Home / ಕವನ / ಕವಿತೆ / ಹಟಮೆಂಟ್ ಜೀವನ

ಹಟಮೆಂಟ್ ಜೀವನ

ಕೋಟಿ ಜನ ಒರಲುವರು
ನರಳುವರು, ತೆರಳುವರು
ಅವರ ಬದುಕಿನ ತಾಣ
ಅರೆಸತ್ತು ಉಳಿದ ಪ್ರಾಣ
ನಮ್ಮ ಭಾಷೆಯಲಿ ಹಟಮೆಂಟು
ನೆಮ್ಮಿರಿ, ಬಿಡಿರಿ ಸತ್ಯ ಅಲ್ಲುಂಟು….
ಹುಟ್ಟು-ಸಾವು
ಯೌವನದ ಕಾವು
ಮುದಿಯಾದ ನೋವು
ಗಳ ಸೆಳತ….ಅಲೆತಕದು ಠಾವು…..
ಅಲ್ಲಿಹುದು ಜನನ-ಮರಣದ ನಂಟು
ನಮ್ಮ ಭಾಷೆಯಲದು ಹಟಮೆಂಟು
* * * *

ಒಂದು ದಿನ ಬಂತು ಮಳೆ
ಅದರ ಹಿಂದೆ ಹೊಳೆ
ಮಳೆ ಒಳಗು-ಹೊರಗೂ
ಹೊಳೆಗೆಲ್ಲ ಕೊಚ್ಚಿ ಹೋಗುವವರೆಗೂ
ಗುಡುಗು ಮಿಂಚಿನ ಸೆಳೆತ
ಗಾಳಿ-ಗೋಳಿನ ಹೊಡೆತ
ಬಿದಿರು ಮಳೆ ದೀಪದಲೆ ಎಲ್ಲುಂಟು?
ನಮ್ಮ ಭಾಷೆಯಲದು ಹಟಮೆಂಟು
* * * *

ಚಳಿ ಬಂತು…. ಚಳಿ
ಇಲ್ಲ ಕಂಬಳಿ
ಒಲೆ ಇಹುದು ಬಳಿ
ಅದಕ್ಕಿಲ್ಲ ಎಲಿ
ನಡುಕ……ಕಂಪನ
ಹೃದಯ ಸ್ಥಂಬನ
ಎಳೆಜೀವ ಒಣ…….ಒಣ…
ಬಾಳೆಲ್ಲ ಬಣ ಬಣ

ಚಳಿಗೆ ಸಾವಿನ ಗಂಟು
ಮನೆಯಲ್ಲ ಅದು ಹಟಮೆಂಟು!

ಬಿಸಿಲು….ಬೆವರು
ಬೇಗೆ…ದಗೆ, ಹೊಗೆ.
ಕಾದು ಉರಿವ ನೆಲ……ಇಲ್ಲ ನೀರು
ಇದರೊಳಗು ಬಿಸಿಯುಸಿರು
ಬಿಡುವ ಬಗೆ!

ಪತ್ರದ ಛತ್ರ….
ಬರಿ ಮೈ…..ಇಲ್ಲ ವಸ್ತ್ರ
ಹಾಸಿಗೆ ನೆಲ, ಹೊದಿಕೆ ಇಬ್ಬನಿ ಜಲ
ಬಡತನ ಅವರ ಕೊಲ್ಲುವ ಅಸ್ತ್ರ

ಅನ್ನ ಎನುತ ಹಲುಬುವರು
ಬಡಕಲು ಕಾಯ
ಇರುವನಕ ಬದುಕುವ ಧ್ಯೇಯ
ಬಲವಿಲ್ಲ ಕೈಕಾಲು, ಮೈಗೆ
ನಡೆದಂತೆ ದಾರಿಯಲಿ ಹೊಯ್ಗೆ….

ಇದರೊಳಗು ನೆಲನಮ್ಮ
ಸಿಲುಕಿಹುದು ಹುಲಿಯ ಬಾಯ್ಗೆ
ಮನವಿಡಿ, ತನುಕೊಡಿ, ರಕ್ತ ನೀಡಿ
ರಕ್ಷಣೆಯ ಹೊರೆ ನಿಮ್ಮ ಕೈಗೆ

ಎಂದಿಂತು ಸ್ವರ ಎತ್ತಿ, ಕರ ಎತ್ತಿ
ಅರಚುವರು ಶ್ವೇತಮತಿಗಳು……ನಾಯಕರು

ಕಾಲ ಓಟಿನ ಬಂತು
ಕಾರು ಇತ್ತಲೂ ಬಂತು

“ನಿಮ್ಮ ಹಿತ ನಮ್ಮ ಮತ
ನಿಮಗೆಂದೆ, ನಿಮ್ಮ ಸುಖಕೆಂದೆ
ಹಿಡಿದಿಹೆವು ಇಂದು ವ್ರತ
ಇರಲೇಳಿ ನಮಗೊಂದು ನಿಮ್ಮ ಮತ…..

ಓಟು ಮುಗಿಯಲು
ವ್ರತವೂ ಮುಗಿವುದು
ಅವರಲ್ಲೆ, ಅವರು ವ್ಯರ್ಥ
ಪುಸಿವರು…ಅದಕಿಲ್ಲ ಮಿತ

ಇದು ವಿಧಿಯ ಕಾಂಪ್ಲಿಮೆಂಟು
ಮನೆಯಲ್ಲ ಅದು ಹಟಮೆಂಟು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...