ಹಟಮೆಂಟ್ ಜೀವನ

ಕೋಟಿ ಜನ ಒರಲುವರು
ನರಳುವರು, ತೆರಳುವರು
ಅವರ ಬದುಕಿನ ತಾಣ
ಅರೆಸತ್ತು ಉಳಿದ ಪ್ರಾಣ
ನಮ್ಮ ಭಾಷೆಯಲಿ ಹಟಮೆಂಟು
ನೆಮ್ಮಿರಿ, ಬಿಡಿರಿ ಸತ್ಯ ಅಲ್ಲುಂಟು….
ಹುಟ್ಟು-ಸಾವು
ಯೌವನದ ಕಾವು
ಮುದಿಯಾದ ನೋವು
ಗಳ ಸೆಳತ….ಅಲೆತಕದು ಠಾವು…..
ಅಲ್ಲಿಹುದು ಜನನ-ಮರಣದ ನಂಟು
ನಮ್ಮ ಭಾಷೆಯಲದು ಹಟಮೆಂಟು
* * * *

ಒಂದು ದಿನ ಬಂತು ಮಳೆ
ಅದರ ಹಿಂದೆ ಹೊಳೆ
ಮಳೆ ಒಳಗು-ಹೊರಗೂ
ಹೊಳೆಗೆಲ್ಲ ಕೊಚ್ಚಿ ಹೋಗುವವರೆಗೂ
ಗುಡುಗು ಮಿಂಚಿನ ಸೆಳೆತ
ಗಾಳಿ-ಗೋಳಿನ ಹೊಡೆತ
ಬಿದಿರು ಮಳೆ ದೀಪದಲೆ ಎಲ್ಲುಂಟು?
ನಮ್ಮ ಭಾಷೆಯಲದು ಹಟಮೆಂಟು
* * * *

ಚಳಿ ಬಂತು…. ಚಳಿ
ಇಲ್ಲ ಕಂಬಳಿ
ಒಲೆ ಇಹುದು ಬಳಿ
ಅದಕ್ಕಿಲ್ಲ ಎಲಿ
ನಡುಕ……ಕಂಪನ
ಹೃದಯ ಸ್ಥಂಬನ
ಎಳೆಜೀವ ಒಣ…….ಒಣ…
ಬಾಳೆಲ್ಲ ಬಣ ಬಣ

ಚಳಿಗೆ ಸಾವಿನ ಗಂಟು
ಮನೆಯಲ್ಲ ಅದು ಹಟಮೆಂಟು!

ಬಿಸಿಲು….ಬೆವರು
ಬೇಗೆ…ದಗೆ, ಹೊಗೆ.
ಕಾದು ಉರಿವ ನೆಲ……ಇಲ್ಲ ನೀರು
ಇದರೊಳಗು ಬಿಸಿಯುಸಿರು
ಬಿಡುವ ಬಗೆ!

ಪತ್ರದ ಛತ್ರ….
ಬರಿ ಮೈ…..ಇಲ್ಲ ವಸ್ತ್ರ
ಹಾಸಿಗೆ ನೆಲ, ಹೊದಿಕೆ ಇಬ್ಬನಿ ಜಲ
ಬಡತನ ಅವರ ಕೊಲ್ಲುವ ಅಸ್ತ್ರ

ಅನ್ನ ಎನುತ ಹಲುಬುವರು
ಬಡಕಲು ಕಾಯ
ಇರುವನಕ ಬದುಕುವ ಧ್ಯೇಯ
ಬಲವಿಲ್ಲ ಕೈಕಾಲು, ಮೈಗೆ
ನಡೆದಂತೆ ದಾರಿಯಲಿ ಹೊಯ್ಗೆ….

ಇದರೊಳಗು ನೆಲನಮ್ಮ
ಸಿಲುಕಿಹುದು ಹುಲಿಯ ಬಾಯ್ಗೆ
ಮನವಿಡಿ, ತನುಕೊಡಿ, ರಕ್ತ ನೀಡಿ
ರಕ್ಷಣೆಯ ಹೊರೆ ನಿಮ್ಮ ಕೈಗೆ

ಎಂದಿಂತು ಸ್ವರ ಎತ್ತಿ, ಕರ ಎತ್ತಿ
ಅರಚುವರು ಶ್ವೇತಮತಿಗಳು……ನಾಯಕರು

ಕಾಲ ಓಟಿನ ಬಂತು
ಕಾರು ಇತ್ತಲೂ ಬಂತು

“ನಿಮ್ಮ ಹಿತ ನಮ್ಮ ಮತ
ನಿಮಗೆಂದೆ, ನಿಮ್ಮ ಸುಖಕೆಂದೆ
ಹಿಡಿದಿಹೆವು ಇಂದು ವ್ರತ
ಇರಲೇಳಿ ನಮಗೊಂದು ನಿಮ್ಮ ಮತ…..

ಓಟು ಮುಗಿಯಲು
ವ್ರತವೂ ಮುಗಿವುದು
ಅವರಲ್ಲೆ, ಅವರು ವ್ಯರ್ಥ
ಪುಸಿವರು…ಅದಕಿಲ್ಲ ಮಿತ

ಇದು ವಿಧಿಯ ಕಾಂಪ್ಲಿಮೆಂಟು
ಮನೆಯಲ್ಲ ಅದು ಹಟಮೆಂಟು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭವ್ಯ ಭಾರತ ಭೂಮಿ ನಮ್ಮದು
Next post ಜಾರಿದ ದಾರಿಯನರಿಯದೆ ಭಾರಿ ಹುಡುಕಿದೊಡೇನು?

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys