ಹೆಣ್ಣು

ಹೆಣ್ಣು… ಹೊನ್ನು… ಮಣ್ಣು
ಕದನಕೆ ಮೂಲ ಎನುತಿರೆ
ಹೆಣ್ಣು… ಕುದುರೆ… ನೀರು…
ಅರಿಯರು ನೆಲೆಯ ಮೂಲನು
ಎನ್ನುವ… ಪ್ರಶ್ನೆಗೆ ಉತ್ತರವು
ಮರೀಚಿಕೆಯಲಿ ಮರೆಯಾಗುತಿಹುದು

ಅಂದು-ಪ್ರೀತಿ ಬಾನಂಗಳದಿ
ಜೋಡಿ ಹಕ್ಕಿಗಳು ನಾವಾಗಿ
ಪ್ರೀತಿಯ-ಬಲೆಯಲಿ…
ಚಿಲಿ-ಪಿಲಿ ಗಾನವ ಹಾಡುತ
ಅಪ್ಪುಗೆಯಲಿ ಮೈಮರೆತು…
ಎಚ್ಚರಗೊಂಡು ಮಿಸುಕುತಲಿ
ಅಧರಾಮೃತವು ವಿನಿಮಯಿಸುತಿರೆ
ಬಾಳಿನ… ಬೆಳದಿಂಗಳ ಬಾಲೆ.. ನೀ..
ಎಂದು ಹರುಷದಿ ತೇಲಿದ್ದ… ನನಗೆ…

ನಗುನಗುತಿರುವ ಪ್ರೀತಿ, ಇಂದು
ಸ್ನೇಹ-ಪ್ರೇಮ ಹುಸಿಯಾಗಿಸುತಲಿ
ಆಶೆಯ ಅರಗಿನ ಕೈಗೊಂಬೆಯಾಗಿ
ದೂರದಿ… ಇರುಳಿನ ಬೆಂಗಾಡಿನಲಿ
ಹಸಿರನರಸುತಲಿ… ಅವಳು…
ಮರೆಯಾದ… ಆ ಮಾಯಾಂಗಿನಿ
ಹೆಣ್ಣೆ… ಎನ್ನಲು… ಮನಸ್ಸು
ಲಜ್ಜೆಯಲಿ… ನಾಚುತ ಅದರುತಿದೆ
ಹೃದಯ ಬಿರಿದು ಕಂಪನಗೊಳ್ಳುತಿದೆ

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮ ಶೋಧನೆ
Next post ಸಸ್ಯ ಪ್ರಪಂಚದ ಸ್ಥೂಲ ನೋಟ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…