Home / ಕವನ / ಕವಿತೆ / ಇಷ್ಟವಿಲ್ಲದಿದ್ದರುನೂ

ಇಷ್ಟವಿಲ್ಲದಿದ್ದರುನೂ

ಇಷ್ಟವಿಲ್ಲದಿದ್ದರುನೂ
ನಮ್ಮ ಮಕ್ಕಳನ್ನು
ಇಂಗ್ಲೀಷ್ ಶಾಲೆಗಳಿಗೆ
ಸೇರಿಸುತ್ತಿದ್ದೇವೆ |
ಹೆಂಡತಿಯ ಒತ್ತಾಯಕ್ಕೋ,
ನೆರೆಮನೆಯವರ ಅಹಿತಕರ
ಜೀವನ ಸ್ಪರ್ಧೆಗೋ ಅಥವಾ ನಾವು
ಹೆಚ್ಚೆಂದು ತೊರಿಸಿಕೊಳ್ಳಲೋ||

ವಾಸ್ತವದಲಿ ಕಠಿಣವೆನಿಸಿದರೂ
ಕೈಯಲ್ಲಿ ಕಾಸಿಲ್ಲದಿದ್ದರೂ
ಹೇಗೋ ಹೆಣಗಾಡಿ ಜೀವತೇಯ್ದು
ಮಕ್ಕಳಿಗೆ ಶಿಕ್ಷಣಕೊಡಿಸಲು
ಇಡೀ ಜೀವಮಾನ ಮುಡಿಪಾಗಿಡುತ್ತೇವೆ|
ಇನ್ನು ಇದೆಲ್ಲದರ ಜೊತೆಗೆ
ವಸತಿಯುಕ್ತ ಅಂತರಾಷ್ಟ್ರೀಯ ಶಾಲೆಯ
ಅಂಧ ವ್ಯಾಮೋಹ
ಅಲ್ಲಿಗೆ ಸೇರಿಸಲು ದುಂಬಾಲು|
ಇದರ ಪರಿಣಾಮ ಮಕ್ಕಳಿಗೆ ಪೋಷಕರ
ಪ್ರೀತಿ ವಾತ್ಸಲ್ಯ ಕೊರತೆ, ಒಂಟಿತನ||

ವಿದ್ಯೆಯ ಮೂಲ ಉದ್ದೇಶವಾದರೂ ಏನು?
ಜ್ಞಾನ, ವಿಜ್ಞಾನ, ಸುಶಿಕ್ಷಣ,
ಸಂಸ್ಕಾರ, ಇತಿಹಾಸ ಹಾಗೂ
ನಮ್ಮ ದೇಶ ಭಾಷೆಯ ಶ್ರೀಮಂತಿಕೆ ಅಧ್ಯಯನ|
ಆದರೆ ಅದು ಆಗುತ್ತಿದೆಯೇ?
ಆದರೂನು ಅದು ಅನ್ಯ ಭಾಷೆಯಲ್ಲಿ
ಕಲಿಸಿದರೆ ಅದೆಷ್ಟು ಪರಿಪೂರ್ಣ?
ಇದನ್ನೇ ಮಾತೃ ಭಾಷೆಯಲ್ಲಿ ಸುಲಲಿತವಾಗಿ
ಮಕ್ಕಳಿಗೆ ಹೊರೆಯಾಗದಂತೆ|
ಕಡಿಮೆ ಕರ್ಚಿನಲ್ಲಿ ಎಲ್ಲರಿಗೂ
ಕೈಗೆಟುಕುವ ಬೆಲೆಯಲ್ಲಿ
ಮಾಡಿದರೆಷ್ಟು ಚೆನ್ನ|
ಇದಲ್ಲವೇ ಕನ್ನಡ ಉಳಿಸಿ ಬೆಳೆಸಿ
ಶ್ರೀಮಂತಗೊಳಿಸುವ ಮಾರ್ಗ||

ಅಂತಿಮವಾಗಿ ಹೊಟ್ಟೆಹೊರೆಯಲು
ಎಷ್ಟು ವಿದ್ಯೆ ಬೇಕು? ಪ್ರಪಂಚದ ಎಲ್ಲಾ
ವಿದ್ಯೆಯನ್ನು ಒಬ್ಬರೇ ಕಲಿತು,
ಒಬ್ಬನೇ ಎಲ್ಲಾ ಕೆಲಸ ನಿರ್ವಹಿಸಲು ಸಾಧ್ಯವೇ?|
ಎಲ್ಲರು ಅವರವರ ಯೋಗ್ಯತಾನುಸಾರ
ಕೈಲಾಗುವದನ್ನು ಮಾಡಿದರೆ
ಲೋಕಕಲ್ಯಾಣ ಸಾಧ್ಯ|
ರಾಷ್ಟ್ರಮಟ್ಟದಲಿ ಅತೀ ಹೆಚ್ಚು
ಹೆಸರು ಮಾಡಿರುವವರೆಲ್ಲರೂ
ಮಾತೃ ಭಾಷೆಯಲ್ಲಿ ಹಾಗೂ
ಸರ್ಕಾರಿ ಶಾಲೆಯಲ್ಲಿ ಕಲಿತವರೇ||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...