ಅವತಾರಿ

ರಾಮಕೃಷ್ಣ ಪರಮಹಂಸರೆಂದರೆ ಋಷಿ
ಅವರನ್ನು ಅನುಭವಿಸಿದರೆ ಖುಷಿ
ಅವರ ಬಾಳೆ ಒಂದು ಪವಾಡ
ನಿತ್ಯ ಅವರನ್ನೆ ನೀನು ಪಾಡ

ಜಗನ್ಮಾತೆಯ ಸೇವೆಯಲ್ಲಿ ತಲ್ಲೀನರು
ಅವಳ ಮಹಿಮೆಗಳ ಅರಗಿಸಿಕೊಂಡವರು
ಅವಳೊಂದಿಗೆ ನಿಂತು ಮಾತನಾಡಿದವರು
ಅವಳ ಆಜ್ಞೆಯಂತೆ ಬಾಳು ಸವೆಸಿದವರು

ಸಾಕಾರ ನಿರಾಕಾರಗಳೆಲ್ಲ ರೂಢಿಸಿಕೊಂಡವರು
ನಿರ್ವಿಕಲ್ಪ ಸಮಾಧಿ ಪಡೆದುಕೊಂಡವರು
ಪೈಗಂಬರ್‌ ಯೇಸುರನ್ನು ತಾ ಧರಿಸಿದವರು
ಹಿಂದೂ ಧರ್ಮವೇ ಉದ್ಧಾರ ಮಾಡಿದವರು

ಧೀಮಂತ ಶಿಷ್ಯಕೋಟಿ ಸೃಷ್ಟಿಸಿದವರು
ಭಾವಗಳಿಂದ ಪರಿಪೂರ್ಣತೆ ದರ್ಶಿಸಿದವರು
ಧ್ಯಾನ ಸಮಾಧಿಗಳಿಂದ ಸಾಧಿಸಿದವರು
ಹಗಲಿರುಳು ದೇವರಲ್ಲಿ ಲೀನವಾದವರು

ಅವತಾರ ಮಹಾನ ಮೂರ್ತಿ ವೆತ್ತವರು
ಪತ್ನಿಯನ್ನೆ ದೇವಿಯಾಗಿ ಸ್ವೀಕರಿಸಿದವರು
ತನ್ನದೆಲ್ಲವೂ ವಿಶ್ವಕ್ಕೆ ಧಾರೆಯೆರೆದವರು
ಮನುಕುಲಕ್ಕೆ ಮಾಣಿಕ್ಯ ವಿಠಲರಾದರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಷ್ಟವಿಲ್ಲದಿದ್ದರುನೂ
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೦ನೆಯ ಖಂಡ – ಉಪಹಾಸಗಳ ಉಪಯುಕ್ತತೆ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…