ನಿಂದಿಸದಿರು ನೀ ಕಾಲವನು

ನಿಂದಿಸದಿರು ನೀ ಕಾಲವನು
ವಿಧಿಯ ನೆಪಮಾಡಿ|
ದೂಷಿಸದಿರು ನೀ ಈ ಜನ್ಮವನು
ಹಿಂದಿನ ಕಾಲಕರ್ಮನು ಹಗೆಮಾಡಿ||

ಕಠಿಣ ಪರಿಶ್ರಮವಿಲ್ಲದೆ
ಬರಿಯ ಅದೃಷ್ಟವನೇ ನಂಬಿ
ಬದುಕಲು ಸಾದ್ಯವೇನು?|
ಬಿಲ್ಲನೆತ್ತಿ ಬಾಣವ ಹೂಡದೆ
ಬರೀ ಠೇಂಕರಿಸಿದರೆ
ಗುರಿಯತಲುಪಲು ಸಾಧ್ಯವೇನು?||

ಉತ್ತಿ ಬಿತ್ತಿ ಬೆಳೆಸಿ ಇನ್ನೇನು ಫಲ
ಬಂದೇಬಿಟ್ಟಿತು ಎನ್ನುವಷ್ಟರಲ್ಲಿ ಮಳೆಹೋಗಿ
ಕೈಯಿಗೆ ಬಂದ ತುತ್ತು ಬಾಯಿಗೆ ಬಾರದಿರುವಾಗ|
ದುಡಿದು ಶ್ರಮವಹಿಸಿ ಗಳಿಸಿದರೂ
ದಕ್ಕುವದೇ ದುರ್ಲಭವಾಗಿರುವಾಗ|
ದುಡಿಯದಲೇ ಬಯಸಿದರೆ ಭಾಗ್ಯವ
ಬರಲದುವೇ ತಾತನ ಮನೆಯ ಸ್ವತ್ತೇ?||

ಬೆವರಿಳಿಸಿ ಬಸವಳಿದು ಭೂತಾಯಿಯ
ಸೇವೆಮಾಡಿದರೂ ತುತ್ತು ಅನ್ನಕೆ
ಅದೆಷ್ಟೋ ದಿನ ಕಾಯಬೇಕು|
ಅಂತದರಲಿ ನೀ ಕೂತಲ್ಲಿ ಎಲ್ಲವನು
ಬಯಸಿ ಬೇಸರಿಸಿದರೆ
ನಿನ್ನಕಡೆ ನೋಡುವರಾರು?
ಬಿಡು ಚಿಂತಿಸುವುದನು
ಬಿಡು ಕಾಲ, ಕರ್ಮವ ನಿಂದಿಸುವುದನು|
ನಡೆಮುಂದೆ ಕಾಲ ದಾರಿತೋರಿದೆಡೆ
ಮುಂದಿರದು ಭಯದ ಅಡೆತಡೆಯ ಗೋಡೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಗ್ನ ಹೃದಯಿ
Next post ನರಜನ್ಮ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…