ಬಂಜೆಯಾಗಿದ್ದರೆ ಚೆನ್ನ

ಮಸೀದಿಗಳ ಉರುಳಿಸಿ
ಮಂದಿರಗಳ ಕಟ್ಟುವವರೇ
ಬಿದ್ದಿರುವ ಮನಗಳನ್ನೆಂತು
ಎತ್ತಿ ನಿಲ್ಲಿಸುವಿರಿ ಹೇಳಿ?
ಬಿದ್ದ ಗೋಡೆಗಳ ಮತ್ತೆ
ಎತ್ತಿ ನಿಲ್ಲಿಸಲೂ ಬಹುದು
ಎರಡು ಮನಗಳ ಮಧ್ಯ
ಎದ್ದ ಗೋಡೆಯನ್ನೆಂತು
ಬೀಳಿಸುವಿರಿ? ಹೇಳಿ.

ಕಂಡಿದ್ದೆವು ಹಿಂದೆ
ಚರಿತ್ರೆಯಲಿ ಕರಾಳ ದಿನ.
ಅಂದು ಹಿಂದೊಮ್ಮೆ
ಮಹಾತ್ಮ ಗಾಂಧಿಗೆ
ಗುಂಡಿಟ್ಟು ಕೊಂದ
ಈ ಚೆಡ್ಡಿ ವೀರರು,
ಇಂದು ಮಸೀದಿಯುರುಳಿಸಿ,
ಮುಖಕ್ಕೆ ಮಸಿ ಬಳಿದು
ಮತ್ತೊಂದು ಕಪ್ಪು ಚುಕ್ಕೆ
ಇಟ್ಟು ಹೋದವು ಚರಿತ್ರೆಗೆ.

ಡಿಸೆಂಬರ್ ಆರರಂದು
ಅಯೋಧ್ಯೆಯೆಡೆಗೆ
ಸಾಗರದಂತೆ ಹರಿದ
ಜನತೆಗೆ ಮತಿಗೆಡಿಸಿ,
ದಿಕ್ಕು ತಪ್ಪಿಸುವ ಧರ್ಮದ
ತುತ್ತೆಯನ್ನು ಕುಡಿಸಿ,
ಅವನತಿಯ ಶಿಖರವ
ಹತ್ತಿಸಿದವರೆ,
ಹೇಳಿ ನೀವು ನಿಜವಾದ
ಭಾರತ ಮಾತೆಯ ಮಕ್ಕಳೇ.

ಕರಸೇವಕರ ಕೈಯಲ್ಲಿ
ನಲುಗಿ ಹೋದ
ದೇವರು, ಧರ್ಮಗಳು –
ಮತ್ತೆಂದೂ ಮತಾಂಧರ
ಕೈಯಲ್ಲಿ ಸಿಕ್ಕಿಕೊಳ್ಳಲಾರೆನೆಂದು
ಪರಿತಪಿಸುತ್ತಿದ್ದರೆ-

ಭಾರತಾಂಬೆಯ ಕಣ್ಣುಗಳಲ್ಲಿ
ರಕ್ತದ ಕಣ್ಣೀರು-ಹರಿದು,
ಸಮತೆಯ ಎದೆಹಾಲು ಕುಡಿಸಿ,
ಪೊರೆದು ಪೋಷಿಸಿದ
ನನ್ನ ಮುಖಕ್ಕೇ
ಮಸಿ ಬಳಿದ ಇವರಿಗೆ
ನಾ ಕೊಟ್ಟ ಎದೆಹಾಲು
ವಿಷವಾಗಬಾರದಿತ್ತೆ?
ಎಂದು ಪರಿತಪಿಸುತ್ತಿರುವ
ಭಾರತ ಮಾತೇ ಹೇಳುತ್ತಿದ್ದಾಳೆ
“ಇಂತಹ ಮಕ್ಕಳನ್ನು
ಹೆರುವುದಕ್ಕೆ ಬದಲು
ನಾನು ಬಂಜೆಯಾಗಿದ್ದರೆ
ಎಷ್ಟೋ ಚೆನ್ನ” ಎಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಿ ಲಂಚವಿರುವಲ್ಲಿ ಸಾವಯವ ಮಂಚವೇರೀತೇ?
Next post ರೈಲು

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys