ಬೆಳ್ಳಿ ಗಡ್ಡದ ಸಾಮಿ

ಬೆಳ್ಳಿ ಗಡ್ಡದ ಸಾಮಿ ಬಸವ ಬೆಳಗಿನ ಯೋಗಿ
ವಿಜಯ ಮಾಂತನೆ ಬಾರ ಹೂವ ತೂರ
ತೆಂಗು ಬಾಳಿಯ ಶರಣಾ ಬಿಳಿಯ ಜೋಳದ ಕರುಣಾ
ವಿಜಯ ಮಾಂತನೆ ಬಾರ ಲಿಂಗ ತೋರ

ಬಸವ ವಚನದ ಗಂಟು ಚೆನ್ನಾಗ ಕಟಗೊಂಡು
ಮಾಂತಮ್ಮ ಜತಿಗೂಡಿ ಬಂದ ಸಾಮಿ
ಶಿವಯೋಗ ಮಂದಿರದ ಠಾವು ತೋರಿದ ತ್ಯಾಗಿ
ಆರು ಚಕ್ರದ ದಾರಿ ಬಲ್ಲ ಯೋಗಿ

ದುಡ್ಡು ದಮ್ಮಡಿ ಚಿನ್ನ ಹಂಚಿ ಬಿಲ್ಲಿಯ ಗೈದಿ
ಶರಣಽರ ಸೂಳ್ನೂಡಿ ಕೋಟಿ ಅಂದಿ
ಕೂಡಽಲ ಸಂಗಮದ ಬೆಳುವ ಭೂಮಿಯ ತುಂಬ
ಚಿತ್ತರಗಿ ಚಿಜ್ಯೋತಿ ಬೆಳಕು ತಂದಿ

ಇಳಕಲ್ಲು ಕಡಕಲ್ಲು ಹುನಗುಂದ ಲಿಂಗ್ಸೂರು
ಸರುವಕ್ಕ ಶಿವಲಿಂಗ ತುಂಬಿ ಬಂದಿ
ಭುವನಕ್ಕ ಬೆಳಕಾದಿ ಮನುಕುಲಕ ಹೂವಾದಿ
ಬಸವ ಧರ್ಮದ ಯುಗದ ಜ್ಯೋತಿಯಾದಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೫

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…