Home / ಕವನ / ಕವಿತೆ / ಬಂಜೆಯಾಗಿದ್ದರೆ ಚೆನ್ನ

ಬಂಜೆಯಾಗಿದ್ದರೆ ಚೆನ್ನ

ಮಸೀದಿಗಳ ಉರುಳಿಸಿ
ಮಂದಿರಗಳ ಕಟ್ಟುವವರೇ
ಬಿದ್ದಿರುವ ಮನಗಳನ್ನೆಂತು
ಎತ್ತಿ ನಿಲ್ಲಿಸುವಿರಿ ಹೇಳಿ?
ಬಿದ್ದ ಗೋಡೆಗಳ ಮತ್ತೆ
ಎತ್ತಿ ನಿಲ್ಲಿಸಲೂ ಬಹುದು
ಎರಡು ಮನಗಳ ಮಧ್ಯ
ಎದ್ದ ಗೋಡೆಯನ್ನೆಂತು
ಬೀಳಿಸುವಿರಿ? ಹೇಳಿ.

ಕಂಡಿದ್ದೆವು ಹಿಂದೆ
ಚರಿತ್ರೆಯಲಿ ಕರಾಳ ದಿನ.
ಅಂದು ಹಿಂದೊಮ್ಮೆ
ಮಹಾತ್ಮ ಗಾಂಧಿಗೆ
ಗುಂಡಿಟ್ಟು ಕೊಂದ
ಈ ಚೆಡ್ಡಿ ವೀರರು,
ಇಂದು ಮಸೀದಿಯುರುಳಿಸಿ,
ಮುಖಕ್ಕೆ ಮಸಿ ಬಳಿದು
ಮತ್ತೊಂದು ಕಪ್ಪು ಚುಕ್ಕೆ
ಇಟ್ಟು ಹೋದವು ಚರಿತ್ರೆಗೆ.

ಡಿಸೆಂಬರ್ ಆರರಂದು
ಅಯೋಧ್ಯೆಯೆಡೆಗೆ
ಸಾಗರದಂತೆ ಹರಿದ
ಜನತೆಗೆ ಮತಿಗೆಡಿಸಿ,
ದಿಕ್ಕು ತಪ್ಪಿಸುವ ಧರ್ಮದ
ತುತ್ತೆಯನ್ನು ಕುಡಿಸಿ,
ಅವನತಿಯ ಶಿಖರವ
ಹತ್ತಿಸಿದವರೆ,
ಹೇಳಿ ನೀವು ನಿಜವಾದ
ಭಾರತ ಮಾತೆಯ ಮಕ್ಕಳೇ.

ಕರಸೇವಕರ ಕೈಯಲ್ಲಿ
ನಲುಗಿ ಹೋದ
ದೇವರು, ಧರ್ಮಗಳು –
ಮತ್ತೆಂದೂ ಮತಾಂಧರ
ಕೈಯಲ್ಲಿ ಸಿಕ್ಕಿಕೊಳ್ಳಲಾರೆನೆಂದು
ಪರಿತಪಿಸುತ್ತಿದ್ದರೆ-

ಭಾರತಾಂಬೆಯ ಕಣ್ಣುಗಳಲ್ಲಿ
ರಕ್ತದ ಕಣ್ಣೀರು-ಹರಿದು,
ಸಮತೆಯ ಎದೆಹಾಲು ಕುಡಿಸಿ,
ಪೊರೆದು ಪೋಷಿಸಿದ
ನನ್ನ ಮುಖಕ್ಕೇ
ಮಸಿ ಬಳಿದ ಇವರಿಗೆ
ನಾ ಕೊಟ್ಟ ಎದೆಹಾಲು
ವಿಷವಾಗಬಾರದಿತ್ತೆ?
ಎಂದು ಪರಿತಪಿಸುತ್ತಿರುವ
ಭಾರತ ಮಾತೇ ಹೇಳುತ್ತಿದ್ದಾಳೆ
“ಇಂತಹ ಮಕ್ಕಳನ್ನು
ಹೆರುವುದಕ್ಕೆ ಬದಲು
ನಾನು ಬಂಜೆಯಾಗಿದ್ದರೆ
ಎಷ್ಟೋ ಚೆನ್ನ” ಎಂದು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...