ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ

ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ
ವಡಪೇಳ ಈರಣ್ಣ ವಡಪೇಳ ||ಪಲ್ಲ||

ಗುಗ್ಗೂಳ ಎಂದ್ಹೇಳ ಶಸ್ತ್ರಾವು ಎಂದ್ಹೇಳ
ಗರತೇರ ಮನಿಮನಿಗೆ ಕರಿತೇನ
ಹೊಸ್ತಿಲಕ ಒಂದ್ಹೆಣ್ಣ ಮುತ್ತೈದಿ ಹೇಳ್ತೇನ
ನಿನಗುಡಿಗೆ ಬಜಂತ್ರಿ ತರತೇನ ||೧||

ಜರತಾರಿ ನಾರ್‍ಯಾರ ಮುರತಾಪ ಮಾಡ್ತೇನ
ತುರುಬೀಗಿ ತುಂಬೀಯ ಹೆಣಿತೇನ
ಬೀಗ್ತೇರ ಕೊಡಪಾನ ಎದೆತುಂಬಿ ಹೊರತೇನ
ದಾರ್‍ಯಾಗ ಡಾಳಿಂಬ್ರ ಬೆಳಿತೇನ ||೨||

ಸುತ್ತೂರು ಸರದಾರ ಹತ್ತೂರು ಗಮ್ಮಾರ
ತಲವಾರ ತಾನೆಂದ ತರತಾನ
ಸುರಪೂರು ಭರಪೂರು ಪುರಿಹೆಣ್ಣು ಪುರುಪೂರು
ಪಲ್ಲಂಗ ಪಂಚಮಿ ಮೆರಿತಾನ ||೩||

ನಡದಾಗ ಗುಡಿಗ್ಯಾನ ಹುಲ್ಲುಲಿಗೊ ಹುಲಿಕಾಮ
ತೊಡಿಯಾಗ ತಂಬೂರಿ ಮಿಡಿದೈತೆ
ಉಟಸೀರಿ ಗಂಟಾಗ ಕ್ಯಾಕೀಯ ಹಾಕ್ಯಾನ
ತುರುಬೀನ ಗಿಣಿಯೂ ಹಾಡೈತೆ ||೪||

ತಡದರ ಸಾಯ್ತೇನಿ ತಡಿಯಾಕ ಹೊತ್ತಿಲ್ಲ
ನೆಲ್ಲಡಕಿ ನಿಂಬೀಯ ತಾತಾತಾ
ಗೊಲ್ಲಡಕಿ ಗೊಂಬಿನಾ ನಾಚೀಗಿ ಬಿಟ್ಟೇನಿ
ಬಾಬಾರ ಬರದಿದ್ರ ಹಾಹಾಹಾ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೯

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…