ಬದುಕು ಮತ್ತು ರಾಜಕೀಯ

ಕಾಳಚಕ್ರ ಉರುಳುತ್ತಿದೆ.
ಹಗಲು ಸರಿದು ಕರಾಳ
ರಾತ್ರಿಯಲ್ಲಿ ನಕ್ಷತ್ರಗಳ
ಕಣ್ಣುಮುಚ್ಚಾಲೆ.
ಆಕಾಶ ನೋಡುತ್ತ
ಅಳುತ್ತಿರುವ ನಾಯಿಗಳು
ದಟ್ಟ ದರಿದ್ರರ
ಕೊಂಪೆ ಗುಡಿಸಲುಗಳು
ಸಿಡಿದೇ ಕರೇ
ಕ್ಷೀಣ ಧ್ವನಿಯಲ್ಲಿ
ಗುಣುಗುಟ್ಟುತ್ತಿವೆ,

ಸಾಲದಿರುವ ಸಂಬಳ
ಏರುತ್ತಿರುವ ದರಗಳ ಕುರಿತು
ನಾವು ಕುಡಿಯುವ
ನೀರನ್ನು ಕೊಳಕಾಗಿಸುವ
ಬಿರ್‍ಲಾನ ಕುರಿತು
ಉಸಿರುಗಟ್ಟಿಸುವ
ವಿಷಗಾಳಿ ಬಿಡುತ್ತಿರುವ
ಕಾರ್ಖಾನೆಗಳ ಕುರಿತು
ನಾನು ಮಾತನಾಡಿದರೆ
ರಾಜಕೀಯವಾಗುತ್ತದಂತೆ.

ರಾಜಕೀಯ ನಿಗೂಢಗಳು
ಶುದ್ಧಗಾಳಿ, ನೀರು ಆಹಾರಗಳು
ಹಸಿರು ಬದುಕುಗಳನ್ನು
ನಮಗೆ ದೊರಕದಂತೆ ಮಾಡಿದ
ಕರಾಳ ಕೈಗಳು-
ಪಂಜಾಬಿನ ಕೊಲೆಗಳು,
ಕಾಶ್ಮೀರ ಕಣಿವೆಗಳಲ್ಲಿ
ಕೊಳೆಯುತ್ತಿರುವ ಹೆಣಗಳು
ಇರಾಕ್‌ನಲ್ಲಿ ಮಾಸಣ ಕಾಣದೇ
ಬಿದ್ದಿರುವ ರಾಶಿ ಹೆಣಗಳು
ಸಾಮ್ರಾಜ್ಯಶಾಹಿ ಪಿತೂರಿಗಳೂ
ವಾಶಿಂಗ್‌ಟನ್ನಿನ ಕ್ರೂರ ಕೈಗಳು.

ನನ್ನ ಆಳದಲ್ಲಿ ನಾನು
ಇಣುಕಿ ನೋಡಿದಾಗ –
ನಾನು ಸತ್ಯವಾಗಿದ್ದೆ.
ಆ ಕ್ರೂರ ಕೈಗಳನ್ನು ಕುಲಕದೇ
ಹೋರಾಟದ ದಾರಿ ಹುಡುಕಿಕೊಂಡಿದ್ದೆ.
ಅದಕ್ಕೀಗ ಸಾಮ್ರಾಜ್ಯಶಾಹಿ ಪಿತೂರಿಗಳು
ತುತ್ತೂರಿ ಊದುತ್ತಿವೆ.
ಬದುಕಿನ ಬಗ್ಗೆ ಮಾತನಾಡದಿರಿ,
ಇಲ್ಲದಿರೆ ಅದು
ರಾಜಕೀಯವಾಗುತ್ತದೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದ್ದದೀ ಜೀವನಕೆ ಒಂದು ಉಸಿರು ಸಾಕಾ?
Next post ಸ್ಲೋಗನ್‌ಗಳು

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…