ಹೇಳಿಕೊಳ್ಳುವೆವು ಎದೆ ತಟ್ಟಿ

ಹೇಳಿಕೊಳ್ಳುವೆವು ಎದೆ ತಟ್ಟಿ
ಕನ್ನಡಿಗರು ನಾವು
ನಮಗೆ ಯಾರಿಗೂ ಬೇಡ
ಕನ್ನಡ ಮಾಧ್ಯಮವು
ಆದರೂ ಕನ್ನಡಿಗರು ನಾವು
ಯಾರಿಗೆ ಕಡಿಮೆ ನಾವು!

ಮಾಸ್ತಿ ಕುವೆಂಪು ಬಿ.ಎಂ.ಶ್ರೀ
ಯಾರಾದರೆ ಏನು?
ಗೋಕಾಕ್, ಮಹಿಷಿ ವರದಿ
ಏನು ಹೇಳಿದರೆ ಏನು?
ವಿವೇಕ ನಮಗೆ ಅಪಥ್ಯವು!
ಕಾನ್ವೆಂಟ್ ನಮಗೆ ಪಥ್ಯವು!

ರಾಜ್ಯೋತ್ಸವ ನಮ್ಮ ಹಬ್ಬ
ಅದಕೆ ಜೈಕಾರ
ತಿಂಗಳು ಪೂರ್ತಿ ಕನ್ನಡವು
ಇನ್ನೆಂಥ ಮಮಕಾರ?
ಉಳಿದ ತಿಂಗಳು ಹನ್ನೊಂದು
ಬರುವುದು ನವೆಂಬರ್ ಇನ್ನೊಂದು!

ಕೂಗಿ ಕೂಗಿ ಕನ್ನಡವ
ಕುಡಿದೆವು ಬಿಸ್ಲೆರಿ ನೀರು
ಜೊತೆಗೆ ಸಿಕ್ಕಿತು ಪುರಸ್ಕಾರ
ಮತ್ತೆ ಹೋರಾಟ ಬೋರು
ಇನ್ನು ಕನ್ನಡದ ಗತಿ ಏನು?
ಅದರ ಕತೆ…. ಯಾಕಿನ್ನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಟ್ಟಿ
Next post ತೊರೆಯಲಿ ಹೇಗೆ? ಮರೆಯಲಿ ಹೇಗೆ?

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys