ತೊರೆಯಲಿ ಹೇಗೆ? ಮರೆಯಲಿ ಹೇಗೆ?

ನನ್ನನ್ನು ಆರೈಸಿದ
ಈ ಊರು, ಹೊಲಮಾರು
ಆನಂದ ನೀಡಿದ ಗುಡಿ, ಗಿಡ, ಮರ
ಎತ್ತಿ ಆಡಿಸಿದ
ಮೂರ್ತಿಯಾಗಿ ರೂಪಿಸಿದ
ಜೀವಿಯಾಗಿ ಛಾಪಿಸಿದ ಜನ
ಜೊತೆ ಜೊತೆ ಬೆಳೆದ ಗೆಳೆಯ, ಗೆಳತಿಯರು
ಅವರ ಸಂಗಡ ಕಳೆದ ಮಧುರ ಕ್ಷಣಗಳು
ಉಂಡ, ಕಂಡ, ಸಿಹಿ-ಕಹಿ ಘಟನೆಗಳು
ನಾನು ಮುದ್ದಿಸಿ, ಮೇಯಿಸಿ ಬೆಳೆಸಿದ ದನಕರುಗಳು
ಖಾಳಜಿ ಮಾಡಿದ ತರುಲತೆಗಳು
ಎಲ್ಲಕ್ಕಿಂತ ಮಿಗಿಲಾಗಿ ನನ್ನ ಪ್ರೀತಿಯ ಮನೆ
ಬೆನ್ನು ಕಚ್ಚಿ ಬಂದ ಅಣ್ಣ, ತಮ್ಮ ಅಕ್ಕ ತಂಗಿಯರು
ಮುದ್ದು ಮಾಡುವ ಅಜ್ಜಿ ತಾತಂದಿರು
ದೀಪದಂತೆ ಅಂಗೈಯಲ್ಲಿಟ್ಟು ಕೊಂಡು ಪೋಷಣೆ ಮಾಡಿದ
ಅಪ್ಪ,ಅಮ್ಮ

ಓಹ್! ನನ್ನ ಚೇತನದ ಚೈತನ್ಯವಾದ
ಈ ದೈವ ತಾಣವನ್ನು
ತೊರೆಯಲಿ ಹೇಗೆ ?
ಮರೆಯಲಿ ಹೇಗೆ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಳಿಕೊಳ್ಳುವೆವು ಎದೆ ತಟ್ಟಿ
Next post ಆಸ್ತಿ – ನಾಸ್ತಿ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…