ರೂಪಕನ್ವರ

ಭಾರತ ಮಾತೆಯೇ
ನಿನ್ನ ಕರುಳ ಕುಡಿಗಳು
ನಿನ್ನದೇ ಮಾಂಸ
ಹಂಚಿಕೊಂಡಿರುವ
ತುಣುಕುಗಳನು
ಬೆಂಕಿಗೆ ದೂಡಿ,
ಸತಿಯಾಗಿಸುವದ ಕಂಡು
ಸುಮ್ಮನೇಕಿರುವೆ?

ಪತಿಸತ್ತರೆ ಸತಿ
ಚಿತೆಯೇರಬೇಕು
ಬದುಕಿರುವಾಗಲೇ
ಬದುಕನ್ನು ಜಿವುಟಿ
ಕರಕಾಗಿಸಿದ ಗಂಡು
ಸತ್ತ ಮೇಲೂ ಅವಳ
ಬೆನ್ನು ಬಿಡಲಿಲ್ಲ
ಬದುಕಗೊಡಲಿಲ್ಲ ಮಾತೆ?

ನಿನ್ನ ಸತಿಯಾಗಿಸಿ,
ಚಿತೆಯೇರಿಸಿ,
ದೇವಿಯಪಟ್ಟ ಕಟ್ಟಿ
ನಿನ್ನ ಸಮಾಧಿಯಮೇಲೆ
ಹೆಣಭಾರದ ಕಲ್ಲನ್ನಿಟ್ಟು
ಪೂಜೆಗೈವರು ಇವರು
ಹೊಟ್ಟೆ ಹೊರೆವರಿವರು.

ಪುರಿಯ ಜಗದ್ಗುರು
ಸತಿ ಧರ್ಮ – ಶಾಸ್ತ್ರಗಳ
ಮರೆಯಲ್ಲಿ
ಕನ್ವರಳ ಕತ್ತು ಹಿಸುಕಿದರು.
ಪತಿಗೆ ಧರ್ಮವಿಲ್ಲ –
ಸತಿಗೆ ಚಿತೆಯೇರಲು
ಬೋಧಿಸುವ ಇವರನು
ಸುಟ್ಟು ಬಿಡು ಕನ್ವರ.

ನಿನ್ನ ಕೊಂದವರ ಕತ್ತುಗಳಿಗೆ
ಕರಗಸವಾಗಿ ಕೊರೆಯುತ್ತ
ನಿನ್ನ ಕನಸುಗಳನು
ವಾಸ್ತವಕ್ಕಿಳಿಸಲು
ಮತ್ತೇ ಹುಟ್ಟಿ ಬಾ ಕನ್ವರ,
ಹೋರಾಟದ ಸಂಕೇತವಾಗಿ
ನಿಲ್ಲು ಬಾ ಕನ್ವರ.

ಆಗ ಮುಂಬರು ಪೀಳಿಗೆ
ಮಾಸ್ತಿಗಲ್ಲುಗಳ ಅರ್ಥ
ಹುಡುಕಿ ನೋಡುತ್ತಾರೆ,
ಧರ್ಮಲಂಡರ ಬಂಡವಾಳ
ಬೀದಿಗೆಳೆಯುತ್ತಾರೆ.

ನಿನ್ನ ಬದುಕನ್ನೇ ನುಂಗಿದ
ಅವರ ಧರ್ಮ ಶಾಸ್ತ್ರಗಳಿಗೆ
ಬೆಂಕಿಯಿಡುತ್ತಾರೆ.
ವಿಜಯದ ಕಹಳೆ ಊದುತ್ತಾರೆ.
ಏಕೆಂದರೆ ಅವರೀಗ
ಮನುಷ್ಯರಾಗಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಹುಡುಗ
Next post ಮೈಥಿಲೀ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…