ನಾನು ಇನ್ನೊಮ್ಮೆ ಮರಳಿ ಬರುವಾಗ
ಬದುಕಿನ ಯಾವದಾದರೂ ಒಂದು ತಿರುವಿನಲ್ಲಿ
ಸತ್ಯವತಿಯಾಗಿ ಸತಿಯಾಗಿ
ನೀನು ಖಂಡಿತ ನನಗೆ ಸಿಕ್ಕುತ್ತಿ
ಹಳೆ ಪರಿಚಯ ಉಕ್ಕಿ ಬಂದು
ಮನದಲ್ಲಿ ಬಿಕ್ಕುತ್ತಿ
ಆಗ ನಿನ್ನ ವದನತುಂಬ
ವಿರಹದ ನೋವಿನ ಗೆರೆಗಳನ್ನು
ಬಿಸಿಯುಸಿರಿನಲ್ಲಿ
ಪಾಪಪ್ರಜ್ಞೆಯ ಬರೆಗಳನ್ನು
ನೋಡುವ ಇಚ್ಛೆ ನನಗಿರದು
ಅವೆಲ್ಲ ಹಿಂದೆ ನಡೆದ ಅಪರಾಧಗಳು
ಪ್ರೀತಿ-ನೀತಿಯಿರದ
ದಾಹ-ಮೋಹದ ಮಿಲನದಿಂದಾದ
ಪ್ರಮಾದಗಳು.
ಅವುಗಳಲ್ಲಿ ನಂಬಿಕೆ ನಿನಗೂ ಇರದು.
ಬಯಸಲಿಲ್ಲವೆ ನೀನು ರಾಣಿಯ ಪಟ್ಟ
ಹೊರಿಸಲಿಲ್ಲವೆ ಪರಿಪರಿಯ ಆಣೆಗಳ ಬೆಟ್ಟ
‘ಬೇಡುವುಡೆ ನೀವೆನ್ನ ಅಯ್ಯನಂ ಬೇಡಿ’ರೆಂದು
ನಾಚಿ ನನಗೆ ಹುಚ್ಚು ಹಿಡಿಸಲಿಲ್ಲವೆ,
ಆಗಲೆ ತಿಳಿಯಬೇಕಿತ್ತು
ನಿನ್ನಂತರಂಗದ ಹೋರೆಯನು
ಕಾಮ-ಪ್ರೇಮದ ಮೇರೆಯನು
ಗಂಡು ಎಂದೆಂದೂ ಹೆಣ್ಣಿಗೆ ಸೋತಿದ್ದಾನೆ
ಅಂತ-ದುರಂತಕ್ಕೆ ಬಲಿಯಾಗಿದ್ದಾನೆ
ಅದಕೆಂದೆ ನುಡಿವೆ
ಸಿಕ್ಕಿದರೆ ನೀನು ‘ಹಲೋ’ ಎಂದು ತೆರಳು
ತಡೆಯದಿರು, ನುಡಿಯದಿರು
ಮತ್ತೊಮ್ಮೆ ಕನ್ನೆಯಾಗಿ
ನನ್ನೆದುರು ಸುಳಿಯದಿರು
ನಾನು ಮತ್ತೊಮ್ಮೆ ಮಂಕಾಗಿ
ಮುಂದಿನ ಭಾರತಕ್ಕೆ ಕಾರಣವಾಗಲಾರೆ.
*****
Related Post
ಸಣ್ಣ ಕತೆ
-
ತನ್ನೊಳಗಣ ಕಿಚ್ಚು
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…
-
ರಾಧೆಯ ಸ್ವಗತ
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
-
ಮಂಜುಳ ಗಾನ
ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…