ನಿಂದಿಸದಿರು ನೀ ಕಾಲವನು

ನಿಂದಿಸದಿರು ನೀ ಕಾಲವನು
ವಿಧಿಯ ನೆಪಮಾಡಿ|
ದೂಷಿಸದಿರು ನೀ ಈ ಜನ್ಮವನು
ಹಿಂದಿನ ಕಾಲಕರ್ಮನು ಹಗೆಮಾಡಿ||

ಕಠಿಣ ಪರಿಶ್ರಮವಿಲ್ಲದೆ
ಬರಿಯ ಅದೃಷ್ಟವನೇ ನಂಬಿ
ಬದುಕಲು ಸಾದ್ಯವೇನು?|
ಬಿಲ್ಲನೆತ್ತಿ ಬಾಣವ ಹೂಡದೆ
ಬರೀ ಠೇಂಕರಿಸಿದರೆ
ಗುರಿಯತಲುಪಲು ಸಾಧ್ಯವೇನು?||

ಉತ್ತಿ ಬಿತ್ತಿ ಬೆಳೆಸಿ ಇನ್ನೇನು ಫಲ
ಬಂದೇಬಿಟ್ಟಿತು ಎನ್ನುವಷ್ಟರಲ್ಲಿ ಮಳೆಹೋಗಿ
ಕೈಯಿಗೆ ಬಂದ ತುತ್ತು ಬಾಯಿಗೆ ಬಾರದಿರುವಾಗ|
ದುಡಿದು ಶ್ರಮವಹಿಸಿ ಗಳಿಸಿದರೂ
ದಕ್ಕುವದೇ ದುರ್ಲಭವಾಗಿರುವಾಗ|
ದುಡಿಯದಲೇ ಬಯಸಿದರೆ ಭಾಗ್ಯವ
ಬರಲದುವೇ ತಾತನ ಮನೆಯ ಸ್ವತ್ತೇ?||

ಬೆವರಿಳಿಸಿ ಬಸವಳಿದು ಭೂತಾಯಿಯ
ಸೇವೆಮಾಡಿದರೂ ತುತ್ತು ಅನ್ನಕೆ
ಅದೆಷ್ಟೋ ದಿನ ಕಾಯಬೇಕು|
ಅಂತದರಲಿ ನೀ ಕೂತಲ್ಲಿ ಎಲ್ಲವನು
ಬಯಸಿ ಬೇಸರಿಸಿದರೆ
ನಿನ್ನಕಡೆ ನೋಡುವರಾರು?
ಬಿಡು ಚಿಂತಿಸುವುದನು
ಬಿಡು ಕಾಲ, ಕರ್ಮವ ನಿಂದಿಸುವುದನು|
ನಡೆಮುಂದೆ ಕಾಲ ದಾರಿತೋರಿದೆಡೆ
ಮುಂದಿರದು ಭಯದ ಅಡೆತಡೆಯ ಗೋಡೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಗ್ನ ಹೃದಯಿ
Next post ನರಜನ್ಮ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys