Home / ಕವನ / ಕವಿತೆ / ಬದುಕು ಮತ್ತು ರಾಜಕೀಯ

ಬದುಕು ಮತ್ತು ರಾಜಕೀಯ

ಕಾಳಚಕ್ರ ಉರುಳುತ್ತಿದೆ.
ಹಗಲು ಸರಿದು ಕರಾಳ
ರಾತ್ರಿಯಲ್ಲಿ ನಕ್ಷತ್ರಗಳ
ಕಣ್ಣುಮುಚ್ಚಾಲೆ.
ಆಕಾಶ ನೋಡುತ್ತ
ಅಳುತ್ತಿರುವ ನಾಯಿಗಳು
ದಟ್ಟ ದರಿದ್ರರ
ಕೊಂಪೆ ಗುಡಿಸಲುಗಳು
ಸಿಡಿದೇ ಕರೇ
ಕ್ಷೀಣ ಧ್ವನಿಯಲ್ಲಿ
ಗುಣುಗುಟ್ಟುತ್ತಿವೆ,

ಸಾಲದಿರುವ ಸಂಬಳ
ಏರುತ್ತಿರುವ ದರಗಳ ಕುರಿತು
ನಾವು ಕುಡಿಯುವ
ನೀರನ್ನು ಕೊಳಕಾಗಿಸುವ
ಬಿರ್‍ಲಾನ ಕುರಿತು
ಉಸಿರುಗಟ್ಟಿಸುವ
ವಿಷಗಾಳಿ ಬಿಡುತ್ತಿರುವ
ಕಾರ್ಖಾನೆಗಳ ಕುರಿತು
ನಾನು ಮಾತನಾಡಿದರೆ
ರಾಜಕೀಯವಾಗುತ್ತದಂತೆ.

ರಾಜಕೀಯ ನಿಗೂಢಗಳು
ಶುದ್ಧಗಾಳಿ, ನೀರು ಆಹಾರಗಳು
ಹಸಿರು ಬದುಕುಗಳನ್ನು
ನಮಗೆ ದೊರಕದಂತೆ ಮಾಡಿದ
ಕರಾಳ ಕೈಗಳು-
ಪಂಜಾಬಿನ ಕೊಲೆಗಳು,
ಕಾಶ್ಮೀರ ಕಣಿವೆಗಳಲ್ಲಿ
ಕೊಳೆಯುತ್ತಿರುವ ಹೆಣಗಳು
ಇರಾಕ್‌ನಲ್ಲಿ ಮಾಸಣ ಕಾಣದೇ
ಬಿದ್ದಿರುವ ರಾಶಿ ಹೆಣಗಳು
ಸಾಮ್ರಾಜ್ಯಶಾಹಿ ಪಿತೂರಿಗಳೂ
ವಾಶಿಂಗ್‌ಟನ್ನಿನ ಕ್ರೂರ ಕೈಗಳು.

ನನ್ನ ಆಳದಲ್ಲಿ ನಾನು
ಇಣುಕಿ ನೋಡಿದಾಗ –
ನಾನು ಸತ್ಯವಾಗಿದ್ದೆ.
ಆ ಕ್ರೂರ ಕೈಗಳನ್ನು ಕುಲಕದೇ
ಹೋರಾಟದ ದಾರಿ ಹುಡುಕಿಕೊಂಡಿದ್ದೆ.
ಅದಕ್ಕೀಗ ಸಾಮ್ರಾಜ್ಯಶಾಹಿ ಪಿತೂರಿಗಳು
ತುತ್ತೂರಿ ಊದುತ್ತಿವೆ.
ಬದುಕಿನ ಬಗ್ಗೆ ಮಾತನಾಡದಿರಿ,
ಇಲ್ಲದಿರೆ ಅದು
ರಾಜಕೀಯವಾಗುತ್ತದೆಂದು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...