವರೇ
ಬಿದ್ದಿರುವ ಮನಗಳನ್ನೆಂತು
ಎತ್ತಿ ನಿಲ್ಲಿಸುವಿರಿ ಹೇಳಿ?
ಬಿದ್ದ ಗೋಡೆಗಳ ಮತ್ತೆ
ಎತ್ತಿ ನಿಲ್ಲಿಸಲೂ ಬಹುದು
ಎರಡು ಮನಗಳ ಮಧ್ಯ
ಎದ್ದ ಗೋಡೆಯನ್ನೆಂತು
ಬೀಳಿಸುವಿರಿ? ಹೇಳಿ.

ಕಂಡಿದ್ದೆವು ಹಿಂದೆ
ಚರಿತ್ರೆಯಲಿ ಕರಾಳ ದಿನ.
ಅಂದು ಹಿಂದೊಮ್ಮೆ
ಮಹಾತ್ಮ ಗಾಂಧಿಗೆ
ಗುಂಡಿಟ್ಟು ಕೊಂದ
ಈ ಚೆಡ್ಡಿ ವೀರರು,
ಇಂದು ಮಸೀದಿಯುರುಳಿಸಿ,
ಮುಖಕ್ಕೆ ಮಸಿ ಬಳಿದು
ಮತ್ತೊಂದು ಕಪ್ಪು ಚುಕ್ಕೆ
ಇಟ್ಟು ಹೋದವು ಚರಿತ್ರೆಗೆ.

ಡಿಸೆಂಬರ್ ಆರರಂದು
ಅಯೋಧ್ಯೆಯೆಡೆಗೆ
ಸಾಗರದಂತೆ ಹರಿದ
ಜನತೆಗೆ ಮತಿಗೆಡಿಸಿ,
ದಿಕ್ಕು ತಪ್ಪಿಸುವ ಧರ್ಮದ
ತುತ್ತೆಯನ್ನು ಕುಡಿಸಿ,
ಅವನತಿಯ ಶಿಖರವ
ಹತ್ತಿಸಿದವರೆ,
ಹೇಳಿ ನೀವು ನಿಜವಾದ
ಭಾರತ ಮಾತೆಯ ಮಕ್ಕಳೇ.

ಕರಸೇವಕರ ಕೈಯಲ್ಲಿ
ನಲುಗಿ ಹೋದ
ದೇವರು, ಧರ್ಮಗಳು –
ಮತ್ತೆಂದೂ ಮತಾಂಧರ
ಕೈಯಲ್ಲಿ ಸಿಕ್ಕಿಕೊಳ್ಳಲಾರೆನೆಂದು
ಪರಿತಪಿಸುತ್ತಿದ್ದರೆ-

ಭಾರತಾಂಬೆಯ ಕಣ್ಣುಗಳಲ್ಲಿ
ರಕ್ತದ ಕಣ್ಣೀರು-ಹರಿದು,
ಸಮತೆಯ ಎದೆಹಾಲು ಕುಡಿಸಿ,
ಪೊರೆದು ಪೋಷಿಸಿದ
ನನ್ನ ಮುಖಕ್ಕೇ
ಮಸಿ ಬಳಿದ ಇವರಿಗೆ
ನಾ ಕೊಟ್ಟ ಎದೆಹಾಲು
ವಿಷವಾಗಬಾರದಿತ್ತೆ?
ಎಂದು ಪರಿತಪಿಸುತ್ತಿರುವ
ಭಾರತ ಮಾತೇ ಹೇಳುತ್ತಿದ್ದಾಳೆ
“ಇಂತಹ ಮಕ್ಕಳನ್ನು
ಹೆರುವುದಕ್ಕೆ ಬದಲು
ನಾನು ಬಂಜೆಯಾಗಿದ್ದರೆ
ಎಷ್ಟೋ ಚೆನ್ನ” ಎಂದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...