Home / ಕವನ / ಭಾವಗೀತೆ / ಅಪ್ಪ ಅಪ್ಪ

ಅಪ್ಪ ಅಪ್ಪ

ಮಗಳು: ಅಪ್ಪ ಅಪ್ಪ ಸ್ಕೂಲಿಗೆ ನಾನೆ
ಫಸ್ಟು ಕಣಪ್ಪ
ಬೇಕಿದ್ದರೆ ನೀ ಪ್ರಶ್ನೆ ಕೇಳು
ಉತ್ತರಿಸುವೆನಪ್ಪ
ನಾ ಉತ್ತರಿಸುವೆನಪ್ಪ
ನೀ ಪ್ರಶ್ನೆ ಕೇಳಪ್ಪ \\ಪಲ್ಲವಿ\\

ತಂದೆ: ಹಾಗೋ? (ಮಾತಿನ ಶೈಲಿಯಲ್ಲಿ)
ಕೋಳಿಯು ಮೊಟ್ಟೆ ಇಡುತ್ತೆ ಯಾಕೆ
ಹೇಳುವೆ ಏನಮ್ಮ?
ಮಗಳು: ಹಾಕಿದರೆ ಅದು ಒಡೆದ್ಹೋಗುತ್ತೆ
ಅದಕ್ಕೆ ಇಡುತ್ತೆ ಅಪ್ಪ
ತಂ: ಗಣೇಶನ ಕತೆಯಿಂದ ನೀನು
ತಿಳಿದೆ ಏನಮ್ಮ?
ಮ: ಸ್ನಾನದ ಕೋಣೆಗೆ ಬಾಗಿಲು ಇರುವುದು
ಅಗತ್ಯ ಇದೆಯಪ್ಪ
ಮಗಳು: ಅಪ್ಪ ಅಪ್ಪ ಸ್ಕೂಲಿಗೆ ನಾನೆ
ಫಸ್ಟು ಕಣಪ್ಪ
ಅದಕ್ಕೆ ಇನ್ನು ಪ್ರಶ್ನೆ ಕೇಳು
ಉತ್ತರಿಸುವೆನಪ್ಪ
ನಾ ಉತ್ತರಿಸುವೆನಪ್ಪ
ನೀ ಪ್ರಶ್ನೆ ಕೇಳಪ್ಪ \\೧\\

ತಂ: ಸರಿ. ಹಾಗಿದ್ರೆ . . . . (ಮಾತಿನ ಶೈಲಿಯಲ್ಲಿ)
ಮಗಳೆ, ಸಾರು ಸಪ್ಪೆಯಾದರೆ
ಹಾಕುವೆ ಏನಮ್ಮ?
ಮ: ಸಾರು ಸಪ್ಪೆಯಾದರೆ ಉಪ್ಪಿಗೆ
ಕೈ ಹಾಕುವೆನಪ್ಪ
ತಂ: ಅಕ್ಬರನು ಸಿಂಹಾಸನ ಏರಿ
ಏನು ಮಾಡಿದನು?
ಮ: ಮಾಡುವುದೇನು? ತಕ್ಷಣ ಅಲ್ಲಿ
ಕುಳಿತುಕೊಂಡನು

ಮ: ಅಪ್ಪ ಅಪ್ಪ ಇನ್ನು ಯಾವುದೆ
ಪ್ರಶ್ನೆ ಕೇಳಪ್ಪ
ಉತ್ತರ ಹೇಳುವ ನನಗಿಲ್ಲದ ಶ್ರಮ
ನಿನಗೆ ಯಾಕಪ್ಪ?
ತಂ: ಮಗಳೆ ಮಗಳೆ ನಿಜಕ್ಕು ನೀನೆ
ಬಹಳ ಬುದ್ಧಿವಂತೆ
ಥಟ್ಟಂತ ಉತ್ತರಿಸುವ ನಿನಗೆ
ಸಾಟಿ ಇಲ್ಲವಂತೆ- ಯಾರೂ
ಸಾಟಿ ಇಲ್ಲವಂತೆ! \\೨\\
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...