Home / ಕವನ / ಕವಿತೆ / ಇಷ್ಟವಿಲ್ಲದಿದ್ದರುನೂ

ಇಷ್ಟವಿಲ್ಲದಿದ್ದರುನೂ

ಇಷ್ಟವಿಲ್ಲದಿದ್ದರುನೂ
ನಮ್ಮ ಮಕ್ಕಳನ್ನು
ಇಂಗ್ಲೀಷ್ ಶಾಲೆಗಳಿಗೆ
ಸೇರಿಸುತ್ತಿದ್ದೇವೆ |
ಹೆಂಡತಿಯ ಒತ್ತಾಯಕ್ಕೋ,
ನೆರೆಮನೆಯವರ ಅಹಿತಕರ
ಜೀವನ ಸ್ಪರ್ಧೆಗೋ ಅಥವಾ ನಾವು
ಹೆಚ್ಚೆಂದು ತೊರಿಸಿಕೊಳ್ಳಲೋ||

ವಾಸ್ತವದಲಿ ಕಠಿಣವೆನಿಸಿದರೂ
ಕೈಯಲ್ಲಿ ಕಾಸಿಲ್ಲದಿದ್ದರೂ
ಹೇಗೋ ಹೆಣಗಾಡಿ ಜೀವತೇಯ್ದು
ಮಕ್ಕಳಿಗೆ ಶಿಕ್ಷಣಕೊಡಿಸಲು
ಇಡೀ ಜೀವಮಾನ ಮುಡಿಪಾಗಿಡುತ್ತೇವೆ|
ಇನ್ನು ಇದೆಲ್ಲದರ ಜೊತೆಗೆ
ವಸತಿಯುಕ್ತ ಅಂತರಾಷ್ಟ್ರೀಯ ಶಾಲೆಯ
ಅಂಧ ವ್ಯಾಮೋಹ
ಅಲ್ಲಿಗೆ ಸೇರಿಸಲು ದುಂಬಾಲು|
ಇದರ ಪರಿಣಾಮ ಮಕ್ಕಳಿಗೆ ಪೋಷಕರ
ಪ್ರೀತಿ ವಾತ್ಸಲ್ಯ ಕೊರತೆ, ಒಂಟಿತನ||

ವಿದ್ಯೆಯ ಮೂಲ ಉದ್ದೇಶವಾದರೂ ಏನು?
ಜ್ಞಾನ, ವಿಜ್ಞಾನ, ಸುಶಿಕ್ಷಣ,
ಸಂಸ್ಕಾರ, ಇತಿಹಾಸ ಹಾಗೂ
ನಮ್ಮ ದೇಶ ಭಾಷೆಯ ಶ್ರೀಮಂತಿಕೆ ಅಧ್ಯಯನ|
ಆದರೆ ಅದು ಆಗುತ್ತಿದೆಯೇ?
ಆದರೂನು ಅದು ಅನ್ಯ ಭಾಷೆಯಲ್ಲಿ
ಕಲಿಸಿದರೆ ಅದೆಷ್ಟು ಪರಿಪೂರ್ಣ?
ಇದನ್ನೇ ಮಾತೃ ಭಾಷೆಯಲ್ಲಿ ಸುಲಲಿತವಾಗಿ
ಮಕ್ಕಳಿಗೆ ಹೊರೆಯಾಗದಂತೆ|
ಕಡಿಮೆ ಕರ್ಚಿನಲ್ಲಿ ಎಲ್ಲರಿಗೂ
ಕೈಗೆಟುಕುವ ಬೆಲೆಯಲ್ಲಿ
ಮಾಡಿದರೆಷ್ಟು ಚೆನ್ನ|
ಇದಲ್ಲವೇ ಕನ್ನಡ ಉಳಿಸಿ ಬೆಳೆಸಿ
ಶ್ರೀಮಂತಗೊಳಿಸುವ ಮಾರ್ಗ||

ಅಂತಿಮವಾಗಿ ಹೊಟ್ಟೆಹೊರೆಯಲು
ಎಷ್ಟು ವಿದ್ಯೆ ಬೇಕು? ಪ್ರಪಂಚದ ಎಲ್ಲಾ
ವಿದ್ಯೆಯನ್ನು ಒಬ್ಬರೇ ಕಲಿತು,
ಒಬ್ಬನೇ ಎಲ್ಲಾ ಕೆಲಸ ನಿರ್ವಹಿಸಲು ಸಾಧ್ಯವೇ?|
ಎಲ್ಲರು ಅವರವರ ಯೋಗ್ಯತಾನುಸಾರ
ಕೈಲಾಗುವದನ್ನು ಮಾಡಿದರೆ
ಲೋಕಕಲ್ಯಾಣ ಸಾಧ್ಯ|
ರಾಷ್ಟ್ರಮಟ್ಟದಲಿ ಅತೀ ಹೆಚ್ಚು
ಹೆಸರು ಮಾಡಿರುವವರೆಲ್ಲರೂ
ಮಾತೃ ಭಾಷೆಯಲ್ಲಿ ಹಾಗೂ
ಸರ್ಕಾರಿ ಶಾಲೆಯಲ್ಲಿ ಕಲಿತವರೇ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...