Home / ಕವನ / ಕವಿತೆ / ರೂಪಕನ್ವರ

ರೂಪಕನ್ವರ

ಭಾರತ ಮಾತೆಯೇ
ನಿನ್ನ ಕರುಳ ಕುಡಿಗಳು
ನಿನ್ನದೇ ಮಾಂಸ
ಹಂಚಿಕೊಂಡಿರುವ
ತುಣುಕುಗಳನು
ಬೆಂಕಿಗೆ ದೂಡಿ,
ಸತಿಯಾಗಿಸುವದ ಕಂಡು
ಸುಮ್ಮನೇಕಿರುವೆ?

ಪತಿಸತ್ತರೆ ಸತಿ
ಚಿತೆಯೇರಬೇಕು
ಬದುಕಿರುವಾಗಲೇ
ಬದುಕನ್ನು ಜಿವುಟಿ
ಕರಕಾಗಿಸಿದ ಗಂಡು
ಸತ್ತ ಮೇಲೂ ಅವಳ
ಬೆನ್ನು ಬಿಡಲಿಲ್ಲ
ಬದುಕಗೊಡಲಿಲ್ಲ ಮಾತೆ?

ನಿನ್ನ ಸತಿಯಾಗಿಸಿ,
ಚಿತೆಯೇರಿಸಿ,
ದೇವಿಯಪಟ್ಟ ಕಟ್ಟಿ
ನಿನ್ನ ಸಮಾಧಿಯಮೇಲೆ
ಹೆಣಭಾರದ ಕಲ್ಲನ್ನಿಟ್ಟು
ಪೂಜೆಗೈವರು ಇವರು
ಹೊಟ್ಟೆ ಹೊರೆವರಿವರು.

ಪುರಿಯ ಜಗದ್ಗುರು
ಸತಿ ಧರ್ಮ – ಶಾಸ್ತ್ರಗಳ
ಮರೆಯಲ್ಲಿ
ಕನ್ವರಳ ಕತ್ತು ಹಿಸುಕಿದರು.
ಪತಿಗೆ ಧರ್ಮವಿಲ್ಲ –
ಸತಿಗೆ ಚಿತೆಯೇರಲು
ಬೋಧಿಸುವ ಇವರನು
ಸುಟ್ಟು ಬಿಡು ಕನ್ವರ.

ನಿನ್ನ ಕೊಂದವರ ಕತ್ತುಗಳಿಗೆ
ಕರಗಸವಾಗಿ ಕೊರೆಯುತ್ತ
ನಿನ್ನ ಕನಸುಗಳನು
ವಾಸ್ತವಕ್ಕಿಳಿಸಲು
ಮತ್ತೇ ಹುಟ್ಟಿ ಬಾ ಕನ್ವರ,
ಹೋರಾಟದ ಸಂಕೇತವಾಗಿ
ನಿಲ್ಲು ಬಾ ಕನ್ವರ.

ಆಗ ಮುಂಬರು ಪೀಳಿಗೆ
ಮಾಸ್ತಿಗಲ್ಲುಗಳ ಅರ್ಥ
ಹುಡುಕಿ ನೋಡುತ್ತಾರೆ,
ಧರ್ಮಲಂಡರ ಬಂಡವಾಳ
ಬೀದಿಗೆಳೆಯುತ್ತಾರೆ.

ನಿನ್ನ ಬದುಕನ್ನೇ ನುಂಗಿದ
ಅವರ ಧರ್ಮ ಶಾಸ್ತ್ರಗಳಿಗೆ
ಬೆಂಕಿಯಿಡುತ್ತಾರೆ.
ವಿಜಯದ ಕಹಳೆ ಊದುತ್ತಾರೆ.
ಏಕೆಂದರೆ ಅವರೀಗ
ಮನುಷ್ಯರಾಗಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...