ಇಷ್ಟವಿಲ್ಲದಿದ್ದರುನೂ

ಇಷ್ಟವಿಲ್ಲದಿದ್ದರುನೂ
ನಮ್ಮ ಮಕ್ಕಳನ್ನು
ಇಂಗ್ಲೀಷ್ ಶಾಲೆಗಳಿಗೆ
ಸೇರಿಸುತ್ತಿದ್ದೇವೆ |
ಹೆಂಡತಿಯ ಒತ್ತಾಯಕ್ಕೋ,
ನೆರೆಮನೆಯವರ ಅಹಿತಕರ
ಜೀವನ ಸ್ಪರ್ಧೆಗೋ ಅಥವಾ ನಾವು
ಹೆಚ್ಚೆಂದು ತೊರಿಸಿಕೊಳ್ಳಲೋ||

ವಾಸ್ತವದಲಿ ಕಠಿಣವೆನಿಸಿದರೂ
ಕೈಯಲ್ಲಿ ಕಾಸಿಲ್ಲದಿದ್ದರೂ
ಹೇಗೋ ಹೆಣಗಾಡಿ ಜೀವತೇಯ್ದು
ಮಕ್ಕಳಿಗೆ ಶಿಕ್ಷಣಕೊಡಿಸಲು
ಇಡೀ ಜೀವಮಾನ ಮುಡಿಪಾಗಿಡುತ್ತೇವೆ|
ಇನ್ನು ಇದೆಲ್ಲದರ ಜೊತೆಗೆ
ವಸತಿಯುಕ್ತ ಅಂತರಾಷ್ಟ್ರೀಯ ಶಾಲೆಯ
ಅಂಧ ವ್ಯಾಮೋಹ
ಅಲ್ಲಿಗೆ ಸೇರಿಸಲು ದುಂಬಾಲು|
ಇದರ ಪರಿಣಾಮ ಮಕ್ಕಳಿಗೆ ಪೋಷಕರ
ಪ್ರೀತಿ ವಾತ್ಸಲ್ಯ ಕೊರತೆ, ಒಂಟಿತನ||

ವಿದ್ಯೆಯ ಮೂಲ ಉದ್ದೇಶವಾದರೂ ಏನು?
ಜ್ಞಾನ, ವಿಜ್ಞಾನ, ಸುಶಿಕ್ಷಣ,
ಸಂಸ್ಕಾರ, ಇತಿಹಾಸ ಹಾಗೂ
ನಮ್ಮ ದೇಶ ಭಾಷೆಯ ಶ್ರೀಮಂತಿಕೆ ಅಧ್ಯಯನ|
ಆದರೆ ಅದು ಆಗುತ್ತಿದೆಯೇ?
ಆದರೂನು ಅದು ಅನ್ಯ ಭಾಷೆಯಲ್ಲಿ
ಕಲಿಸಿದರೆ ಅದೆಷ್ಟು ಪರಿಪೂರ್ಣ?
ಇದನ್ನೇ ಮಾತೃ ಭಾಷೆಯಲ್ಲಿ ಸುಲಲಿತವಾಗಿ
ಮಕ್ಕಳಿಗೆ ಹೊರೆಯಾಗದಂತೆ|
ಕಡಿಮೆ ಕರ್ಚಿನಲ್ಲಿ ಎಲ್ಲರಿಗೂ
ಕೈಗೆಟುಕುವ ಬೆಲೆಯಲ್ಲಿ
ಮಾಡಿದರೆಷ್ಟು ಚೆನ್ನ|
ಇದಲ್ಲವೇ ಕನ್ನಡ ಉಳಿಸಿ ಬೆಳೆಸಿ
ಶ್ರೀಮಂತಗೊಳಿಸುವ ಮಾರ್ಗ||

ಅಂತಿಮವಾಗಿ ಹೊಟ್ಟೆಹೊರೆಯಲು
ಎಷ್ಟು ವಿದ್ಯೆ ಬೇಕು? ಪ್ರಪಂಚದ ಎಲ್ಲಾ
ವಿದ್ಯೆಯನ್ನು ಒಬ್ಬರೇ ಕಲಿತು,
ಒಬ್ಬನೇ ಎಲ್ಲಾ ಕೆಲಸ ನಿರ್ವಹಿಸಲು ಸಾಧ್ಯವೇ?|
ಎಲ್ಲರು ಅವರವರ ಯೋಗ್ಯತಾನುಸಾರ
ಕೈಲಾಗುವದನ್ನು ಮಾಡಿದರೆ
ಲೋಕಕಲ್ಯಾಣ ಸಾಧ್ಯ|
ರಾಷ್ಟ್ರಮಟ್ಟದಲಿ ಅತೀ ಹೆಚ್ಚು
ಹೆಸರು ಮಾಡಿರುವವರೆಲ್ಲರೂ
ಮಾತೃ ಭಾಷೆಯಲ್ಲಿ ಹಾಗೂ
ಸರ್ಕಾರಿ ಶಾಲೆಯಲ್ಲಿ ಕಲಿತವರೇ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಳಿ ಕಣ್ಣೀರು
Next post ಅವತಾರಿ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…