ರೂಪಕನ್ವರ

ಭಾರತ ಮಾತೆಯೇ
ನಿನ್ನ ಕರುಳ ಕುಡಿಗಳು
ನಿನ್ನದೇ ಮಾಂಸ
ಹಂಚಿಕೊಂಡಿರುವ
ತುಣುಕುಗಳನು
ಬೆಂಕಿಗೆ ದೂಡಿ,
ಸತಿಯಾಗಿಸುವದ ಕಂಡು
ಸುಮ್ಮನೇಕಿರುವೆ?

ಪತಿಸತ್ತರೆ ಸತಿ
ಚಿತೆಯೇರಬೇಕು
ಬದುಕಿರುವಾಗಲೇ
ಬದುಕನ್ನು ಜಿವುಟಿ
ಕರಕಾಗಿಸಿದ ಗಂಡು
ಸತ್ತ ಮೇಲೂ ಅವಳ
ಬೆನ್ನು ಬಿಡಲಿಲ್ಲ
ಬದುಕಗೊಡಲಿಲ್ಲ ಮಾತೆ?

ನಿನ್ನ ಸತಿಯಾಗಿಸಿ,
ಚಿತೆಯೇರಿಸಿ,
ದೇವಿಯಪಟ್ಟ ಕಟ್ಟಿ
ನಿನ್ನ ಸಮಾಧಿಯಮೇಲೆ
ಹೆಣಭಾರದ ಕಲ್ಲನ್ನಿಟ್ಟು
ಪೂಜೆಗೈವರು ಇವರು
ಹೊಟ್ಟೆ ಹೊರೆವರಿವರು.

ಪುರಿಯ ಜಗದ್ಗುರು
ಸತಿ ಧರ್ಮ – ಶಾಸ್ತ್ರಗಳ
ಮರೆಯಲ್ಲಿ
ಕನ್ವರಳ ಕತ್ತು ಹಿಸುಕಿದರು.
ಪತಿಗೆ ಧರ್ಮವಿಲ್ಲ –
ಸತಿಗೆ ಚಿತೆಯೇರಲು
ಬೋಧಿಸುವ ಇವರನು
ಸುಟ್ಟು ಬಿಡು ಕನ್ವರ.

ನಿನ್ನ ಕೊಂದವರ ಕತ್ತುಗಳಿಗೆ
ಕರಗಸವಾಗಿ ಕೊರೆಯುತ್ತ
ನಿನ್ನ ಕನಸುಗಳನು
ವಾಸ್ತವಕ್ಕಿಳಿಸಲು
ಮತ್ತೇ ಹುಟ್ಟಿ ಬಾ ಕನ್ವರ,
ಹೋರಾಟದ ಸಂಕೇತವಾಗಿ
ನಿಲ್ಲು ಬಾ ಕನ್ವರ.

ಆಗ ಮುಂಬರು ಪೀಳಿಗೆ
ಮಾಸ್ತಿಗಲ್ಲುಗಳ ಅರ್ಥ
ಹುಡುಕಿ ನೋಡುತ್ತಾರೆ,
ಧರ್ಮಲಂಡರ ಬಂಡವಾಳ
ಬೀದಿಗೆಳೆಯುತ್ತಾರೆ.

ನಿನ್ನ ಬದುಕನ್ನೇ ನುಂಗಿದ
ಅವರ ಧರ್ಮ ಶಾಸ್ತ್ರಗಳಿಗೆ
ಬೆಂಕಿಯಿಡುತ್ತಾರೆ.
ವಿಜಯದ ಕಹಳೆ ಊದುತ್ತಾರೆ.
ಏಕೆಂದರೆ ಅವರೀಗ
ಮನುಷ್ಯರಾಗಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಹುಡುಗ
Next post ಮೈಥಿಲೀ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…