ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ

ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ
ವಡಪೇಳ ಈರಣ್ಣ ವಡಪೇಳ ||ಪಲ್ಲ||

ಗುಗ್ಗೂಳ ಎಂದ್ಹೇಳ ಶಸ್ತ್ರಾವು ಎಂದ್ಹೇಳ
ಗರತೇರ ಮನಿಮನಿಗೆ ಕರಿತೇನ
ಹೊಸ್ತಿಲಕ ಒಂದ್ಹೆಣ್ಣ ಮುತ್ತೈದಿ ಹೇಳ್ತೇನ
ನಿನಗುಡಿಗೆ ಬಜಂತ್ರಿ ತರತೇನ ||೧||

ಜರತಾರಿ ನಾರ್‍ಯಾರ ಮುರತಾಪ ಮಾಡ್ತೇನ
ತುರುಬೀಗಿ ತುಂಬೀಯ ಹೆಣಿತೇನ
ಬೀಗ್ತೇರ ಕೊಡಪಾನ ಎದೆತುಂಬಿ ಹೊರತೇನ
ದಾರ್‍ಯಾಗ ಡಾಳಿಂಬ್ರ ಬೆಳಿತೇನ ||೨||

ಸುತ್ತೂರು ಸರದಾರ ಹತ್ತೂರು ಗಮ್ಮಾರ
ತಲವಾರ ತಾನೆಂದ ತರತಾನ
ಸುರಪೂರು ಭರಪೂರು ಪುರಿಹೆಣ್ಣು ಪುರುಪೂರು
ಪಲ್ಲಂಗ ಪಂಚಮಿ ಮೆರಿತಾನ ||೩||

ನಡದಾಗ ಗುಡಿಗ್ಯಾನ ಹುಲ್ಲುಲಿಗೊ ಹುಲಿಕಾಮ
ತೊಡಿಯಾಗ ತಂಬೂರಿ ಮಿಡಿದೈತೆ
ಉಟಸೀರಿ ಗಂಟಾಗ ಕ್ಯಾಕೀಯ ಹಾಕ್ಯಾನ
ತುರುಬೀನ ಗಿಣಿಯೂ ಹಾಡೈತೆ ||೪||

ತಡದರ ಸಾಯ್ತೇನಿ ತಡಿಯಾಕ ಹೊತ್ತಿಲ್ಲ
ನೆಲ್ಲಡಕಿ ನಿಂಬೀಯ ತಾತಾತಾ
ಗೊಲ್ಲಡಕಿ ಗೊಂಬಿನಾ ನಾಚೀಗಿ ಬಿಟ್ಟೇನಿ
ಬಾಬಾರ ಬರದಿದ್ರ ಹಾಹಾಹಾ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೯

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…