Home / ಕವನ / ಕವಿತೆ / ಬದುಕು ಮತ್ತು ರಾಜಕೀಯ

ಬದುಕು ಮತ್ತು ರಾಜಕೀಯ

ಕಾಳಚಕ್ರ ಉರುಳುತ್ತಿದೆ.
ಹಗಲು ಸರಿದು ಕರಾಳ
ರಾತ್ರಿಯಲ್ಲಿ ನಕ್ಷತ್ರಗಳ
ಕಣ್ಣುಮುಚ್ಚಾಲೆ.
ಆಕಾಶ ನೋಡುತ್ತ
ಅಳುತ್ತಿರುವ ನಾಯಿಗಳು
ದಟ್ಟ ದರಿದ್ರರ
ಕೊಂಪೆ ಗುಡಿಸಲುಗಳು
ಸಿಡಿದೇ ಕರೇ
ಕ್ಷೀಣ ಧ್ವನಿಯಲ್ಲಿ
ಗುಣುಗುಟ್ಟುತ್ತಿವೆ,

ಸಾಲದಿರುವ ಸಂಬಳ
ಏರುತ್ತಿರುವ ದರಗಳ ಕುರಿತು
ನಾವು ಕುಡಿಯುವ
ನೀರನ್ನು ಕೊಳಕಾಗಿಸುವ
ಬಿರ್‍ಲಾನ ಕುರಿತು
ಉಸಿರುಗಟ್ಟಿಸುವ
ವಿಷಗಾಳಿ ಬಿಡುತ್ತಿರುವ
ಕಾರ್ಖಾನೆಗಳ ಕುರಿತು
ನಾನು ಮಾತನಾಡಿದರೆ
ರಾಜಕೀಯವಾಗುತ್ತದಂತೆ.

ರಾಜಕೀಯ ನಿಗೂಢಗಳು
ಶುದ್ಧಗಾಳಿ, ನೀರು ಆಹಾರಗಳು
ಹಸಿರು ಬದುಕುಗಳನ್ನು
ನಮಗೆ ದೊರಕದಂತೆ ಮಾಡಿದ
ಕರಾಳ ಕೈಗಳು-
ಪಂಜಾಬಿನ ಕೊಲೆಗಳು,
ಕಾಶ್ಮೀರ ಕಣಿವೆಗಳಲ್ಲಿ
ಕೊಳೆಯುತ್ತಿರುವ ಹೆಣಗಳು
ಇರಾಕ್‌ನಲ್ಲಿ ಮಾಸಣ ಕಾಣದೇ
ಬಿದ್ದಿರುವ ರಾಶಿ ಹೆಣಗಳು
ಸಾಮ್ರಾಜ್ಯಶಾಹಿ ಪಿತೂರಿಗಳೂ
ವಾಶಿಂಗ್‌ಟನ್ನಿನ ಕ್ರೂರ ಕೈಗಳು.

ನನ್ನ ಆಳದಲ್ಲಿ ನಾನು
ಇಣುಕಿ ನೋಡಿದಾಗ –
ನಾನು ಸತ್ಯವಾಗಿದ್ದೆ.
ಆ ಕ್ರೂರ ಕೈಗಳನ್ನು ಕುಲಕದೇ
ಹೋರಾಟದ ದಾರಿ ಹುಡುಕಿಕೊಂಡಿದ್ದೆ.
ಅದಕ್ಕೀಗ ಸಾಮ್ರಾಜ್ಯಶಾಹಿ ಪಿತೂರಿಗಳು
ತುತ್ತೂರಿ ಊದುತ್ತಿವೆ.
ಬದುಕಿನ ಬಗ್ಗೆ ಮಾತನಾಡದಿರಿ,
ಇಲ್ಲದಿರೆ ಅದು
ರಾಜಕೀಯವಾಗುತ್ತದೆಂದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...