Home / ಕವನ / ಕವಿತೆ / ಶಂತನು ಮರಳಿ ಬಂದಾಗ

ಶಂತನು ಮರಳಿ ಬಂದಾಗ

ನಾನು ಇನ್ನೊಮ್ಮೆ ಮರಳಿ ಬರುವಾಗ
ಬದುಕಿನ ಯಾವದಾದರೂ ಒಂದು ತಿರುವಿನಲ್ಲಿ
ಸತ್ಯವತಿಯಾಗಿ ಸತಿಯಾಗಿ
ನೀನು ಖಂಡಿತ ನನಗೆ ಸಿಕ್ಕುತ್ತಿ
ಹಳೆ ಪರಿಚಯ ಉಕ್ಕಿ ಬಂದು
ಮನದಲ್ಲಿ ಬಿಕ್ಕುತ್ತಿ
ಆಗ ನಿನ್ನ ವದನತುಂಬ
ವಿರಹದ ನೋವಿನ ಗೆರೆಗಳನ್ನು
ಬಿಸಿಯುಸಿರಿನಲ್ಲಿ
ಪಾಪಪ್ರಜ್ಞೆಯ ಬರೆಗಳನ್ನು
ನೋಡುವ ಇಚ್ಛೆ ನನಗಿರದು
ಅವೆಲ್ಲ ಹಿಂದೆ ನಡೆದ ಅಪರಾಧಗಳು
ಪ್ರೀತಿ-ನೀತಿಯಿರದ
ದಾಹ-ಮೋಹದ ಮಿಲನದಿಂದಾದ
ಪ್ರಮಾದಗಳು.
ಅವುಗಳಲ್ಲಿ ನಂಬಿಕೆ ನಿನಗೂ ಇರದು.
ಬಯಸಲಿಲ್ಲವೆ ನೀನು ರಾಣಿಯ ಪಟ್ಟ
ಹೊರಿಸಲಿಲ್ಲವೆ ಪರಿಪರಿಯ ಆಣೆಗಳ ಬೆಟ್ಟ
‘ಬೇಡುವುಡೆ ನೀವೆನ್ನ ಅಯ್ಯನಂ ಬೇಡಿ’ರೆಂದು
ನಾಚಿ ನನಗೆ ಹುಚ್ಚು ಹಿಡಿಸಲಿಲ್ಲವೆ,
ಆಗಲೆ ತಿಳಿಯಬೇಕಿತ್ತು
ನಿನ್ನಂತರಂಗದ ಹೋರೆಯನು
ಕಾಮ-ಪ್ರೇಮದ ಮೇರೆಯನು
ಗಂಡು ಎಂದೆಂದೂ ಹೆಣ್ಣಿಗೆ ಸೋತಿದ್ದಾನೆ
ಅಂತ-ದುರಂತಕ್ಕೆ ಬಲಿಯಾಗಿದ್ದಾನೆ
ಅದಕೆಂದೆ ನುಡಿವೆ
ಸಿಕ್ಕಿದರೆ ನೀನು ‘ಹಲೋ’ ಎಂದು ತೆರಳು
ತಡೆಯದಿರು, ನುಡಿಯದಿರು
ಮತ್ತೊಮ್ಮೆ ಕನ್ನೆಯಾಗಿ
ನನ್ನೆದುರು ಸುಳಿಯದಿರು
ನಾನು ಮತ್ತೊಮ್ಮೆ ಮಂಕಾಗಿ
ಮುಂದಿನ ಭಾರತಕ್ಕೆ ಕಾರಣವಾಗಲಾರೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...