ಇಷ್ಟವಿಲ್ಲದಿದ್ದರುನೂ

ಇಷ್ಟವಿಲ್ಲದಿದ್ದರುನೂ
ನಮ್ಮ ಮಕ್ಕಳನ್ನು
ಇಂಗ್ಲೀಷ್ ಶಾಲೆಗಳಿಗೆ
ಸೇರಿಸುತ್ತಿದ್ದೇವೆ |
ಹೆಂಡತಿಯ ಒತ್ತಾಯಕ್ಕೋ,
ನೆರೆಮನೆಯವರ ಅಹಿತಕರ
ಜೀವನ ಸ್ಪರ್ಧೆಗೋ ಅಥವಾ ನಾವು
ಹೆಚ್ಚೆಂದು ತೊರಿಸಿಕೊಳ್ಳಲೋ||

ವಾಸ್ತವದಲಿ ಕಠಿಣವೆನಿಸಿದರೂ
ಕೈಯಲ್ಲಿ ಕಾಸಿಲ್ಲದಿದ್ದರೂ
ಹೇಗೋ ಹೆಣಗಾಡಿ ಜೀವತೇಯ್ದು
ಮಕ್ಕಳಿಗೆ ಶಿಕ್ಷಣಕೊಡಿಸಲು
ಇಡೀ ಜೀವಮಾನ ಮುಡಿಪಾಗಿಡುತ್ತೇವೆ|
ಇನ್ನು ಇದೆಲ್ಲದರ ಜೊತೆಗೆ
ವಸತಿಯುಕ್ತ ಅಂತರಾಷ್ಟ್ರೀಯ ಶಾಲೆಯ
ಅಂಧ ವ್ಯಾಮೋಹ
ಅಲ್ಲಿಗೆ ಸೇರಿಸಲು ದುಂಬಾಲು|
ಇದರ ಪರಿಣಾಮ ಮಕ್ಕಳಿಗೆ ಪೋಷಕರ
ಪ್ರೀತಿ ವಾತ್ಸಲ್ಯ ಕೊರತೆ, ಒಂಟಿತನ||

ವಿದ್ಯೆಯ ಮೂಲ ಉದ್ದೇಶವಾದರೂ ಏನು?
ಜ್ಞಾನ, ವಿಜ್ಞಾನ, ಸುಶಿಕ್ಷಣ,
ಸಂಸ್ಕಾರ, ಇತಿಹಾಸ ಹಾಗೂ
ನಮ್ಮ ದೇಶ ಭಾಷೆಯ ಶ್ರೀಮಂತಿಕೆ ಅಧ್ಯಯನ|
ಆದರೆ ಅದು ಆಗುತ್ತಿದೆಯೇ?
ಆದರೂನು ಅದು ಅನ್ಯ ಭಾಷೆಯಲ್ಲಿ
ಕಲಿಸಿದರೆ ಅದೆಷ್ಟು ಪರಿಪೂರ್ಣ?
ಇದನ್ನೇ ಮಾತೃ ಭಾಷೆಯಲ್ಲಿ ಸುಲಲಿತವಾಗಿ
ಮಕ್ಕಳಿಗೆ ಹೊರೆಯಾಗದಂತೆ|
ಕಡಿಮೆ ಕರ್ಚಿನಲ್ಲಿ ಎಲ್ಲರಿಗೂ
ಕೈಗೆಟುಕುವ ಬೆಲೆಯಲ್ಲಿ
ಮಾಡಿದರೆಷ್ಟು ಚೆನ್ನ|
ಇದಲ್ಲವೇ ಕನ್ನಡ ಉಳಿಸಿ ಬೆಳೆಸಿ
ಶ್ರೀಮಂತಗೊಳಿಸುವ ಮಾರ್ಗ||

ಅಂತಿಮವಾಗಿ ಹೊಟ್ಟೆಹೊರೆಯಲು
ಎಷ್ಟು ವಿದ್ಯೆ ಬೇಕು? ಪ್ರಪಂಚದ ಎಲ್ಲಾ
ವಿದ್ಯೆಯನ್ನು ಒಬ್ಬರೇ ಕಲಿತು,
ಒಬ್ಬನೇ ಎಲ್ಲಾ ಕೆಲಸ ನಿರ್ವಹಿಸಲು ಸಾಧ್ಯವೇ?|
ಎಲ್ಲರು ಅವರವರ ಯೋಗ್ಯತಾನುಸಾರ
ಕೈಲಾಗುವದನ್ನು ಮಾಡಿದರೆ
ಲೋಕಕಲ್ಯಾಣ ಸಾಧ್ಯ|
ರಾಷ್ಟ್ರಮಟ್ಟದಲಿ ಅತೀ ಹೆಚ್ಚು
ಹೆಸರು ಮಾಡಿರುವವರೆಲ್ಲರೂ
ಮಾತೃ ಭಾಷೆಯಲ್ಲಿ ಹಾಗೂ
ಸರ್ಕಾರಿ ಶಾಲೆಯಲ್ಲಿ ಕಲಿತವರೇ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಳಿ ಕಣ್ಣೀರು
Next post ಅವತಾರಿ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…